September 6, 2026
Mumbai News Kannada
ಪ್ರಕಟಣೆ

ನವೆಂಬರ್ 28 ರಿಂದ ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಅಖಿಲ ಭಾರತೀಯ ವೈದ್ಯರ ಕ್ರಿಕೆಟ್ ಟೂರ್ನಮೆಂಟ್ ಆರಂಭ






ಸುದ್ದಿ ವಿವರ : ಪಿ.ಆರ್.ರವಿಶಂಕರ್.


ವೈದ್ಯಕೀಯ ಕ್ಷೇತ್ರದಲ್ಲಿನ ಸುಪ್ರಸಿದ್ಧ ತುಂಗಾ ಹಾಸ್ಪಿಟಲ್ ಸಂಸ್ಥೆಯು ತನ್ನ ಏಳನೆಯ ವಾರ್ಷಿಕ ಕ್ರಿಕೆಟ್ ಕ್ರೀಡಾ ಕೂಟವನ್ನು ಇದೇ ನವೆಂಬರ್ ತಿಂಗಳ ತಾ.28, 29 ಮತ್ತು 30 ರಂದು ಬೊಯಿಸರ್ ನಲ್ಲಿ ಆಯೋಜಿಸಿದೆ..
ಶ್ರೇಷ್ಟ ದರ್ಜೆಯ ಹಾಗೂ ಆಧುನಿಕ ವೈದ್ಯಕೀಯ ಸೇವೆಗಳಿಗೆ ಹೆಸರುವಾಸಿಯಾದ ತುಂಗಾ ಆಸ್ಪತ್ರೆ ಸಮೂಹವು ಮಲಾಡ್, ಮೀರಾ ರೋಡ್ , ಬೊಯಿಸರ್ , ಅಂಧೇರಿ ಜುಹು ಹಾಗೂ ಬೆಂಗಳೂರಿನಲ್ಲಿ ತನ್ನ ಶುಶ್ರೂಷಾ ಶಾಖಾ ಕೇಂದ್ರಗಳನ್ನು ಹೊಂದಿದೆ.
ವರ್ಷಪೂರ್ತಿ ವೈದ್ಯಕೀಯ ಕ್ಷೇತ್ರದಲ್ಲಿ ಸದಾ ಬಿಡುವಿಲ್ಲದೆಯೇ ಕಾರ್ಯನಿರತರಾಗಿರುವ ವೈದ್ಯರಿಗೆ ಸ್ವಲ್ಪ ಬದಲಾವಣೆ ಹಾಗೂ ಸ್ಪೂರ್ತಿಯನ್ನು ನೀಡುವ ಸದುದ್ದೇಶದಿಂದ ಪ್ರತೀ ವರ್ಷವೂ ಈ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸುತ್ತಾ ಬಂದಿದ್ದು ಎಲ್ಲರ ಮೆಚ್ಚುಗೆ ಗಳಿಸಿದೆ.
ಟಾಟಾ ಸ್ಟೀಲ್ಸ್ ಹಾಗೂ ಇತರ ಸಂಸ್ಥೆಯ ಸಹಯೋಗದಿಂದ ಬೊಯಿಸರ್ ಟಾಟಾ ಸ್ಟೀಲ್ ಗ್ರೌಂಡ್ , ಬೊಯಿಸರ್ ಪಿಡಿಟಿಎಸ್ ಸ್ಪೋರ್ಟ್ಸ್ ಗ್ರೌಂಡ್ ಹಾಗೂ ಚಿಕ್ಲಿಕರ್ ಗ್ರೌಂಡ್ ನಲ್ಲಿ ಜರಗುವ ಅಖಿಲ ಭಾರತ ಡಾಕ್ಟರ್ಸ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಕರ್ನಾಟಕ , ಹರ್ಯಾಣ, ಕೇರಳ , ಪುಣೆ , ಔರಂಗಾಬಾದ್ ಮತ್ತು ಇತರ ಭಾಗಗಳಿಂದ ಕಾರ್ಯನಿರತ ವೈದ್ಯರು ಬಂದು ಭಾಗವಹಿಸಲಿದ್ದಾರೆ. ಸ್ಥಳೀಯ ಕ್ರಿಕೆಟ್ ಕ್ರೀಡಾ ಪ್ರೇಮಿಗಳಿಗೆ ಇದೊಂದು ಸುವರ್ಣವಕಾಶವಾಗಿದೆ ಎಂದು ಆಯೋಜಕರಾದ ಟೂರ್ನಮೆಂಟ್ ನೇತೃತ್ವ ವಹಿಸಿದ ತುಂಗಾ ಹಾಸ್ಪಿಟಲ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರಾದ ( ಸಿ ಎಮ್ ಡಿ) ಡಾ • ಸತೀಶ್ ಶೆಟ್ಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಸುದ್ದಿ ವಿವರ : ಪಿ.ಆರ್.ರವಿಶಂಕರ್ , ಡಹಾಣೂ ರೋಡ್ 8483980035



Related posts

ಡಿ.10 ರಂದು ಕರ್ನಾಟಕ ಸಂಘ, ಡೊಂಬಿವಲಿಯ ನಾಡಹಬ್ಬ ಸಮಾರಂಭ

Mumbai News Desk

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಶ್ರೀ ಧರ್ಮಶಾಸ್ತ ಭಕ್ತವೃಂದ ದೋಲ್ಗೊಟ್ಟು, ಕೆಲ್ಲಪುತ್ತಿಗೆ ಜ 4 ಮತ್ತು 5, ರಂದು 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಹಾಗೂ ಅನ್ನಸಂತರ್ಪಣೆ”

Mumbai News Desk

ಜೂನ್ 14ರಂದು ಅಂಧೇರಿಯಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿಯ ಆಯೋಜನೆಯಲ್ಲಿ ವಿವಿಧ ಕಾರ್ಯಕ್ರಮಗಳ ವೈಭವ: ಲೋಗೋ ಅನಾವರಣ ಹಾಗೂ ಆಪ್ ಬಿಡುಗಡೆ

Mumbai News Desk

ಉಡುಪಿ ಶ್ರೀ ಭಗವಾನ್ ನಿತ್ಯಾನಂದ ಮಂದಿರ-ಮಠದಲ್ಲಿ ಜುಲೈ 29ರಂದು ವಿಜೃಂಭಣೆಯ “ಶ್ರೀ ಗುರು ಪೂರ್ಣಿಮಾ ಮಹೋತ್ಸವ”

Mumbai News Desk

ಸೆ. 29ರಂದು ಮಲಾಡ್ ಕನ್ನಡ ಸಂಘ 23ನೇ ವಾರ್ಷಿಕ ಮಹಾಸಭೆ

Mumbai News Desk