28.4 C
Mumbai
March 7, 2026
Mumbai News Kannada
ಮುಂಬಯಿ

ಡೊಂಬಿವಿಲಿಯ ಶ್ರೀಮಹಾವಿಷ್ಣು ಮಂದಿರದಲ್ಲಿ “ದಶಾವತಾರ ” ಹರಿನಾಮವಳಿ – ಶುಭ ಚಿಂತನ ” ಕಾರ್ಯಕ್ರಮ





ಡೊಂಬಿವಲಿ ಪಶ್ಚಿಮದ ಯಶವಂತ ನಗರದಲ್ಲಿರುವ ಮುಂಬ್ರಾ ಮಿತ್ರ ಭಜನಾ ಮಂಡಳಿ (ರಿ) ಇದರ ಸಂಚಾಲಕತ್ವದ ಶ್ರೀ ಮಹಾವಿಷ್ಣು ಮಂದಿರದಲ್ಲಿ ವೈ. ಅನಂತ ಪದ್ಮನಾಭ ಭಟ್ ಇವರಿಂದ ಪುರಂದರ ದಾಸರಾ ಆರಾಧನಾ ಮಹೋತ್ಸವದ ನಿಮಿತ್ತ “ದಶಾವತಾರ ” ಹರಿನಾಮವಳಿ – ಶುಭ ಚಿಂತನ ” ಕಾರ್ಯಕ್ರಮವು ಫೆ.19 ರಂದು ಸೋಮವಾರ ಸಂಜೆ 7 ರಿಂದ 10 ರ ತನಕ ಮಂದಿರದ ಸಭಾಗ್ರಹದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಹರಿದಾಸರಾದ ವಿದ್ವಾನ್ ವೈ. ಅನಂತಪದ್ಮನಾಭ ಭಟ್ ಹಾಗು ಅವರೊಂದಿಗೆ ಹಾರ್ಮೋನಿಯಂ ವಾದಕರಾದ ಶ್ರೀ ಶಿವರಾಮ ಭಾಗವತ್ ಯೆಲ್ಲಾಪುರ ಹಾಗೂ ಮಾನಸ್ ಬಂಗೇರ ರವರಿಗೆ ಮಂದಿರದ ವತಿಯಿಂದ ಗೌರವಿಸಲಾಯಿತು.

ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವ ಅಧ್ಯಕ್ಷರಾದ ಶ್ರೀಯುತ ನಿತಿನ್ ಪ್ರಕಾಶ್ ಪುತ್ರನ್ ಉಪಾಧ್ಯಕ್ಷರಾದ ಅರವಿಂದ್ ಪದ್ಮಶಾಲಿ, ಜೊತೆ ಕಾರ್ಯದರ್ಶಿ ಚಂದ್ರಶೇಖರ್ ಸಾಲಿಯಾನ್ , ಮಹಿಳಾ ವಿಭಾಗದ ಕಾರ್ಯದ್ಯೆಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು , ಹಾಗು ತುಳು ಕನ್ನಡ ಸಂಘ ಸಂಸ್ಥೆಯ ಹೆಚ್ಚಿನ ಸದಸ್ಯರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿ ಯಾಗಲು ಸಹಕರಿಸಿದರು. ಮಂದಿರ ದ್ ಉಪ ಬುವಾಜಿ ಶ್ರೀಯುತ ಲೀಲೆಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



Related posts

ಕರ್ನಾಟಕ ಸಂಘ ಡೊಂಬಿವಲಿ: ನಾಡಹಬ್ಬದ ನಿಮಿತ್ತ ‘ಕವಿಗೋಷ್ಠಿ’ಯ ವೈಭವ

Mumbai News Desk

ಮುಂಬಯಿ: ನಾನಿಲ್ತಾರ್ ಅಭಿಮಾನಿ ಬಳಗದಿಂದ ಸಂಭ್ರಮದ ‘ಅರಿಶಿನ ಕುಂಕುಮ’ ಕಾರ್ಯಕ್ರಮ

Mumbai News Desk

ಜಯ ಸಿ ಸುವರ್ಣ ಅಭಿಮಾನಿಗಳಿಂದ ಗೊರೇಗಾಂವ್‌ನಲ್ಲಿ ನವರಾತ್ರಿ ನೃತ್ಯೋತ್ಸವ – 2025*

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ತುಳು ಪರ್ಬ ದತ್ತಿ ನಿಧಿ ಕಾರ್ಯಕ್ರಮ

Mumbai News Desk

ಬೋರಿವಲಿ   :  ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಿಸರ್  ಸಮಿತಿಯ ಮಹಿಳಾ ಸದಸ್ಯರಿಂದ  ಭಜನೆ ಸಂಕೀರ್ತನೆ.

Mumbai News Desk

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk