32 C
Mumbai
April 24, 2026
Mumbai News Kannada
ಕರಾವಳಿ

ಮೂಳೂರು ಜಾರಿಗೆದಡಿ ಕೋಟಿಯನ್ ಮೂಲಸ್ಥಾನದ ತನು ತಂಬಿಲ





ಚಿತ್ರ, ವರದಿ : ಜಯ ಪೂಜಾರಿ

ದಕ್ಷಿಣ ಕನ್ನಡದಲ್ಲಿ ತುಳುವರ ಬಿಲ್ಲವ ಸಮಾಜದಲ್ಲಿ ಕೆಲವು ಬರಿ / ಬಲಿ ಗಳೆಂಬ ಅಂದರೆ ಸುವರ್ಣ ಅಂಚನ್ ಸಾಲಿಯಾನ್ ಅಮೀನ್ ಕೋಟಿಯನ್ ಹೀಗೆ ಹಲವಾರು ಬಲಿ / ಬರಿ ಗಳೆಂಬ ಕೇಳಲು ಸಿಗುತ್ತದೆ .ಇದು ಹಲವಾರು ಜಾತಿ ಸಮೂದಾಯದಲ್ಲಿ ತುಳುನಾಡಿನಲ್ಲಿದೆ . ಅದರಲ್ಲಿ ಉಡುಪಿ ಜಿಲ್ಲೆಯ ಕಾಪು ಪರಿಸರದ ಊರಾದ ಮೂಳೂರು ಜಾರಿಗೆದಡಿ ಬಿಲ್ಲವರ ಕೋಟಿಯನ್ ಮೂಲಕ್ಸೆತ್ರವಾದ ಆಧಿಕ್ಷೇತ್ರ ಸೇವಾ ಟ್ರಸ್ಟ್ ಇವರ ಕಾಲಾವಧಿ ಪ್ರತಿವರ್ಷದಂತೆ, ಶ್ರೀ ನಾಗಬ್ರಹ್ಮ್ಮ ಪರಿವಾರ ದೇವರ ಸಾನಿಧ್ಯದಲ್ಲಿ ಈ ವರ್ಷ ತಾರೀಕು 27 1 2024 ಶನಿವಾರ ಬೆಳಿಗ್ಗೆಯಿಂದ ಸ್ಥಳೀಯ ಅರ್ಚಕರಾದ ಶ್ರೀ ಕುಶ ಉಪಾಧ್ಯಾಯರ ಪೌರೋಹಿತ್ಯದಲ್ಲಿ ನವಕ ಕಲಾಭಿಷೇಕ, ಸಾಮೂಹಿಕ ಆಶ್ಲೇಷ ಬಲಿ , ತನು- ತಂಬಿಲ ಮಹಾಪೂಜೆ, ನಾಗದರ್ಶನ ಸೇವೆ ,ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರಗಿತು .


ಆ ಪ್ರಯುಕ್ತ ಸಮಸ್ತ ಕೋಟಿಯನ್ ಕುಟುಂಬಸ್ಥರು ಶ್ರೀ ಸಾನಿಧ್ಯಕ್ಕೆ ಸಲ್ಲತಕ್ಕ ಡಬ್ಬ ಕಾಣಿಕೆ ತೆಂಗಿನ ಕಾಯಿ , ಹಾಲು , ಸಿಯಾಳ , ಹೂ ಹಿಂಗಾರದೊಂದಿಗೆ ತಮ್ಮ ಬಂದು – ಮಿತ್ರರೊಡನೆ ಸಕಾಲದಲ್ಲಿ ಆಗಮಿಸಿ ತನು – ಮನ – ಧನದಿಂದ ಸಹಕರಿಸಿ ಸಿರಿಮುಡಿ ಗಂಧ – ಪ್ರಸಾದವನ್ನು ಸ್ವೀಕರಿಸಿ ಶ್ರೀ ನಾಗ ಬ್ರಹ್ಮ್ಮ ಪರಿವಾರ ದೈವ ದೇವರ ಪರಮಾನುಗ್ರಹಕ್ಕೆ ಪಾತ್ರರಾದರು . ಈ ಕಾರ್ಯಕ್ರಮದಲ್ಲಿ ಸರಿ ಸುಮಾರು 1 500 ಸಾವಿರ ಜನರು ಮಹಿಳೆಯರು ಹಾಗೂ ಗಂಡಸರು ಮಕ್ಕಳು ಕೂಡಿ ಕೋಟಿಯನ್ ಕುಟುಂಬಸ್ಥರು ತನು ತಂಬಿಲದ ಪ್ರಸಾದ ಸ್ವೀಕರಿಸಿ ಪಾವನರಾದರು .



Related posts

ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ನ ಸದಸ್ಯರಾಗಿ ಸುಬ್ರಹ್ಮಣ್ಯ ಪ್ರಸಾದ್ ಶಿಬರೂರು ಆಯ್ಕೆ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿರುದ್ಧ ಕೀಳು ಭಾಷೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟವರ ವಿರುದ್ಧ ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

Mumbai News Desk

ಶಾರದಾ ಪ್ರಿ ಯುನಿವರ್ಸಿಟಿ ಕಾಲೇಜ್ ನಲ್ಲಿ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

Mumbai News Desk

ನಡೂರು ಕಂಬಳ ಗದ್ದೆ ಮನೆ ಕಂಬಳೋತ್ಸವ

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟವಿಶ್ವ ಬಂಟರ ಸಮ್ಮೇಳನ .

Mumbai News Desk