April 2, 2025
ಸುದ್ದಿ

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್

ಮುಂಬಯಿ ವಿನ್ಯಾಸ ಸಂಸ್ಥೆ “ಸುವಿದ”ದ ಪ್ರವರ್ತಕ, ಮುಂಬೈ ಕುಲಾಲ ಸಂಘದ ಹಿರಿಯ ಸದಸ್ಯ ದಿವಂಗತ ಸುಂದರ್ ಕರ್ಮರನ್ ಅವರ ಸುಪುತ್ರ ಸೂರಜ್ ಹಂಡೇಲ್ ಮತ್ತು ಜ್ಯೋತಿ ಸೂರಜ್ ಹಂಡೇಲ್ ಇವರ ಸುಪುತ್ರ ಕುಮಾರಿ ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ರಂಗ ಪ್ರವೇಶ ಸಮಾರಂಭವು ಅ. 20ರಂದು ಮೈಸೂರು ಅಸೋಷಿಯೇಷನ್ ಮಾಟುಂಗಾದ ಸಭಾಗ್ರಹದಲ್ಲಿ (ಮಧ್ಯ ರೈಲ್ವೆ) ನಡೆಯಿತು .
ನೃತ್ಯ ಗುರು ಆನಂದ ಸಚ್ಚಿದಾನಂದನ್ ಮತ್ತು ಜಯಲಕ್ಷ್ಮಿ ಆನಂದ್ ಇವರ ಶಿಷ್ಯೆ ಸುರವಿ ಹಂಡೇಲ್ ಇವರು ಈಗಾಗಲೇ ಭರತನಾಟ್ಯದಲ್ಲಿ ಉತ್ತಮ ತರಬೇತಿ ಪಡೆದಿದ್ದು ಒರ್ವ ಪ್ರತಿಭಾವಂತ ಭರತನಾಟ್ಯ ಕಲಾವಿದೆ.
ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ಸಂದರ್ಭದಲ್ಲಿ ಸೂರಜ್ ಮತ್ತು ಜ್ಯೋತಿ ಸೂರಜ್ ಅವರ ಪರಿವಾರದವರು ಹಿತೈಷಿಗಳು ಹಾಗೂ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯನ್ ಮತ್ತಿತರ ಪದಾಧಿಕಾರಿಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಮಂಗಳೂರು ಇದರ ಆಡಳಿತ ಮುಕ್ತೆಸರ ಪುರುಷೋತ್ತಮ್ ಕುಲಾಲ್ ಕಲ್ಬಾವ ಮತ್ತಿತರರು ಉಪಸ್ತರಿದ್ದು ಆಶೀರ್ವದಿಸಿದರು.

Related posts

ಇನ್ನಂಜೆ ಹಾಲು ಉತ್ಪಾದಕರ ಸಂಘ ದ ನೂತನ ಅಧ್ಯಕ್ಷರಾಗಿ ಶಿವರಾಮ್ ಜೆ ಶೆಟ್ಟಿ ಮಂಡೇಡಿ ಆಯ್ಕೆ,

Mumbai News Desk

ವಿಶ್ವ ಬಂಟರ ಸಮ್ಮೇಳನದ ಖರ್ಚು ವೆಚ್ಚಗಳ ಸಭೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ನಿಮಿತ್ತ ಪೂರ್ವಬಾವೀ ಸಭೆ

Mumbai News Desk

ಬಜೆಟ್ ನಲ್ಲಿ ನಿರ್ಲಕ್ಷ್ಯ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಗ್ರಹ* ಬಂಟರ ಅಭಿವೃದ್ದಿ ನಿಗಮ ಸ್ಥಾಪಿಸಿ : ಐಕಳ ಹರೀಶ್ ಶೆಟ್ಟಿ

Mumbai News Desk

ಬೊಯಿಸರ್ ನಿತ್ಯಾನಂದ ಸ್ವಾಮಿ ಮಂದಿರದ 14 ನೆಯ ವಾರ್ಷಿಕೋತ್ಸವ ಸಂಪನ್ನ

Mumbai News Desk

ಕರ್ನಿರೆ ಸುವರ್ಣ ಪ್ರತಿಷ್ಠಾನದಿಂದ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ   ಸಮ್ಮಾನ 

Mumbai News Desk