30.9 C
Mumbai
June 8, 2026
Mumbai News Kannada
ಸುದ್ದಿ

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್





ಮುಂಬಯಿ ವಿನ್ಯಾಸ ಸಂಸ್ಥೆ “ಸುವಿದ”ದ ಪ್ರವರ್ತಕ, ಮುಂಬೈ ಕುಲಾಲ ಸಂಘದ ಹಿರಿಯ ಸದಸ್ಯ ದಿವಂಗತ ಸುಂದರ್ ಕರ್ಮರನ್ ಅವರ ಸುಪುತ್ರ ಸೂರಜ್ ಹಂಡೇಲ್ ಮತ್ತು ಜ್ಯೋತಿ ಸೂರಜ್ ಹಂಡೇಲ್ ಇವರ ಸುಪುತ್ರ ಕುಮಾರಿ ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ರಂಗ ಪ್ರವೇಶ ಸಮಾರಂಭವು ಅ. 20ರಂದು ಮೈಸೂರು ಅಸೋಷಿಯೇಷನ್ ಮಾಟುಂಗಾದ ಸಭಾಗ್ರಹದಲ್ಲಿ (ಮಧ್ಯ ರೈಲ್ವೆ) ನಡೆಯಿತು .
ನೃತ್ಯ ಗುರು ಆನಂದ ಸಚ್ಚಿದಾನಂದನ್ ಮತ್ತು ಜಯಲಕ್ಷ್ಮಿ ಆನಂದ್ ಇವರ ಶಿಷ್ಯೆ ಸುರವಿ ಹಂಡೇಲ್ ಇವರು ಈಗಾಗಲೇ ಭರತನಾಟ್ಯದಲ್ಲಿ ಉತ್ತಮ ತರಬೇತಿ ಪಡೆದಿದ್ದು ಒರ್ವ ಪ್ರತಿಭಾವಂತ ಭರತನಾಟ್ಯ ಕಲಾವಿದೆ.
ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ಸಂದರ್ಭದಲ್ಲಿ ಸೂರಜ್ ಮತ್ತು ಜ್ಯೋತಿ ಸೂರಜ್ ಅವರ ಪರಿವಾರದವರು ಹಿತೈಷಿಗಳು ಹಾಗೂ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯನ್ ಮತ್ತಿತರ ಪದಾಧಿಕಾರಿಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಮಂಗಳೂರು ಇದರ ಆಡಳಿತ ಮುಕ್ತೆಸರ ಪುರುಷೋತ್ತಮ್ ಕುಲಾಲ್ ಕಲ್ಬಾವ ಮತ್ತಿತರರು ಉಪಸ್ತರಿದ್ದು ಆಶೀರ್ವದಿಸಿದರು.



Related posts

ಬಂಟ್ಸ್ ಫೋರಮ್ ಮೀರಾ-ಭಾಯಂದರ್ ವತಿಯಿಂದ ತಿರುಪತಿ ಯಾತ್ರೆ

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk

ಉಡುಪಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಸಮಾಲೋಚನಾ ಸಭೆ.

Mumbai News Desk

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಪ್ರತಿಷ್ಠಿತ ರಾಷ್ಟ್ರೀಯ ಜವಾಬ್ದಾರಿ: ಮಹಾತ್ಮ ಜ್ಯೋತಿರಾವ್ ಫುಲೆ 200ನೇ ಜನ್ಮ ದಿನಾಚರಣೆಯ ಉನ್ನತ ಮಟ್ಟದ ಸಮಿತಿಗೆ ನಾಮನಿರ್ದೇಶನ

Mumbai News Desk

ಬಿಲ್ಲವರ ಎಸೋಸಿಯೇಶನ ನ ಮಾಜಿ ಉಪಾಧ್ಯಕ್ಷ ಸಿ. ಟಿ. ಸಾಲ್ಯಾನ್ ನಿಧನ

Mumbai News Desk

ಪ್ರೇಕ್ಷಕರನ್ನು ಮನರಂಜಿಸಿದ ‌ಕೊಂಕಣಿ ಹಾಸ್ಯ  ನಾಟಕ ‘ ಲಗ್ನಾ ಪಿಶ್ಶ್ಯೆ ‘

Mumbai News Desk