30 C
Mumbai
September 10, 2026
Mumbai News Kannada
ಸುದ್ದಿ

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.






ಕಲ್ಯಾಣಿ ಬಿ. ಪಾತ್ರಿಯವರ ಪುತ್ರ ಶ್ರೀಯುತ ರಮೇಶ್ ಉಚ್ಚಿಲ ಅವರು ಶ್ರೀಮತಿ ತೀರ್ಥ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ಥರ ಪರವಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗಾಗಲೇ 25 ಶಿಲಾಸೇವೆಯನ್ನು ನೀಡಿದ್ದು 31/10/2023ನೇ ಮಂಗಳವಾರ 50 ಶಿಲಾಸೇವೆಯನ್ನು ನೀಡಿ ಒಟ್ಟು 75 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಿಸಿ “ಕಾಪುವಿನ ಅಮ್ಮನ ಮಕ್ಕಳ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಅವರಿಗೂ ಅವರ ಕುಟುಂಬ – ಸಂಸಾರಕ್ಕೂ ಶ್ರೀದೇವಿಯು ಸಂಪೂರ್ಣ ಅನುಗ್ರಹವನ್ನು ಕರುಣಿಸಲಿ. ಆಯುರಾರೋಗ್ಯ ಭಾಗ್ಯವನ್ನೂ, ಸಕಲ ಸಿರಿ ಸಂಪದವನ್ನು ಶ್ರೀ ಮಾರಿಯಮ್ಮ ದಯಪಾಲಿಸಲಿ ಎಂದು ದೇವಿಯ ಪದತಲದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪ್ರಾರ್ಥನೆ.

ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ತಂತ್ರಿ ಕಲ್ಯಾ, ಜೀರ್ಣೋದ್ಧಾರ ಸಮಿತಿಯ ಪ್ರಚಾರ ಸಮಿತಿಯ ಸಂಚಾಲಕರಾದ ಶ್ರೀ ಶ್ರೀಧರ್ ಕಾಂಚನ್ ಮತ್ತು ದೇವಳದ ಪ್ರಬಂಧಕರಾದ ಶ್ರೀ ಗೋವರ್ಧನ್ ಸೇರಿಗಾರ್ ಉಪಸ್ಥಿತರಿದ್ದರು.



Related posts

ತಿರುಮಲದಲ್ಲಿ ವಿಜೃಂಭಣೆಯಿಂದ ನಡೆದ ಪುರಂದರ ದಾಸರ ಆರಾಧನ ಮಹೋತ್ಸವ

Mumbai News Desk

ಉಡುಪಿ: ಬಜೆ ಮೊಗವೀರ ಸುವರ್ಣ ಮೂಲಸ್ಥಾನದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

Mumbai News Desk

ತಮಿಳುನಾಡು : ನಟ-ರಾಜಕಾರಣಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತಕ್ಕೆ 31 ಮಂದಿ ಬಲಿ, 40 ಜನರ ಸ್ಥಿತಿ ಚಿಂತಾಜನಕ

Mumbai News Desk

ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಗೆ ಕಾರ್ಕಳದ ಪ್ರತಿಭೆ ಸಿಂಚನ್ ಎ. ಪೂಜಾರಿ ಆಯ್ಕೆ: ಕರ್ನಾಟಕಕ್ಕೆ ಹೆಮ್ಮೆಯ ಗೌರವ

Mumbai News Desk

ಮೋದಿ-ಪುಟಿನ್ ಭೇಟಿ: ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

Mumbai News Desk

ಮಣ್ಣಿನ ಮಗನ ಜಾಗತಿಕ ಗರ್ಜನೆ: ಆಸ್ಕರ್ ಅಂಗಳಕ್ಕೆ ‘ಕಾಂತಾರ ಚಾಪ್ಟರ್ ಒನ್’ ಲಗ್ಗೆ

Mumbai News Desk