April 1, 2025
ಪ್ರಕಟಣೆ

ಮಾ. 9, ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ: ಮಹಿಳಾ ಸಂಪದ ಸಂಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಥಾಣೆ;  ಬಿಲ್ಲವ ಸೇವಾ ಸಂಘ ಕುಂದಾಪುರ, ಮುಂಬಯಿ, ಮಹಿಳಾ ಸಂಪದ ಸಂಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮನೋರಂಜನಾ ಕಾರ್ಯಕ್ರಮವು ಮಾರ್ಚ್ 9 ರ ರವಿವಾರದಂದು  ಥಾಣೆ ಪಶ್ಚಿಮದ ಶಿವಾಜಿ ಪಥ, ಜಗದೀಶ್ ಬುಕ್ ಡೀಪೊದ ಹತ್ತಿರದ ಸಂತೋಷಿ ಮಾತ ಸಭಾಗೃಹದಲ್ಲಿ ಅಪರಾಹ್ನ 3.30 ಗಂಟೆಗೆ ಸರಿಯಾಗಿ ಸಂಘದ ಅಧ್ಯಕ್ಷರಾದ ಸಿ.ಎ.ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾದ್ಯಾಪಕಿ ಡಾ. ಪೂರ್ಣಿಮಾ ಎಸ್. ಶೆಟ್ಟಿ, ಗೌರವ ಅತಿಥಿಯಾಗಿ ಉದ್ಯಮಿ ಸಮಾಜ ಸೇವಕಿ ಯಶೋದ ಎನ್. ಪೂಜಾರಿ, ಅತಿಥಿಯಾಗಿ ಸೆಂಟ್ ಲಾರೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ನ ಶಿಕ್ಷಕಿ ಸರೋಜ ಎಸ್.ಅಮಾತಿ , ಅತಿಥಿಯಾಗಿ ಶಿಕ್ಷಣ ಕಾರ್ಯಕ್ರಮದ ನೇತೃತ್ವ ವಹಿಸಿದ ರೂಪ ಪಿ. ಬಿಲ್ಲವ ಭಾಗವಹಿಸಲಿದ್ದಾರೆ.
ಈ ಸಂದರ್ಭ ಸಂಘದ  ಪ್ರಥಮ ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಸಮಾಜ ಸೇವಕಿ, ಸಂಘದ ಪೋಷಕರಾದ ಗುಲಾಬಿ ಬಾಬು ಪೂಜಾರಿ ಹಾಗೂ ಜಲಜ ಅಣ್ಣಯ್ಯ ಕೋಡಿ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳಾ ವಿಭಾಗದ ಸದಸ್ಯರಿಂದ ಮತ್ತು ಮಕ್ಕಳಿಂದ ನೃತ್ಯ ವಿವಿಧ ವಿನೋದಾವಳಿ ನಡೆಯಲಿದೆ. ಕುಂದಾಪುರ ಬಿಲ್ಲವ ಸೇವಾ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕೆಂದು ಸಂಘದ ಗೌರವ ಅಧ್ಯಕ್ಷರಾ್ ಸುರೇಶ್ ಪೂಜಾರಿ, ಅಧ್ಯಕ್ಷ ಸಿ.ಎ ಪೂಜಾರಿ, ಉಪಾಧ್ಯಕ್ಷರಾದ ಎಸ್.ಕೆ.ಪೂಜಾರಿ, ಬೇಬಿ ರಂಗ ಪೂಜಾರಿ, ಗೌ.ಪ್ರ ಕಾರ್ಯದರ್ಶಿ ಸುಧಾಕರ ಸಿ.ಪೂಜಾರಿ, ಗೌ. ಕೋಶಾಧಿಕಾರಿ ಭಾಸ್ಕರ ಕೆ.ಪೂಜಾರಿ, ಯುವ ಸಂಪದ ಸಮಿತಿಯ ಕಾರ್ಯಾಧ್ಯಕ್ಷ ಉದಯ ಪೂಜಾರಿ, ಧಾರ್ಮಿಕ ಮತ್ತು ಸಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ ಪೂಜಾರಿ, ಮಹಿಳಾ ಸಂಪದ ಕಾರ್ಯಾಧ್ಯಕ್ಷೆ ಸುಶೀಲಾ ಸುರೇಶ್ ಪೂಜಾರಿ, ಉಪಕಾರ್ಯಾಧ್ಯಕ್ಷೆ ಗಿರಿಜ ಕೆ.ಹೊಕ್ಕೊಳ್ಳಿ, ಸುಮತಿ ಎಸ್. ಪೂಜಾರಿ, ಮಹಿಳಾ ಸಂಪದ ಕಾರ್ಯದರ್ಶಿ ಶಾರದಾ ಬಾಬು ಪೂಜಾರಿ, ಜತೆ ಕಾರ್ಯದರ್ಶಿ ವಿಮಲಾ ಎಸ್ . ಪೂಜಾರಿ, ಸುಜಾತ ಪೂಜಾರಿ ಹಾಗೂ ಅಡಳಿತ ಮಂಡಳಿ, ಉಪ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಬಂಟರ ಸಂಘ ಮುಂಬಯಿ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿ ಮಾ 30: ಮಾತಾ ಕಿ ಚೌಕಿ ಕಾರ್ಯಕ್ರಮ.

Mumbai News Desk

ಡಿ. 29. ಕನಕದಾಸ ಜಯಂತಿ, ಕುವೆಂಪು ಜಯಂತಿ ಗೌರವಾರ್ಥ,ಕರ್ನಾಟಕ ರಾಜ್ಯೋತ್ಸವ ಸಂಭ್ರಮ – ಕರುನಾಡ ಡಿಂಡಿಮ – 2024.

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿಸೆ. 18ರಂದು ಶೀರೂರು ಮಠಾಧಿಪತಿ, ಪೂಜ್ಯ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಗುರುವಂದನೆ.

Mumbai News Desk

ಭಾಯಂದರ್  ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿ, ಜು.21:   ಭಾಯಂದರ್ ಪೂರ್ವದಲ್ಲಿ  “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk