July 23, 2026
Mumbai News Kannada
ಸುದ್ದಿ

ಮಂಗಳೂರಿಗೊಂದು ಹೊಸ ರಂಗ ಮಂದಿರ – ಕಲಾಗ್ರಾಮದ ಉದ್ಘಾಟನಾ ಸಮಾರಂಭ







ಮಂಗಳೂರು: ಕಲಾಭಿ(ರಿ) ಮತ್ತು ಅರೆಹೊಳೆ ಪ್ರತಿಷ್ಠಾನವು ಜಂಟಿಯಾಗಿ ಮಂಗಳೂರಿನ ಬೊಂದೆಲ್ ನಲ್ಲಿ ಕಲಾಗ್ರಾಮ ಎಂಬ ನೂತನ ಕಲಾ ವೇದಿಕೆಯ ಉದ್ಘಾಟನೆಗೆ ಸಜ್ಜಾಗಿದೆ. ಈ ರಂಗ ಮಂದಿರವು ಕಲಾತ್ಮಕ ಪ್ರತಿಭೆಗಳಿಗೆ ಹೊಸ ತಳಹದಿಯನ್ನು ಒದಗಿಸುವುದರ ಜೊತೆಗೆ, ನಾಟಕ, ಯಕ್ಷಗಾನ, ಜನಪದ ಕಲೆ, ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಮಹತ್ವದ ಕೇಂದ್ರವಾಗಿ ರೂಪುಗೊಳ್ಳಲಿದೆ.

ಇದರ ಉದ್ಘಾಟನಾ ಸಮಾರಂಭವು ವಿಶ್ವ ರಂಗಭೂಮಿ ದಿನವಾದ ಮಾರ್ಚ್ 27, 2025, ಗುರುವಾರದಂದು ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕಲಾಭಿ(ರಿ) ತಂಡದ ಕಲಾವಿದರಿಂದ ವಿಭಿನ್ನ ರಂಗ ಪ್ರಯೋಗವಾದ ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಈಗಾಗಲೇ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ನಾಟಕೋತ್ಸವಗಳ್ಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ.

ಈ ನೂತನ ಕಲಾ ಕೇಂದ್ರವು ಯುವ ಕಲಾ ಪ್ರತಿಭೆಗಳಿಗೆ ಒಟ್ಟಾರೆಯಾಗಿ ಪ್ರೋತ್ಸಾಹ ನೀಡಲು, ರಂಗಭೂಮಿ ಅಭ್ಯಾಸದ ಹೊಸ ಆಯಾಮಗಳನ್ನು ಅನ್ವೇಷಿಸಿ ಪ್ರಾಯೋಗಿಸಲು ಹಾಗೂ ಕಲಾತ್ಮಕ ಸಂಸ್ಕೃತಿಯನ್ನು ಬೆಳೆಸಲು ಸಹಕಾರಿಯಾಗಲಿದೆ.



Related posts

ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ಚಿಕ್ಕಬಳ್ಳಾಪುರದ ಎಂಟು ಭಕ್ತರ ದುರ್ಮರಣ

Mumbai News Desk

ಪೊವಾಯಿ: ರಾಘು ವಿ ಶೆಟ್ಟಿ ನಿಧನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (14/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ್ ಬ್ಯಾಂಕ್ ಸಾಧನೆ: ಇನ್ಫೋಸಿಸ್ ಫಿನಾಕಲ್ ಇನ್ನೋವೇಶನ್ ಅವಾರ್ಡ್ಸ್ 2026’

Mumbai News Desk

ಬಂಟ್ವಾಳ : ನೇತ್ರಾವತಿ ನದಿ ದಡದಲ್ಲಿ ಅನಾಥವಾಗಿ ಬಿದ್ದ ನೂರಾರು ಆಧಾರ್ ಕಾರ್ಡ್‌ಗಳು – ತನಿಖೆಗೆ ಯು.ಟಿ. ಖಾದರ್ ಸೂಚನೆ.

Mumbai News Desk

ಹಿರಿಯ ಪತ್ರಕರ್ತ ಶ್ರೀಧರ್‌ ಉಚ್ಚಿಲ್‌ಗೆ ‘ಕೆಯುಡಬ್ಲ್ಯೂಜೆ’ ವಿಶೇಷ ಪ್ರಶಸ್ತಿ ಪ್ರದಾನ

Mumbai News Desk