28.4 C
Mumbai
March 7, 2026
Mumbai News Kannada
ಮುಂಬಯಿ

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 





ಡೊಂಬಿವಲಿ ಅ. 24: ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಅಜ್ದೆಗಾವ್, ಡೊಂಬಿವಲಿ ಪೂರ್ವ ಇದರ ವಾರ್ಷಿಕ ಮಹಾ ಸಭೆಯು ತಾರೀಕು 11/08/2024 ನೇ ಆದಿತ್ಯವಾರ ಅಧ್ಯಕ್ಷರಾದ ರವಿ  ಎಂ. ಸುವರ್ಣರವರ ನೇತೃತ್ವದಲ್ಲಿ ಜರಗಿತು.

ಸಭೆಯ ಪ್ರಾರಂಭದಲ್ಲಿ ಪ್ರಧಾನ ಅರ್ಚಕರಾದ ಕಾನಂಗಿ ಪ್ರಕಾಶ್ ಭಟ್ ರವರು ದೇವರ ಪ್ರಾರ್ಥನೆಯೊಂದಿಗೆ ಶುಭಾರಂಭ ಮಾಡಿದರು. ಅಧ್ಯಕ್ಷರು ಸಭೆಯನ್ನುದ್ದೇಶಿಸಿ ಪ್ರಾಸ್ತವಿಕ ಭಾಷಣ ಮಾಡಿದರು.

ಗತ ವಾರ್ಷಿಕ ಲೆಕ್ಕ ಪರಿಶೋಧನೆಯ ನಂತರ 2024-27ರ ಕಾರ್ಯಕಾರಿ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ಸೂರಜ್ ಡಿ ಸಪಲಿಗರನ್ನು ಸರ್ವಾನುಮತದಿಂದ ಆರಿಸಲಾಯಿತು, ತದ ನಂತರ ಗೌರವ ಅಧ್ಯಕ್ಷರಾಗಿ ರವಿ ಎಂ. ಸುವರ್ಣ, ಸಲಹೆಗಾರರಾಗಿ ಭಾಸ್ಕರ್ ಎಲ್. ಅಮೀನ್, ಪ್ರಧಾನ ಅರ್ಚಕರಾಗಿ ಕಾನಂಗಿ ಪ್ರಕಾಶ್ ಭಟ್, ಉಪಾಧ್ಯಕ್ಷರಾಗಿ ಸಂಜೀವ ಪಿ. ಪಾಲನ್, ಕಾರ್ಯದರ್ಶಿಯಾಗಿ ಸಂತೋಷ್ ಜಿ. ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಎಸ್. ಸಾಲಿಯಾನ್, ಕೋಶಾಧಿಕಾರಿಯಾಗಿ ಜೈಕೀಶ್ ಆರ್. ಸನಿಲ್, ಜೊತೆ ಕೋಶಾಧಿಕಾರಿಯಾಗಿ ರಕ್ಷನ್ ಸಾಲಿಯಾನ್, ಸಹ ಅರ್ಚಕರಾಗಿ ಪ್ರವೀಣ್ ಪೂಜಾರಿ ಇವರನ್ನು ನೇಮಿಸಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರಂಜಿತ್ ಕೆ ಶೆಟ್ಟಿ, ಮೋಹನ್ ಪಿ ಸಾಲಿಯನ್, ರತನ್ ಪೂಜಾರಿ, ವಿಶ್ವನಾಥ್ ಜಿ ಸಾಲಿಯನ್, ಜಯಂತ ಬಿ ಪೂಜಾರಿ, ಸತೀಶ್ ಜಿ ಪೂಜಾರಿ, ಸಚಿನ್ ಪೂಜಾರಿ ( ಪಲಿಮಾರ್ ), ಸಾಗರ್ ವೈ ಪೂಜಾರಿ, ಕಿಶೋರ್ ಬಂಗೇರ, ಧಿರೇಶ್ ವಿ ಸಾಲಿಯನ್, ದಿನೇಶ್ ಎಸ್ ಬಂಗೇರ, ಹರೀಶ್ ಎಸ್ ಸಪಲಿಗ, ರಾಘು ಎಸ್ ಶೆಟ್ಟಿ ಇವರನ್ನು ನೇಮಿಸಲಾಯಿತು.

ಸಭೆಯನ್ನು ಉದ್ದೇಶಿಷಿ ಭಾಸ್ಕರ್ ಅಮೀನ್, ಸಂಜೀವ ಪಾಲನ್, ಸಂತೋಷ್ ಪೂಜಾರಿ, ರಕ್ಷನ್ ಸಾಲಿಯಾನ್, ಪ್ರದೀಪ್ ಸಾಲಿಯನ್ ಮಾತನಾಡಿದರು, ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ರವರು ಆಶೀರ್ವಾದ ವಚನ ಮಾಡಿದರು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರಜ್ ಸಪಲಿಗರವರು ತನ್ನ ಭಾಷಣದಲ್ಲಿ ಮಂದಿರದ ಏಳಿಗೆ ಹಾಗೂ ಶಿಸ್ತು ಬದ್ಧವಾದ ವಿಚಾರಗಳನ್ನು ಮಂಡಿಸಿದರು, ನೂತನ ಕಾರ್ಯದರ್ಶಿಗಳು ಸಭೆಯಲ್ಲಿ ನೆರೆದ ಎಲ್ಲರಿಗೂ ಧನ್ಯವಾದಗೈದು ಸಭೆಯನ್ನು ಮುಕ್ತಾಯಗೊಳಿಸಿದರು



Related posts

ಭಂಡಾರಿ ಸೇವಾ ಸಮಿತಿ ಮುಂಬಯಿ – 70ನೇ ವಾರ್ಷಿಕ ಕೌಟುಂಬಿಕ ಸ್ನೇಹ ಸಮ್ಮಿಲನ

Mumbai News Desk

ನೈರುತ್ಯ ವಲಯ ಮಟ್ಟದ ಮಕ್ಕಳ ಉತ್ಸವ ಹಾಗೂ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮದ ಸಮಾರೋಪ 

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿಯ ಇಂಟರ್ನ್ಯಾಷನಲ್ ಶಾಲೆಯ ಆಯೋಜನೆಯಲ್ಲಿ ರಾಷ್ಟ್ರಮಟ್ಟದ ಸಿಬಿಎಸ್‌ಸಿ ಶಾಲೆಯ ವಿದ್ಯಾರ್ಥಿಗಳಿಗೆ  ವಾಲಿಬಾಲ್‌ ಪಂದ್ಯಾಟದ ಉದ್ಘಾಟನೆ. 

Mumbai News Desk

ಮುಂಬಾಯಿ ಮೊಗವೀರ ಮಹಾ ಸಭೆ ಹಾಗೂ ಮಹಿಳಾ ಮಂಡಳಿ ವತಿಯಿಂದ “ ಆಟಿದ ಒಂಜಿ ಕೂಟ” ಹಾಗೂ “ಅಭಿನಂದನಾ ಕಾರ್ಯಕ್ರಮ”

Mumbai News Desk

ಕಲಾ ಜಗತ್ತು ಮುಂಬಯಿ ಮತ್ತು ಡಾ. ಸದಾನಂದ ಶೆಟ್ಟಿ ಅಭಿನಂದನಾ ಬಳಗ ಇವರ ಸಹಯೋಗದಲ್ಲಿ ಡಾ. ಸದಾನಂದ ಶೆಟ್ಟಿ ಯವರಿಗೆ ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ.

Mumbai News Desk

ಮುಂಬೈ ನಗರದಲ್ಲಿ ಭಾರೀ ಮಳೆ: ಕರಾವಳಿ ಪ್ರದೇಶಗಳಿಗೆ ತೆರಳದಂತೆ, ಒಳಾಂಗಣದಲ್ಲಿಯೇ ಇರುವಂತೆ ಪೊಲೀಸರು ನಾಗರಿಕರಿಗೆ ಮನವಿ

Mumbai News Desk