September 6, 2026
Mumbai News Kannada
ಪ್ರಕಟಣೆ

ಸೆ.7,8 ರಂದು ಕುಲಾಲ ಸಂಘ ಮುಂಬಯಿ ವತಿಯಿಂದ ಥಾಣೆ ಪಶ್ಚಿಮ ಗೋಡ್ ಬಂದರ್ ನ ಸಂಘದ ನಿವೇಶನದಲ್ಲಿ ಗಣೇಶೋತ್ಸವ ಸಂಭ್ರಮ,





ಕುಲಾಲ ಸಂಘ ಮುಂಬಯಿ ಇದರ ವತಿಯಿಂದ ಗಣೇಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸೆ.7 ಮತ್ತು 8 ರಂದು ನಡೆಯಲಿದೆ.
ದಾಣೆ ಪಶ್ಚಿಮ ಗೋಡ್ ಬಂದರು, ಹೋಟೇಲು ಕೋರ್ಟ್ ಯಾರ್ಡ್ ಸಮೀಪ, ಶುಭಂ ಹೌಸಿಂಗ್ ಕಾಂಪ್ಲೆಕ್ಸ್ ಇದರ ಮುಂದುಗಡೆ, ಕಸರವಾಡವಲಿ ಇಲ್ಲಿರುವ ಕುಲಾಲ ಸಂಘದ ನಿವೇಷನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಎರಡು ದಿನಗಳ ಗಣೇಶೋತ್ಸವವು ಸಂಭ್ರಮದಿಂದ ನಡೆಯಲಿದೆ.

ಸೆ.7 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ ಮತ್ತು ಮತ್ತು ಪ್ರಾಣ ಪ್ರತಿಷ್ಠ ಪೂಜಾ, ಮಧ್ಯಾಹ್ನ 3ರಿಂದ ಭಜನಾ ಸಂಕೀರ್ತನ, ಸಂಜೆ 4 ಕ್ಕೆ ಸಂಘದ ಮಹಿಳಾ ವಿಭಾಗದಿಂದ ಹಳದಿ ಕುಂಕುಮ, ಸಂಜೆ 6ಕ್ಕೆ ಮಹಾಮಂಗಳಾರತಿ, ರಾತ್ರಿ 8 ರಿಂದ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ.

ಸೆ. 8 ರಂದು ಬೆಳಿಗ್ಗೆ 8 ಕ್ಕೆ ಆರತಿ, ಮಧ್ಯಾಹ್ನ 2ರಿಂದ ಮಹಾ ಆರತಿ ಮತ್ತು ವಿಸರ್ಜನೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಆಗಮಿಸಿ ಸಹಕರಿಸಬೇಕಾಗಿ ಕುಲಾಲ ಸಂಘಯ ಅಧ್ಯಕ್ಷರಾದ ರಘು ಎ ಮೂಲ್ಯ, ಗೌರವ ಅಧ್ಯಕ್ಷ ದೇವದಾಸ್ ಕುಲಾಲ್, ಉಪಧ್ಯಕ್ಷ ಡಿ ಐ ಮೂಲ್ಯ ಪ್ರಧಾನ ಕಾರ್ಯದರ್ಶಿ ಕರುಣಾಕ‌ರ್ ಸಾಲಿಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಮಮತಾ ಎಸ್ ಗುಜರಾನ್ ಹಾಗೂ ಕಾರ್ಯಕಾರಿ ಸಮಿತಿ, ಗುರು ವಂದನ ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ವಿವಿಧ ಸ್ಥಳೀಯ ಸಮಿತಿಗಳ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರುಗಳು ವಿನಂತಿಸಿದ್ದಾರೆ.



Related posts

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಮಹಿಳಾ ವಿಭಾಗ. ಅ. 4 ರಂದು ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮ.

Mumbai News Desk

ಡಿ.17 ರಂದು ಡೊಂಬಿವಲಿ ಜನ ಗಣ ಮನ ಶಾಲಾ ವಠಾರದಲ್ಲಿ “ಕಂಸ ದಿಗ್ವಿಜಯ ಕಂಸ ವಧೆ” ಪೌರಾಣಿಕ ಯಕ್ಷಗಾನ

Mumbai News Desk

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ಮಾ. 29: ಬೋರಿವಲಿಯ ಶ್ರೀ ಜಗದೀಶ್ವರಿ ದೇವಸ್ಥಾನದಲ್ಲಿ ರಕ್ತದಾನ ಶಿಬಿರ: ಮಾನವೀಯ ಸೇವೆಗೆ ಸ್ಪಂದಿಸಲು ಭಕ್ತಾದಿಗಳಿಗೆ ಕರೆ

Mumbai News Desk

ಆ. 10 ರಂದು ಬಂಟರ ಸಂಘ ಮುಂಬಯಿ ವಸಯಿ – ದಹಾಣು ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದಿಂದ “ಆಟಿಡೊಂಜಿ ಬಂಟೆರ ಮಿನದನ” ಕಾರ್ಯಕ್ರಮ

Mumbai News Desk

ಮೇ. 16: ಕಾಸರಗೋಡಿನಲ್ಲಿ ದತ್ತಿನಿಧಿ ಪ್ರಶಸ್ತಿ,, ಕನ್ನಡ ಸಾಂಸ್ಕೃತಿಕ ಉತ್ಸವ : ಪತ್ರಕರ್ತ ಸುಭಾಷ್ ಶಿರಿಯ ಅವರಿಗೆ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk