32 C
Mumbai
March 7, 2026
Mumbai News Kannada
ಪ್ರಕಟಣೆ

ಜ. 6 ರಂದು ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿಯ ಸಾಮೂಹಿಕ ಶ್ರೀ ಶನೀಶ್ವರ ಪೂಜೆ





ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ (ರಿ.) ಡೊಂಬಿವಲಿ (ಪಶ್ಚಿಮ) ಇದರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 32ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಯು ಇದೇ ಬರುವ ದಿನಾಂಕ 06-01-2024 ನೇ ಶನಿವಾರ, ರೇತಿಭವನ, 3ನೇ ಮಹಡಿ, ರೈಲ್ವೇ ನಿಲ್ದಾಣದ ಬಳಿ, ಡೊಂಬಿವಲಿ (ಪ.) ಇಲ್ಲಿ ಜರಗಲಿರುವುದು. ಶ್ರೀ ಸುರೇಶ್ ಅಂಚನ್ ಕಲಶ ಪ್ರತಿಷ್ಠಾಪನೆ ಮಾಡಲಿರುವರು.

ಭಕ್ತಾಭಿಮಾನಿಗಳಾದ ತಾವು ನಮ್ಮಿ ಪೂಜಾ ಕಾರ್ಯಕ್ರಮಕ್ಕೆ ಬ೦ಧು-ಮಿತ್ರರಿಂದೊಡಗೂಡಿ ಚಿತ್ರಸಿ ಶ್ರೀ ಶನಿದೇವರ ತೀರ್ಥ ಪ್ರಸಾದ ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ನಿತ್ಯಾನಂದ ಜತ್ತನ್ (ಅಧ್ಯಕ್ಷರು), ಶ್ರೀ ಬ್ರಹ್ಮಾನಂದ ಶೆಟ್ಟಿಗಾರ್ (ಉಪಾಧ್ಯಕ್ಷರು), ಶ್ರೀ ಸುನೀಲ್ ಸಂಜೀವ ಶೆಟ್ಟಿ (ಕಾರ್ಯದರ್ಶಿ), ಶ್ರೀ ಜಯಪ್ರಸನ್ನ ಶೆಟ್ಟಿ (ಕೋಶಾಧಿಕಾರಿ), ಶ್ರೀ ನಾರಾಯಣ ಮೈಂದನ್ (ಜೊತೆ ಕಾರ್ಯದರ್ಶಿ), ಶ್ರೀ ನಾರಾಯಣ ಭಂಡಾರಿ (ಜೊತೆ ಕೋಶಾಧಿಕಾರಿ), ಧರ್ಮದರ್ಶಿ ಶ್ರೀ ಅಶೋಕ್ ದಾಸು ಶೆಟ್ಟಿ (ಪ್ರಧಾನ ಅರ್ಚಕರು), ಶ್ರೀ ಶನೀಶ್ವರ ಪೂಜಾ ಸಮಿತಿ, ಮಹಿಳಾ ಮಂಡಳಿ, ಯುವ ವಿಭಾಗ ಹಾಗೂ ಮಂಡಳಿಯ ಸರ್ವ ಸದಸ್ಯರು, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ, ಡೊಂಬಿವಲಿ (ಪ.) ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

ಭಕ್ತರು ರೂ. 301/- ಕೊಟ್ಟು ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಮಾಡಿಸಬಹುದು ಹಾಗೂ ಶ್ರೀ ದೇವರಿಗೆ ಇನ್ನಿತರ ಸೇವೆಯನ್ನು ಭಕ್ತರಿಂದ ಸ್ವೀಕರಿಸಲಾಗುವುದು.

ಅಭಿನಂದನೆ :
ಕಳೆದ ವರ್ಷದ ಸಾಮೂಹಿಕ ಶ್ರೀ ಶನೀಪೂಜೆಗೆ ಅನ್ನದಾನ, ಅಲೋಪಹಾರ, ಎಣ್ಣೆ ಸೇವೆ, ಪ್ರಸಾದ ಸೇವೆ, ಪ್ರಸಾದ ಬ್ಯಾಗ್ ಸೇವೆ, ಪಂಚಗಚ್ಚಾಯ ಸೇವೆ, ಹಿಂಗಾರ ಸೇವೆ ಹಾಗೂ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯನ್ನು ಕೊಟ್ಟು ಸಹಕರಿಸಿದ ಎಲ್ಲಾ ಭಕ್ತರಿಗೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕೊಟ್ಟು ಕರುಣಿಸಲೆಂದು ಪ್ರಾರ್ಥನೆ.

.

.



Related posts

ಫೆ.24 ರಂದು ಬಿಲ್ಲವರ ಎಸೋಸಿಯೇಶನ್, ಮುಂಬೈ, ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್. ಜು.10, ಗುರು ಪೂರ್ಣಿಮೆ ಆಚರಣೆ

Mumbai News Desk

ಪೆ  17 :ಶ್ರೀಮದ್ಭಾರತ  ಮಂಡಳಿಯ  146 ನೇ ವಾರ್ಷಿಕೋತ್ಸವ

Mumbai News Desk

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ : ಫೆ. 10 ರಂದು 66ನೇ ವಾರ್ಷಿಕೋತ್ಸವ;ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ವಿತರಣಾ ಸಮಾರಂಭ

Mumbai News Desk

ಅಗಸ್ಟ್ 10 : ಯಕ್ಷಾಭ್ಯುದಯ ಬಳಗ ಕೋರ್ಟ್ ನಾಕ, ಥಾಣೆ ಪಶ್ಚಿಮ : ‘ಭಕ್ತ ಚಂದ್ರಹಾಸ’ ಯಕ್ಷಗಾನ ಪ್ರದರ್ಶನ

Mumbai News Desk