30 C
Mumbai
April 24, 2026
Mumbai News Kannada
ಸುದ್ದಿ

ಮುಂಬೈ – ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ವಿಸ್ತರಿಸುವ ಸಾಧ್ಯತೆ





ಭಾರತೀಯ ರೈಲ್ವೆ, ಮುಂಬೈ ಮತ್ತು ಮಂಗಳೂರನ್ನು ನೇರವಾಗಿ ಸಂಪರ್ಕಿಸುವ ಹೊಸ ವಂದೇ ಭಾರತ್ ರೈಲನ್ನು ಪರಿಚಯಿಸಲು ತಯಾರಾಗಿದೆ. ಈಗ ಅಸ್ತಿತ್ವದಲ್ಲಿರುವ ಮುಂಬೈ – ಗೋವಾ ಮತ್ತು ಮಂಗಳೂರು – ಗೋವಾ ಒಂದೇ ಭಾರತ್ ಮಾರ್ಗವನ್ನು ವಿಲೀನಗೊಳಿಸುವ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರಯಾಣದ ಸಮಯವನ್ನು ಕಡಿಮೆಮಾಡಲಿದೆ.
ಪ್ರಸ್ತುತ ಮುಂಬೈ ಗೋವಾ ವಂದೇ ಭಾರತ್ ರೈಲು ಮುಂಬೈಯಿಂದ ಬೆಳಗ್ಗೆ 5:25ಕ್ಕೆ ಹೊರಟು ಮಧ್ಯಾಹ್ನ 1.10ಕ್ಕೆ ಗೋವಾ ತಲುಪುತ್ತದೆ. ಹೊಸ ಯೋಜನೆ ಅಡಿಯಲ್ಲಿ ರೈಲು ಮುಂದುವರಿದು ಸಂಜೆ 6 ಗಂಟೆಗೆ ಮಂಗಳೂರು ತಲಪಲಿದೆ. ಅದೇ ರೀತಿ ಪ್ರಸ್ತುತ ಬೆಳಿಗ್ಗೆ 8:30 ಕ್ಕೆ ಹೊರಟು 1.10ಕ್ಕೆ ಗೋವಾ ತಲುಪುವ ಮಂಗಳೂರು- ಗೋವಾ ವಂದೇ ಭಾರತ್ ರೈಲು ಮುಂಬೈಗೆ ವಿಸ್ತರಿಸಲ್ಪಟ್ಟು ರಾತ್ರಿ 9ರ ತನಕ ಮುಂಬೈ ತಲುಪುತ್ತದೆ.
ಈ ಮಾರ್ಗ ವಿಸ್ತರಣೆಗೆ ಒಂದು ಪ್ರಮುಖ ಕಾರಣವೆಂದರೆ ಮಂಗಳೂರು – ಗೋವಾ ವಂದೇ ಭಾರತ್ ರೈಲು ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದು, ವರದಿಗಳ ಪ್ರಕಾರ ಪ್ರಯಾಣಿಕರ ಸಂಖ್ಯೆ ಶೇಕಡ 40ಕ್ಕಿಂತ ಕಡಿಮೆ ಇದ್ದು, ಇದು ಅತ್ಯಂತ ಕಡಿಮೆ ಬಳಕೆಯಲ್ಲಿರುವ ವಂದೇ ಭಾರತ್ ಸೇವೆಗಳಲ್ಲಿ ಒಂದಾಗಿದೆ.
ಈ ಯೋಜನೆಯಡಿ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭವಾದರೆ, ಪ್ರಯಾಣಕರು ಕೇವಲ 12 ಗಂಟೆಗಳಲ್ಲಿ ಮುಂಬೈ ಅಥವಾ ಮಂಗಳೂರು ತಲುಪಬಹುದು.
ಈ ಪ್ರಾಸ್ತಾವಿತ ವಿಸ್ತರಣೆಯು ಯಶಸ್ವಿಯಾದರೆ ಮುಂಬೈ- ಮಂಗಳೂರು ವಂದೇ ಭಾರತ್ ಕೊಂಕಣ ಕರಾವಳಿಯ ಪ್ರಯಾಣಿಕರಿಗೆ ವೇಗವಾದ ಮತ್ತು ಹೆಚ್ಚು ಪರಿಣಾಮಕಾರಿ ಪ್ರಯಾಣದ ಆಯ್ಕೆಯನ್ನು ಒದಗಿಸಬಹುದು. ಅದಾಗ್ಯೂ, ವಿಸ್ತೃತ ಮಾರ್ಗವು ಹೆಚ್ಚಿನ ಜನದಟ್ಟಣೆಯನ್ನು ಉಳಿಸಬಹುದೇ, ಮತ್ತು ಕಾರ್ಯಚರಣೆಯ ಅಡೆತಡೆಗಳನ್ನು ತಪ್ಪಿಸಬಹುದೇ ಎಂಬುದು ನಿಜವಾದ ಪರೀಕ್ಷೆಯಾಗಿದೆ.



Related posts

ಮಧುರಾ ಹರೀಶ್ ಪಾಂಡು ಶೆಟ್ಟಿ ಅವರು ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ ಸ್ಪರ್ಧೆಯಲ್ಲಿ ಮಿಸೆಸ್ ಟ್ಯಾಲೆಂಟೆಡ್ ಮತ್ತು 4 ನೇ ರನ್ನರ್-ಅಪ್ ಯಗಿ ನಾಮನಿರ್ದೇಶನ ಗೊಂಡಿದ್ದಾರೆ.

Mumbai News Desk

ಮಂಗಳೂರು : ಮೂಲತ್ವ ಫೌಂಡೇಶನ್ ಮತ್ತು ವಿವಿಧ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಾದಕ ದ್ರವ್ಯ ವಿರೋಧಿ ಅಭಿಯಾನ

Mumbai News Desk

ಬೊಳ್ನಾಡು ಶ್ರೀ ಚಿರುಂಭ ಭಗವತೀ ಕ್ಷೇತ್ರ, ದ್ವಜ ಸ್ತಂಭ (ಕೊಡಿಮರ) ಪ್ರತಿಷ್ಠಾಪನೆ

Mumbai News Desk

ವಿಶ್ವ ಭಾರತಿ ಫ್ರೆಂಡ್ ಸರ್ಕಲ್ (ರಿ) ಕೋಡಿಕಲ್ : ಶಾಲೆಗೆ ಅನ್ನ ಬಡಿಸುವ ಟ್ರಾಲಿ ವಿತರಣೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ,  ಡಿ.1 – ವಿಶ್ವನಾಥ ಯು. ಮಾಡಾ ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ

Mumbai News Desk