July 23, 2026
Mumbai News Kannada
ಮುಂಬಯಿ

ನೀರನ್ನು ಕುದಿಸಿ, ಪಿಲ್ಟರ್ ಮಾಡಿ ಬಳಸಿ ಬಿ ಎಂ ಸಿಯಿಂದ ಮುಂಬೈ ಜನತೆಗೆ ಸಲಹೆ







ಕಳೆದ ಕೆಲವು ದಿನಗಳಿಂದ ಬಾಟ್ಸಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನೀರಿನ ಪ್ರಕ್ಷುಬ್ದತೆ ಹೆಚ್ಚಳದ ನಂತರ ಮುಂಬೈ ನಾಗರಿಕರು ನೀರನ್ನು ಕುದಿಸಿ, ಫಿಲ್ಟರ್ ಮಾಡಿ ಬಳಸುವಂತ್ತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಸಲಹೆ ನೀಡಿದೆ.


ಕಳೆದ ಮೂರರಿಂದ ನಾಲ್ಕು ದಿನಗಳಿಂದ ಭಟ್ಸಾ ಜಲಾಶಯದ ಜಲನಯನ ಪ್ರದೇಶದಲ್ಲಿ ನಿರಂತರ ಮಳೆ ದಾಖಲಾಗಿರುವುದರ ಪರಿಣಾಮ ಅಕ್ಟೋಬರ್ 21ರಿಂದ ನದಿ ನಾಲೆಯಲ್ಲಿ ನೀರಿನ ಪ್ರಕ್ಷುಬ್ದತೆಯ ಹೆಚ್ಚಳವನ್ನು ಗಮನಿಸಲಾಗಿದ್ದು, ಮುಂಬೈನ ಪೂರ್ವ ಉಪನಗರಗಳು ಮತ್ತು ನಗರ ಪ್ರದೇಶದ ಕೆಲವು ಕಡೆಗಳಲ್ಲಿ ನೀರು ಕಲುಷಿತಗೊಂಡಿದ್ದು, ಈ ಬಗ್ಗೆ ಬಿ ಎಂ ಸಿ ಯ ಹೈಡ್ರಾಲಿಕ್ ಎಂಜಿನಿಯರಿಂಗ್ ವಿಭಾಗ ನೀರು ಶುದ್ದಿಕರಣ ಘಟಕದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.


ಅದಾಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಬ್ರಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ನಾಗರಿಕರನ್ನು ಸೇವಿಸುವ ಮೊದಲು ನೀರನ್ನು ಫಿಲ್ಟರ್ ಮಾಡಿ ಮತ್ತು ಕುದಿಸಿ ಎಂದು ಒತ್ತಾಯಿಸುತದೆ.
ಬಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಮುಂಬೈ ನಾಗರಿಕರಿಗೆ ಏಳು ಜಲ ಮೂಲಗಳಿಂದ ನೀರನ್ನು ಪೂರೈಸುತ್ತಿದೆ, ಕಳೆದ ಮೂರು ನಾಲ್ಕು ದಿನಗಳಿಂದ ಭಟ್ಸಾ ನದಿಯ ಜಲನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ 2024ರ ಅಕ್ಟೋಬರ್ 21ರಿಂದ ನದಿ ಕಾಲುವೆಗಳಿಗೆ ಪ್ರವೇಶಿಸುವ ನೀರು ಹೆಚ್ಚಿದ ಪ್ರಕ್ಷುಬ್ದತೆ ತೋರಿಸಿದೆ.



Related posts

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ತುಳು ಸಂಘ ಬೊರಿವಲಿ ವತಿಯಿಂದ ಶಾಲಾ ಪರಿಕರಗಳ ವಿತರಣೆ”

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ ಆಶಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಕಾಂದಿವಲಿ ಕನ್ನಡ ಸಂಘದಿಂದ ನವದೇವಿ ಮಂದಿರಗಳ ದರ್ಶನ: ಮಹಿಳಾ ವಿಭಾಗದ ಪವಿತ್ರ ಯಾತ್ರೆ

Mumbai News Desk

ಭಾರತ್ ಬ್ಯಾಂಕ್, ಬೊಯಿಸರ್ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಉತ್ಸಾಹಭರಿತವಾಗಿ ಆಚರಣೆ

Mumbai News Desk

ಮಲಾಡ್   ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆಯ 12ನೇ ವಾರ್ಷಿಕ ಮಹಾಪೂಜೆ

Mumbai News Desk