
ಹಿರಿಯ ಪಾತ್ರಕರ್ತ, ನಿರೂಪಕ, ಕವಿ, ಮನೋಹರ್ ಪ್ರಸಾದ ಇಂದು (ಮಾರ್ಚ್ 1) ಮುಂಜಾನೆ ನಿಧನರಾದರು. ಅವರಿಗೆ 64 ವರ್ಷ ವಯಸಾಗಿತ್ತು.
ಕಾರ್ಕಳ ತಾಲೂಕಿನ ಕರ್ವಾಲು ಗ್ರಾಮದವರಾದ ಮನೋಹರ್ ಪ್ರಸಾದ ಪದವಿ ಶಿಕ್ಷಣದ ಬಳಿಕ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಭಾರತ ಪತ್ರಿಕೆಯಲ್ಲಿ ಕೆಲ ಕಾಲ ದುಡಿದ ನಂತರ ಉದಯವಾಣಿ ಮಂಗಳೂರು ಅವ್ರತ್ತಿಯ ವರದಿಗಾರರಾಗಿ ಸೇರ್ಪಡೆಗೊಂಡರು, ಬಳಿಕ ಅವರು ಬ್ಯುರೋ ಚೀಪ್ ಆಗಿ ನಂತರ ಸಹಾಯಕ ಸಂಪಾದಕರಾಗಿ ಭರ್ತಿ ಪಡೆದಿದ್ದರು.
ಅವರು ಉದಯವಾಣಿಯಲ್ಲಿ 36 ವರ್ಷ ಸೇವೆಗೈದು ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.
ಕರ್ನಾಟಕ ರಾಜ್ಯೋತ್ಸವ ಸಹಿತ ಹಲವಾರು ಪ್ರಶಸ್ತಿ ಪಡೆದ ಇವರು ಉತ್ತಮ ನಿರೂಪಕರಾಗಿ, ಕಥೆಗಾರ, ಕವಿಯಾಗಿ ಗುರುತಿಸಿಕೊಂಡಿದ್ದರು.