30 C
Mumbai
April 24, 2026
Mumbai News Kannada
ಪ್ರಕಟಣೆ

ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ, ಮೂಲ್ಕಿ : ಫೆ. 7ಕ್ಕೆ. ಸಿರಿಸಿಂಗಾರದ ನೇಮೋತ್ಸವ





ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ದಿನಾಂಕ 07-02-2026ನೇ ಶನಿವಾರದಂದು ವಾರ್ಷಿಕ ಸಿರಿಸಿಂಗಾರದ ನೇಮೋತ್ಸವವು ಜರಗಲಿರುವುದು.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ, ಶ್ರೀ ದೈವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಧ್ಯಕ್ಷರು ಮತ್ತು ಸರ್ವಸದಸ್ಯರು ಆಡಳಿತ ಸಮಿತಿ, ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂಬೈ ಸಮಿತಿ ಆದಿ ಕಿಲ್ಲಾಡಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ದೈವಸ್ಥಾನ, ಕಿಲ್ಪಾಡಿ,
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮುಂಬಯಿ ಸಮಿತಿ.
ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಆದಿ ಕಿಲ್ಪಾಡಿ ಶ್ರೀ ಧೂಮಾವತಿ ಸೇವಾ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಹಾಗೂ ಕಿಲ್ಪಾಡಿ ಗ್ರಾಮಸ್ಥರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ಕಾರ್ಯಕ್ರಮಗಳ ವಿವರ

ದಿನಾಂಕ: 06-02-2026, ಶುಕ್ರವಾರ
ಬೆಳಿಗ್ಗೆ 9:00 ರಿಂದ:

  • ಶ್ರೀ ನಾಗದೇವರ ಸನ್ನಿಧಿಯಲ್ಲಿ: ಶ್ರೀ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಆಶ್ಲೇಷಾ ಬಲಿ, ಪ್ರಸನ್ನ ಪೂಜೆ ಹಾಗೂ ಶ್ರೀ ರಕ್ತೇಶ್ವರಿಗೆ ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ.
  • ಶ್ರೀ ದೈವ ಸನ್ನಿಧಿಯಲ್ಲಿ: ಪಂಚಾಮೃತ ಅಭಿಷೇಕ ಹಾಗೂ ಶ್ರೀ ದೈವಗಳಿಗೆ ಕಾಲಾವಧಿ ನಡೆಯುವ ನವಕ ಕಲಶಾಭಿಷೇಕ, ನೂತನ ರಜತ ಖಡ್ಗಕ್ಕೆ (ಆಯುಧ) ಕಲಶಾಭಿಷೇಕ ಪನಿಯಾರ ಸೇವೆ.
    ಸಂಜೆ 5:30ಕ್ಕೆ:
  • ನಾಗಸಾನಿಧ್ಯದ ಶ್ರೀ ರಕ್ತೇಶ್ವರಿಗೆ ತಂಬಿಲ ಸೇವೆ.
    ಸಂಜೆ 5:30ರಿಂದ:
  • ಕೈದುಪೂಜೆ (ತಂಬಿಲ ಸೇವೆ), ಶ್ರೀ ಕಾಂತಬಾರೆ ಬೂದಬಾರೆಯವರಿಗೆ ಅಗೇಲು ಸೇವೆ, ತುಡರ ಬಲಿ (ಊರಪರವೂರ ದಾನಿಗಳ ಸಹಕಾರದಲ್ಲಿ).
  • ವಿಶೇಷ ಸೇವೆ: ಶ್ರೀ ಜಾರಂದಾಯ ದೈವಕ್ಕೆ ರಜತ ಖಡ್ಸಲೆ (ಆಯುಧ) ಸಮರ್ಪಣೆ.
    ದಿನಾಂಕ: 07-02-2026, ಶನಿವಾರ
  • ಬೆಳಿಗ್ಗೆ 7:30ರಿಂದ: ಶುದ್ಧ ಹೋಮ.
  • ಬೆಳಿಗ್ಗೆ 9:30ಕ್ಕೆ: ಚಪ್ಪರ ಮುಹೂರ್ತ.
  • ಬೆಳಿಗ್ಗೆ 11:00ಕ್ಕೆ: ಭಂಡಾರ ಇಳಿಯುವುದು.
  • ಮಧ್ಯಾಹ್ನ 1:00ಕ್ಕೆ: ಅನ್ನಸಂತರ್ಪಣೆ.
  • ಸಂಜೆ 4:30ರಿಂದ 5:30ರವರೆಗೆ: ಆದಿ ಕಿಲ್ಪಾಡಿ ಶ್ರೀ ಧೂಮಾವತಿ ಕುಣಿತ ಭಜನಾ ಮಂಡಳಿಯವರಿಂದ ಕುಣಿತ ಭಜನೆ.
  • ಗೌರವ ಸನ್ಮಾನ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಮತಿ ಸಿಂಧು ಗುಜರನ್ ಅವರಿಗೆ ಸನ್ಮಾನ.
  • ಸಂಜೆ 5:30ಕ್ಕೆ: ಶ್ರೀ ಉಳ್ಳಾಯ ದೈವದ ನೇಮ.
  • ಸಂಜೆ 6:30ಕ್ಕೆ: ಶ್ರೀ ಮೈಸಂದಾಯ ದೈವದ ನೇಮ.
  • ರಾತ್ರಿ 8:30ಕ್ಕೆ: ಶ್ರೀ ಕಾಂತಬಾರೆ-ಬೂದಬಾರೆಯ ವೀರ ಚರಿತ್ರೆಯ ಪಠಣ (ಪಾರ್ದನ).
  • ರಾತ್ರಿ 9:00ಕ್ಕೆ: ಶ್ರೀ ಧೂಮಾವತಿ ಜಾರಂದಾಯ ಬಂಟ ದೈವಗಳ ನೇಮ.
  • ನಂತರ: ಶ್ರೀ ಪಂಜುರ್ಲಿ ದೈವದ ನೇಮ, ಭಂಡಾರ ನಿರ್ಗಮನ.
    ದಿನಾಂಕ: 09-02-2026, ಸೋಮವಾರ
  • ಬೆಳಿಗ್ಗೆ 8:00ರಿಂದ: ಶುದ್ಧ ಹೋಮ.



Related posts

ಮೀರಾ ದಹಾಣು ಬಂಟ್ಸ್ (ರಿ) ಅ10.ಆಟಿದ ಕೂಟ . ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಫೆ. 1, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ.

Mumbai News Desk

ಡಿ.12 ರಿಂದ 23 ರ ವರಗೆ ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

Mumbai News Desk

ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ೧೫ನೆಯ ವಾರ್ಷಿಕ ಸಮಾವೇಶ, “ಹೊರನಾಡಿನಲ್ಲಿ ತುಳುವರು” ಕೃತಿ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ, ನೃತ್ಯ ವೈಭವ ಹಾಗೂ ನಾಟಕ ಪ್ರದರ್ಶನ

Mumbai News Desk

ನಾಳೆ (ಮಾ.1) ಪನ್ವೇಲ್‌ನಲ್ಲಿ ‘ಕುಲಾಲ ಕ್ರೀಡೋತ್ಸವ – 2026’

Mumbai News Desk

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಗುರು ಸಂದೇಶ ಸಾಮರಸ್ಯ ಜಾಥಾ 2025..

Mumbai News Desk