34.4 C
Karnataka
April 17, 2025
ಸುದ್ದಿ

ಓಟಗಾರ ಬಾಕಿಯಾದರೂ ಬಹುಮಾನ ಗೆದ್ದ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ಕೋಣಗಳು. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗುರುಪುರ ಕಂಬಳ.



—–

ಮಂಗಳೂರು, ಎ. 17: ಕೋಣಗಳಿಗೆ ಕಟ್ಟಿದ್ದ ನೇಗಿಲು ಕಳಚಿ ಬಿದ್ದು ಓಟಗಾರ ಬಾಕಿಯಾದರೂ ಕೋಣಗಳು  ಶಿಸ್ತಿನಿಂದ ಓಡಿ ಪ್ರಥಮ ಬಹುಮಾನ ಪಡೆದ ಅಪರೂಪದ ಸನ್ನಿವೇಶಕ್ಕೆ ಗುರುಪುರದ ‘ಮೂಳೂರು-ಅಡ್ಡರು’ ಜೋಡುಕರೆ ಕಂಬಳ ಸಾಕ್ಷಿಯಾಯಿತು.

ಆಗಿದ್ದೇನು?

ನೇಗಿಲು ಹಿರಿಯ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ‘ಚಾನ್ಸ್’ ವಿಭಾಗ ಆರಂಭವಾಯಿತು. ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ‘ಬಿ’ ಕೋಣಗಳು (‘ಬಾರ್ಗಿ’ ಹಾಗೂ ‘ಬೊಳ್ಳೆ’ ಕೋಣಗಳು) ‘ಅದ್ದೂರು’ ಕರೆಯಲ್ಲಿತ್ತು. ಬಂಬ್ರಾಣಬೈಲು ವಂದಿತ್ ಶೆಟ್ಟಿ ಕೋಣ ಓಡಿಸಲು ತಯಾರಾಗಿದ್ದರು. ಮಾಣಿ ಸಾಗು ತನ್ವಿ ಶೆಟ್ಟಿ (ಮಿನ್ನು ಹಾಗೂ ಸಂತು ಕೋಣಗಳು) ಅವರ ಕೋಣಗಳು ‘ಮೂಳೂರು’ ಕರೆಯಲ್ಲಿತ್ತು. ಎರಡೂ ಕರೆಯ ಕೋಣಗಳು ಓಟಕ್ಕೆ ಅಣಿಯಾಗಿದ್ದವು

ಆಗ ‘ಫ್ಲ್ಯಾಗ್’ ಎತ್ತಿ ಕೋಣಗಳ ಓಟಕ್ಕೆ ಸೂಚನೆಯೂ ಬಂತು. ಆದರೆ ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟಿ ಅವರ ಕೋಣಗಳ ನೇಗಿಲು ತುಂಡಾಯಿತು. ಓಟಗಾರ ಬಂಬ್ರಾಣ ವಂದಿತ್ ಶೆಟ್ಟಿ ಅವರ ಕೈಯಲ್ಲೇ ನೇಗಿಲು ಉಳಿಯಿತು. ಓಟಗಾರನಿಗೂ ಏನೂ ಮಾಡಲು ಆಗಲಿಲ್ಲ. ಆದರೆ ಜೋಡಿ ಕೋಣಗಳು ಮಾತ್ರ (‘ಬಾರ್ಗಿ’ ಹಾಗೂ ‘ಬೊಳ್ಳೆ)

ಸ್ವಲವೂ ಗೊಂದಲವಿಲ್ಲದೆ ಓಟ ಮುಂದುವರಿಸಿತು. ವೇಗದ ಓಟದಲ್ಲೇ ಸಾಗಿದ ಕೋಣಗಳು ಪ್ರತಿಸ್ಪರ್ಧಿ ಕೋಣಗಳ ಎದುರಲ್ಲಿ ಗೆಲುವಿನ ದಾಖಲೆ ಬರೆದವು.

ವಿಶೇಷವೆಂದರೆ, ಇದೇ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಹಿಂದೆಯೂ ನಡೆದಿತ್ತು

ಈ ಹಿಂದೆ 1981ರಲ್ಲಿ ಕೊಂಬ್ರಬೈಲು ಅಮ್ಮು ಪೂಜಾರಿ ಅವರ ಜೋಡಿ ಕೋಣಗಳು ನೇಗಿಲು ಹಿರಿಯ ವಿಭಾಗದ ಫೈನಲ್ ಪಂದ್ಯದಲ್ಲಿ ನೇಗಿಲು ಓಟಗಾರನ ಕೈತಪ್ಪಿದರೂ ಕೇವಲ ಕೋಣಗಳೇ ಓಡುವ ಮೂಲಕ ಅಂದು ಪ್ರಥಮ ಸ್ಥಾನ ಬಂದಿರುವುದನ್ನು ಕಂಬಳಾಭಿಮಾನಿಗಳು ನೆನಪು ಮಾಡುತ್ತಾರೆ.

Related posts

ಡಾ. ಭರತ್ ಕುಮಾರ್ ಪೊಲಿಪು ಅವರಿಗೆ ಮಾತೃ ವಿಯೋಗ.

Mumbai News Desk

ಚಿತ್ರರಂಗದ ಮಿನುಗು ತಾರೆ ರೀಟಾ ಆರ್. ಅಂಚನ್ ವಿಧಿವಶ

Mumbai News Desk

ಕೇಂದ್ರ ಬಜೆಟ್ 2025ರ ಪ್ರಮುಖ ಮುಖ್ಯಾಂಶಗಳು

Mumbai News Desk

ಕರ್ನಾಟಕ : ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ   ಸದಸ್ಯರಾಗಿ ಗಣೇಶ್ ಶೆಟ್ಟಿ ತನಿಷ್ಕ, ಮತ್ತು ಹರೀಶ್ ಶೆಟ್ಟಿ ಪಡುಕುದ್ರು ಇವರು ಸೇರ್ಪಡೆ

Mumbai News Desk

ಮಂಗಳೂರಿಗೊಂದು ಹೊಸ ರಂಗ ಮಂದಿರ – ಕಲಾಗ್ರಾಮದ ಉದ್ಘಾಟನಾ ಸಮಾರಂಭ

Mumbai News Desk