30 C
Mumbai
April 24, 2026
Mumbai News Kannada
ಮುಂಬಯಿ

ಬೋರಿವಲಿ   :  ಮಹಿಷಾಮರ್ಧಿನಿ ದೇವಸ್ಥಾನದಲ್ಲಿ ಬಂಟರ ಸಂಘದ ಜೋಗೇಶ್ವರಿ – ದಹಿಸರ್  ಸಮಿತಿಯ ಮಹಿಳಾ ಸದಸ್ಯರಿಂದ  ಭಜನೆ ಸಂಕೀರ್ತನೆ.





    ಮುಂಬಯಿ ಮಾ 12, ಬಂಟರ ಸಂಘ ಮುಂಬೈಯ

ಜೋಗೇಶ್ವರಿ – ದಹಿಸರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯರಿಂದ ಮಾ 8 ರಂದು  ಮಹಾ ಶಿವರಾತ್ರಿಯ ಶುಭದಿನ  ಬೊರಿವಲಿ ಪಶ್ಚಿಮದ  ಜಯರಾಜ್ ನಗರದ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸ್ಮರಣೀಯ  ಭಜನೆ ಸಂಕೀರ್ತನೆ  ಜರಗಿತು,

ಬೆಳಿಗ್ಗೆ  ಭಜನೆ ಕಾರ್ಯಕ್ರಮ ಇಂಚರ ತಂಡದ  ರಜನಿ ಶೆಟ್ಟಿ  ಮತ್ತು ಶೊಭಾ ಶೆಟ್ಟಿಯವರ ನೇತೃತ್ವದಲ್ಲಿ ಜರಗಿತು. ಭಜನೆ  ಮಹಿಳಾ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು  ಸೇವೆ ಸಲ್ಲಿಸಿದರು. 

ಆ ಬಳಿಕ ಮಹಿಳ ಸದಸ್ಯರಿಂದ ಆತ್ಮವು ಸೂರೆಗೊಳ್ಳುವ ಭಜನೆಯು ಎಲ್ಲರೂರನ್ನು ಭಕ್ತಿ ಭಾವ ರನ್ನಾಗಿ ಮಾಡಿತು,

. ಇದೇ ಸಂದರ್ಭದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ   ಪ್ರೇಮನಾಥ ಶೆಟ್ಟಿ ಕೊಂಡಾಡಿ ಮತ್ತು  ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಸುನೀತಾ ಹೆಗ್ಡೆ ಅವರು ಭಜನೆ ಹಾಡಿದ ಎಲ್ಲಾ ಸದಸ್ಯರಿಗೆ ನಿತ್ಯ ಪ್ರಾರ್ಥನೆಯ ಪುಸ್ತಕವನ್ನು ವಿತರಿಸಿ ಅವರ ಅಧ್ಯಾತ್ಮಿಕ ಸಾಧನೆಗೆ ಸ್ಪೂರ್ತಿ ನೀಡಿದರು.

ಮಧ್ಯಾಹ್ನ  ಮಹಾ ಆರತಿ ಜರಗಿ ದೇವರ ಕೃಪೆಯಿಂದ  ವಾತಾವರಣವು  ಮಂಗಲಮಯವಾಗಿ ಕಾರ್ಯಕ್ರಮವು ಮುಕ್ತಾಯಗೊಂಡಿತು.

 ಪಾಲ್ಗೊಂಡ ಭಕ್ತರಲ್ಲರಿಗೂ ಪ್ರಸಾದರೂಪವಾಗಿ ಅನ್ನ ಸಂತರ್ಪಣೆ ನಡೆಯಿತು 



Related posts

ನೃತ್ಯ ಸ್ಪರ್ಧಾಳುಗಳಿಗೆ ಬಿಲ್ಲವರ ಎಸೋಶಯೆಷನ್ ಬೊರಿವಲಿ – ದಹಿಸರ್ ಸ್ಥಳೀಯ ಕಚೇರಿಯ ವತಿಯಿಂದ ಗೌರವ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ.  ಮುಂಡ್ಕೂರು, ಮುಂಬಯಿ 17ನೇ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಾಧಕರಿಗೆ ಸನ್ಮಾನ.

Mumbai News Desk

ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಿಂದರಿನ ವಾರ್ಷಿಕ ಮಹಾಸಭೆ.

Mumbai News Desk

ದಹಿಸರ್‌ನಲ್ಲಿ 19ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಛೇರಿ : ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಜೋಗೇಶ್ವರಿ ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಅಧ್ಯಕ್ಷರಾಗಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್

Mumbai News Desk