September 6, 2026
Mumbai News Kannada
ಸುದ್ದಿ

ಮಂಗಳೂರಿಗೊಂದು ಹೊಸ ರಂಗ ಮಂದಿರ – ಕಲಾಗ್ರಾಮದ ಉದ್ಘಾಟನಾ ಸಮಾರಂಭ





ಮಂಗಳೂರು: ಕಲಾಭಿ(ರಿ) ಮತ್ತು ಅರೆಹೊಳೆ ಪ್ರತಿಷ್ಠಾನವು ಜಂಟಿಯಾಗಿ ಮಂಗಳೂರಿನ ಬೊಂದೆಲ್ ನಲ್ಲಿ ಕಲಾಗ್ರಾಮ ಎಂಬ ನೂತನ ಕಲಾ ವೇದಿಕೆಯ ಉದ್ಘಾಟನೆಗೆ ಸಜ್ಜಾಗಿದೆ. ಈ ರಂಗ ಮಂದಿರವು ಕಲಾತ್ಮಕ ಪ್ರತಿಭೆಗಳಿಗೆ ಹೊಸ ತಳಹದಿಯನ್ನು ಒದಗಿಸುವುದರ ಜೊತೆಗೆ, ನಾಟಕ, ಯಕ್ಷಗಾನ, ಜನಪದ ಕಲೆ, ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಮಹತ್ವದ ಕೇಂದ್ರವಾಗಿ ರೂಪುಗೊಳ್ಳಲಿದೆ.

ಇದರ ಉದ್ಘಾಟನಾ ಸಮಾರಂಭವು ವಿಶ್ವ ರಂಗಭೂಮಿ ದಿನವಾದ ಮಾರ್ಚ್ 27, 2025, ಗುರುವಾರದಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಲಾಭಿ(ರಿ) ತಂಡದ ಕಲಾವಿದರಿಂದ ವಿಭಿನ್ನ ರಂಗ ಪ್ರಯೋಗವಾದ ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಈಗಾಗಲೇ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ನಾಟಕೋತ್ಸವಗಳ್ಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ನೂತನ ಕಲಾ ಕೇಂದ್ರವು ಯುವ ಕಲಾ ಪ್ರತಿಭೆಗಳಿಗೆ ಒಟ್ಟಾರೆಯಾಗಿ ಪ್ರೋತ್ಸಾಹ ನೀಡಲು, ರಂಗಭೂಮಿ ಅಭ್ಯಾಸದ ಹೊಸ ಆಯಾಮಗಳನ್ನು ಅನ್ವೇಷಿಸಿ ಪ್ರಾಯೋಗಿಸಲು ಹಾಗೂ ಕಲಾತ್ಮಕ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗಲಿದೆ.



Related posts

ಪುಣೆ ಶ್ರೀ ಗುರುದೇವ ಸೇವಾ ಬಳಗ 20 ನೆ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ,  ಡಿ.1 – ವಿಶ್ವನಾಥ ಯು. ಮಾಡಾ ನಿಧನಕ್ಕೆ ಶ್ರದ್ದಾಂಜಲಿ ಸಭೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (18/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ತಂತ್ರಜ್ಞಾನ ಮತ್ತು ಭರವಸೆಯ ಸಮ್ಮಿಲನ: ಭಾರತ್ ಬ್ಯಾಂಕ್‌ನಿಂದ ಹೊಸ ನೆಟ್ ಬ್ಯಾಂಕಿಂಗ್ ಅಪ್ಲಿಕೇಶನ್ ಸೇವೆಗಳಿಗೆ ಚಾಲನೆ.

Mumbai News Desk

2024 ಸಾಲಿನ 12ನೇ ತರಗತಿಯ ಫಲಿತಾಂಶ – ಜೀವಿತ್ ಬಿ ಕುಲಾಲ್  88.50 ಅಂಕ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಲಾಸ್ಯಾ ಶಂಕರ ಶೆಟ್ಟಿ ಶೇ. 90.80, ಲಿಖಿತ್ ಶಂಕರ್ ಶೆಟ್ಟಿಗೆ ಶೇ. 85 ಅಂಕ.

Mumbai News Desk