ಮುಂಬಯಿ : ತುಳು ಸಂಘ ಬೊರಿವಲಿಯ ವಾರ್ಷಿಕ ಸ್ನೇಹ ಮಿಲನ ಕಾರ್ಯಕ್ರಮವು ಡಿ. 8 ರಂದು ರವಿವಾರ ಎಸ್ಟೆಲ್ಲಾ ರೆಸೋರ್ಟ್, ಗೋರಾಯಿ ಇಲ್ಲಿ ಸಂಘದ ಗೌರವ ಅಧ್ಯಕ್ಷರಾದ ಡಾ. ವಿರಾರ್ ಶಂಕರ್ ಶೆಟ್ಟಿ ಮತ್ತು ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ಇವರ ಮಾರ್ಗದರ್ಶನದಲ್ಲಿ ದಿನ ಪೂರ್ತಿ ನಡೆಯಲಿದೆ.
ಅಂದು ಸಂಘದ ಎಲ್ಲಾ ಹಿರಿ ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆ ಹಾಗೂ ಇತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಇತರ ಪದಾಧಿಕಾರಿಗಳಾದ ತಿಲ್ಲೋತ್ತಮ ವೈದ್ಯ , ವಿಜಯಲಕ್ಷಿ ದೇವಾಡಿಗ, ಚಂದ್ರಹಾಸ ಬೆಳ್ಚಡ, ಪೂರ್ಣಿಮಾ ಪೂಜಾರಿ, ಲಕ್ಷ್ಮೀ ದೇವಾಡಿಗ, ವಸುಧಾ ಪೈ ಅಧವಾ ಮೊಬೈಲ್ ಕ್ರಮಾಂಕ 820699611/ 820699611 ಇವರನ್ನು ಡಿ. 1 ರ ಮೊದಲು ಸಂಪರ್ಕಿಸಬಹುದು ಎಂಬುದಾಗಿ ಸಂಘದ ಕಾರ್ಯಕಾರಿ ಸಮಿತಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
