April 2, 2025
ಮುಂಬಯಿ

ನೀರನ್ನು ಕುದಿಸಿ, ಪಿಲ್ಟರ್ ಮಾಡಿ ಬಳಸಿ ಬಿ ಎಂ ಸಿಯಿಂದ ಮುಂಬೈ ಜನತೆಗೆ ಸಲಹೆ

ಕಳೆದ ಕೆಲವು ದಿನಗಳಿಂದ ಬಾಟ್ಸಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನೀರಿನ ಪ್ರಕ್ಷುಬ್ದತೆ ಹೆಚ್ಚಳದ ನಂತರ ಮುಂಬೈ ನಾಗರಿಕರು ನೀರನ್ನು ಕುದಿಸಿ, ಫಿಲ್ಟರ್ ಮಾಡಿ ಬಳಸುವಂತ್ತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸಲಹೆ ನೀಡಿದೆ.


ಕಳೆದ ಮೂರರಿಂದ ನಾಲ್ಕು ದಿನಗಳಿಂದ ಭಟ್ಸಾ ಜಲಾಶಯದ ಜಲನಯನ ಪ್ರದೇಶದಲ್ಲಿ ನಿರಂತರ ಮಳೆ ದಾಖಲಾಗಿರುವುದರ ಪರಿಣಾಮ ಅಕ್ಟೋಬರ್ 21ರಿಂದ ನದಿ ನಾಲೆಯಲ್ಲಿ ನೀರಿನ ಪ್ರಕ್ಷುಬ್ದತೆಯ ಹೆಚ್ಚಳವನ್ನು ಗಮನಿಸಲಾಗಿದ್ದು, ಮುಂಬೈನ ಪೂರ್ವ ಉಪನಗರಗಳು ಮತ್ತು ನಗರ ಪ್ರದೇಶದ ಕೆಲವು ಕಡೆಗಳಲ್ಲಿ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಬಿ ಎಂ ಸಿ ಯ ಹೈಡ್ರಾಲಿಕ್ ಎಂಜಿನಿಯರಿಂಗ್ ವಿಭಾಗ ನೀರು ಶುದ್ದಿಕರಣ ಘಟಕದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.


ಅದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ನಾಗರಿಕರನ್ನು ಸೇವಿಸುವ ಮೊದಲು ನೀರನ್ನು ಫಿಲ್ಟರ್ ಮಾಡಿ ಮತ್ತು ಕುದಿಸಿ ಎಂದು ಒತ್ತಾಯಿಸುತದೆ.
ಬಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಮುಂಬೈ ನಾಗರಿಕರಿಗೆ ಏಳು ಜಲ ಮೂಲಗಳಿಂದ ನೀರನ್ನು ಪೂರೈಸುತ್ತಿದೆ, ಕಳೆದ ಮೂರು ನಾಲ್ಕು ದಿನಗಳಿಂದ ಭಟ್ಸಾ ನದಿಯ ಜಲನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ 2024ರ ಅಕ್ಟೋಬರ್ 21ರಿಂದ ನದಿ ಕಾಲುವೆಗಳಿಗೆ ಪ್ರವೇಶಿಸುವ ನೀರು ಹೆಚ್ಚಿದ ಪ್ರಕ್ಷುಬ್ದತೆ ತೋರಿಸಿದೆ.

Related posts

ಶ್ರೀ ಅಯ್ಯಪ್ಪ ಸೇವಾ ಸಮಿತಿ ಪೋರ್ಟ್ ಮುಂಬಯಿ, 41 ನೇ ವಾರ್ಷಿಕ ಮಹಾಪೂಜೆ, ಇರುಮುಡಿ ಸೇವೆ ಸಂಪನ್ನ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ಸಂಭ್ರಮದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಶಿವಸೇನೆ ದಕ್ಷಿಣ ಭಾರತೀಯ ಘಟಕ ಥಾಣೆ ಮತ್ತು ಶ್ರೀ ಮೂಕಾಂಬಿಕಾ ಸೋಶಿಯಲ್ ವೆಲ್ಫೆರ್ ಫೌಂಡೇಶನ್ (ರಿ) ಡೊಂಬಿವಿಲಿ ಇದರ ಜಂಟಿ ಆಶ್ರಯದಲ್ಲಿ ಅರಶಿನ ಕುಂಕುಮ ಕಾರ್ಯಕ್ರಮ

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ, ನೃತ್ಯ ಸ್ಪರ್ಧೆ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಅಭಿನ್ ಆಚಾರ್ಯ 88.40

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk