April 2, 2025
ಪ್ರಕಟಣೆ

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

ಮುಂಬಯಿ  ಜ 22. ಮುಂಬಯಿ ಯ ಜಿ ಎಸ್ ಬಿ ಸಭಾ, ಮುಲುಂಡ್ ಸಂಸ್ಥೆಯ  ಪ್ರಸ್ತುತಿಯಲ್ಲಿ ಆಮ್ಮಿ ರಂಗಕರ್ಮಿ ( ರಿ ), ಮುಂಬಯಿ ನಾಟಕ ಹಾಗೂ ಸಾಂಸ್ಕೃತಿಕ ತಂಡದ ಇತ್ತೀಚೆಗೆ  ದಹಿಸರ ಶ್ರೀ ಕಾಶೀ ಮಠದ ಸಹಯೋಗದಿಂದ ಬಹು ಪ್ರಚಲಿತಕ್ಕೆ ಬಂದ ಹಾಗೂ ಮುಂಬೈ, ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ಹಲವೆಡೆ ಜಯಭೇರಿ ಗಳಿಸಿದ ಕೊಂಕಣಿ ಹಾಸ್ಯ ಪ್ರಧಾನ ಸಂಗೀತಮಯ ಕೊಂಕಣಿ ನಾಟಕ ‘ ಲಗ್ನಾ  ಪಿಶ್ಶ್ಯೆ’  ಪ್ರದರ್ಶನ ವು ಬರುವ  ಶುಕ್ರವಾರ, ಜನವರಿ 26, 2024 ರಂದು, ಮುಲುಂಡ್ ( ಪಶ್ಚಿಮ ) ದ ಮಹಾರಾಷ್ಟ್ರ  ಸೇವಾ ಸಂಘ ಹಾಲ್,ಜೆ ಏನ್ ರೋಡ್, ಸಂಕಿರಣದ ಮೊದಲನೆಯ ಮಹಡಿಯಲ್ಲಿ ಸಾಯಂಕಾಲ 4.30   ರಿಂದ  ನಡೆಯಲಿದೆ..

ಲಗ್ನಾ ಪಿಶ್ಶ್ಯೆ ಕೊಂಕಣಿ ನಾಟಕವನ್ನು ಉತ್ತರ ಕನ್ನಡ ಜಿಲ್ಲೆಯ ಬಾಲಕೃಷ್ಣ ಪುರಾಣಿಕ್ ಇವರು  ಹಾಸ್ಯ ಚಟಾಕಿಗಳ ಮಾಧ್ಯಮದ ಮುಖಾಂತರ ಅತಿ ಸುಂದರವಾಗಿ ರಚಿಸಿ , ಲಿಮ್ಕಾ ಖ್ಯಾತಿ ಡಾ. ಚಂದ್ರಶೇಖರ್ ಶೆಣೈ ಯವರು ಮಧುರಮ ಸಂಗೀತವನ್ನು ಪೋಣಿಸಿ ಅದ್ವಿತೀಯ ಬಗೆಯಲ್ಲಿ ನಿರ್ದೇಶಿಸಿದ್ದಾರೆ. 

ವಿಶ್ವ ಕೊಂಕಣಿ ಕೇಂದ್ರ ಪುರಸ್ಕೃತ A G Kamath ರು ವಿಶೇಷ ಮಾರ್ಗದರ್ಶನ ನೀಡಿರುವರು.

ಸಂಗೀತ ನಿರ್ದೇಶನವನ್ನು ಮುಂಬೈ ಸಾರಸ್ವತ ಲೋಕದಲ್ಲಿ ಗಣನೀಯ ಸೇವೆ ಸಲ್ಲಿಸಿದ  ಕೃಷ್ಣ ಚಂದಾವರ್ ಅವರು ನೀಡಿದ್ದಾರೆ.

ಪಾತ್ರವರ್ಗದಲ್ಲಿ, ನಗರದ ಖ್ಯಾತ ಕೊಂಕಣಿ – ಕನ್ನಡ ಹಾಸ್ಯ ರಂಗನಟ ಕಮಲಾಕ್ಷ ಸರಾಫ್, ಸಾರಸ್ವತ ಸಮಾಜದ ರಂಗ ಕಲಾವಿದ ಹರೀಶ್ ಚಂದಾವರ್, ಹಿರಿಯ ರಂಗನಟ ಹಾಗೂ ಯಕ್ಷಗಾನ ಕಲಾವಿದ ತೋನ್ಸೆ ವೆಂಕಟೇಶ್ ಶೆಣೈ,  ಮುಂಬಯಿಯ ಪ್ರಬುದ್ಧ ನಾಟಕ ಹಾಗೂ ಯಕ್ಷಗಾನ ಕಲಾವಿದೆ ಅಕ್ಷತಾ ಕಾಮತ್, ಯುವ ಪ್ರತಿಭಾವಂತ ಕಲಾವಿದ ಪ್ರಮೋದ್ ಮಲ್ಯ , ಅರ್ಚನಾ ಭಟ್ ಮತ್ತು ಚಂದ್ರಶೇಖರ್ ಶೆಣೈ ಅಭಿನಯಿಸಲಿದ್ದಾರೆ.

ದ್ವನಿ, ಬೆಳಕು ಹಾಗೂ ರಂಗ ಸಜ್ಜಿಕೆ ಯಲ್ಲಿ ಸುಧಾಕರ್ ಭಟ್ ಇವರು ಸಕ್ರೀಯವಾಗಲಿರುವರು. ಮಾಸ್ಟರ್ ರೋಹನ್ ಕಾಮತ್ ಇನ್ನಿತರ ರಂಗಕರ್ಮಿಗಳು ನೇಪಥ್ಯದಲ್ಲಿ ಸಹಕರಿಸಲಿರುವರು. 

GSB Sabha, Mulund ಹಾಗೂ

DBS Tradelinks ಇವರ ಪ್ರಾಯೋಜಕತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಸಂದರ್ಭದಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರಸ್ತುತ ವರ್ಷದ ಪಾರಿತೋಷಕ ಹಾಗೂ ಗೌರವ ಪತ್ರಗಳನ್ನು ನೀಡಿ ಮುಖ್ಯ ಅತಿಥಿ Dr.Chandrashekhar Shenoy ರ ಸುಹಸ್ತಗಳಿಂದ ಪುರಸ್ಕರಿಸಲಾಗುವುದು.ಸೂಕ್ತ ಸಮಯದಲ್ಲಿ ಹಾಜರಿದ್ದು ಕೊಂಕಣಿ ಕಲಾಭಿಮಾನಿ ಗಳು ಸಹಕರಿಸುವಂತೆ GSB Sabha, Mulund ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀ ಗಣೇಶ್ ರಾವ್ ಇವರು ವಿನಂತಿಸಿದ್ದಾರೆ

ನಾಟಕದ ಸಮಾಪ್ತಿ ನಂತರ ಅಲ್ಪ ಭೋಜನವನ್ನು ಪ್ರಾಯೋಜಿಸಲಾಗಿದೆ ಎಂದು ತಿಳಿಸಿರುವರು.

Related posts

ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ ಗೋರೆಗಾಂವ್, ಬ್ರಹ್ಮಕಲಶೋತ್ಸವ. ಡಿ.10 ರಂದು  ನೂತನ ಬಿಂಬದ ವೈಭವೋಪೇತ ಮೆರವಣಿಗೆ.

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್, ಮುಂಬಯಿ, ಸೆ 16: ಶ್ರೀ ವಿಶ್ವಕರ್ಮ ಮಹೋತ್ಸವ.

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ ಭಾಂಡುಪ್ : ಜ. 30ರಿಂದ, ಫೆ. 1ರ ತನಕ 41ನೇ ವಾರ್ಷಿಕ ಮಹಾಪೂಜೆ.

Mumbai News Desk

ಮಾ 16 ; ಗೋರೆಗಾಂವ್ ಇರಾನಿ ಕೊಲನಿ ಶ್ರೀ ಶನಿಮಹಾತ್ಮಾ ಪೂಜಾ ಸಮಿತಿ ಯ 69ನೇ ವಾರ್ಷಿಕ ಮಹೋತ್ಸವ,

Mumbai News Desk

ಮಾರ್ಚ್ 9 ರಂದು ಕರ್ನಾಟಕ ಸಂಘ ಡೊಂಬಿವಲಿ : ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ ಹಾಗೂ ವೈದ್ಯಕೀಯ ವಿಚಾರ ಸಂಕಿರಣ. 

Mumbai News Desk

ಪನ್ವೇಲ್  ನಗರಸೇವಕ  ಸಂತೋಷ್ ಜಿ. ಶೆಟ್ಟಿಯವರ ಮುಂದಾಳುತ್ವದಲ್ಲಿ, ಎ. 7: ಥಾಣೆ ಯಲ್ಲಿ  ತುಳು – ಕನ್ನಡಿಗರ ಮಹಾ ಸಮಾವೇಶ

Mumbai News Desk