July 23, 2026
Mumbai News Kannada
ಸುದ್ದಿ

ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್







ಮುಂಬಯಿ ವಿನ್ಯಾಸ ಸಂಸ್ಥೆ “ಸುವಿದ”ದ ಪ್ರವರ್ತಕ, ಮುಂಬೈ ಕುಲಾಲ ಸಂಘದ ಹಿರಿಯ ಸದಸ್ಯ ದಿವಂಗತ ಸುಂದರ್ ಕರ್ಮರನ್ ಅವರ ಸುಪುತ್ರ ಸೂರಜ್ ಹಂಡೇಲ್ ಮತ್ತು ಜ್ಯೋತಿ ಸೂರಜ್ ಹಂಡೇಲ್ ಇವರ ಸುಪುತ್ರ ಕುಮಾರಿ ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ರಂಗ ಪ್ರವೇಶ ಸಮಾರಂಭವು ಅ. 20ರಂದು ಮೈಸೂರು ಅಸೋಷಿಯೇಷನ್ ಮಾಟುಂಗಾದ ಸಭಾಗ್ರಹದಲ್ಲಿ (ಮಧ್ಯ ರೈಲ್ವೆ) ನಡೆಯಿತು .
ನೃತ್ಯ ಗುರು ಆನಂದ ಸಚ್ಚಿದಾನಂದನ್ ಮತ್ತು ಜಯಲಕ್ಷ್ಮಿ ಆನಂದ್ ಇವರ ಶಿಷ್ಯೆ ಸುರವಿ ಹಂಡೇಲ್ ಇವರು ಈಗಾಗಲೇ ಭರತನಾಟ್ಯದಲ್ಲಿ ಉತ್ತಮ ತರಬೇತಿ ಪಡೆದಿದ್ದು ಒರ್ವ ಪ್ರತಿಭಾವಂತ ಭರತನಾಟ್ಯ ಕಲಾವಿದೆ.
ಸುರವಿ ಹಂಡೇಲ್ ಇವರ ಭರತನಾಟ್ಯ ಆರಂಗೇಟ್ರಮ್ ಸಂದರ್ಭದಲ್ಲಿ ಸೂರಜ್ ಮತ್ತು ಜ್ಯೋತಿ ಸೂರಜ್ ಅವರ ಪರಿವಾರದವರು ಹಿತೈಷಿಗಳು ಹಾಗೂ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಗೌರವಾಧ್ಯಕ್ಷ ದೇವದಾಸ್ ಕುಲಾಲ್, ಮಾಜಿ ಅಧ್ಯಕ್ಷ ಗಿರೀಶ್ ಬಿ ಸಾಲಿಯನ್ ಮತ್ತಿತರ ಪದಾಧಿಕಾರಿಗಳು ಸ್ಥಳೀಯ ಸಮಿತಿಯ ಪದಾಧಿಕಾರಿಗಳು ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಮಂಗಳೂರು ಇದರ ಆಡಳಿತ ಮುಕ್ತೆಸರ ಪುರುಷೋತ್ತಮ್ ಕುಲಾಲ್ ಕಲ್ಬಾವ ಮತ್ತಿತರರು ಉಪಸ್ತರಿದ್ದು ಆಶೀರ್ವದಿಸಿದರು.



Related posts

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿಯ ವತಿಯಿಂದ ಶ್ರೀ ಶನಿಶಿಂಗ್ನಪುರದಲ್ಲಿ ಶ್ರೀ ಶನಿಗ್ರಂಥ ಪಾರಾಯಣ ಪೂಜೆ

Mumbai News Desk

ಶ್ರೀ ಸುಬ್ರಮಣ್ಯ ಮಹಾಗಣಪತಿ ಸ್ಪೋರ್ಟ್ ಕ್ಲಬ್ ತೋಕೂರು ಗೆ, ಅರಸು ಪ್ರಶಸ್ತಿ 2024

Mumbai News Desk

ಕರ್ನಾಟಕ : ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ.

Mumbai News Desk

ಪಡುಬಿದ್ರಿ ನಡಿಪಟ್ನ ಮೊಗವೀರ ಮಹಾಸಭಾ ಮುಂಬಯಿ ಶಾಖೆಯ 136ನೇ ವಾರ್ಷಿಕ ಮಹಾಸಭೆ.

Mumbai News Desk

ಆರ್ಥಿಕ ಕ್ರಾಂತಿಯ ಹರಿಕಾರ, ಸಮಾಜ ಸೇವಕ ವರದ ಉಳ್ಳಾಲ್ ಅಸ್ತಂಗತ : ಮುಂಬೈನಲ್ಲಿ ಇಂದು ಅಂತ್ಯಕ್ರಿಯೆ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ, ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ.

Mumbai News Desk