32 C
Mumbai
March 7, 2026
Mumbai News Kannada
ಸುದ್ದಿ

ಓಟಗಾರ ಬಾಕಿಯಾದರೂ ಬಹುಮಾನ ಗೆದ್ದ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ಕೋಣಗಳು. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗುರುಪುರ ಕಂಬಳ.





—–

ಮಂಗಳೂರು, ಎ. 17: ಕೋಣಗಳಿಗೆ ಕಟ್ಟಿದ್ದ ನೇಗಿಲು ಕಳಚಿ ಬಿದ್ದು ಓಟಗಾರ ಬಾಕಿಯಾದರೂ ಕೋಣಗಳು  ಶಿಸ್ತಿನಿಂದ ಓಡಿ ಪ್ರಥಮ ಬಹುಮಾನ ಪಡೆದ ಅಪರೂಪದ ಸನ್ನಿವೇಶಕ್ಕೆ ಗುರುಪುರದ ‘ಮೂಳೂರು-ಅಡ್ಡರು’ ಜೋಡುಕರೆ ಕಂಬಳ ಸಾಕ್ಷಿಯಾಯಿತು.

ಆಗಿದ್ದೇನು?

ನೇಗಿಲು ಹಿರಿಯ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ‘ಚಾನ್ಸ್’ ವಿಭಾಗ ಆರಂಭವಾಯಿತು. ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ‘ಬಿ’ ಕೋಣಗಳು (‘ಬಾರ್ಗಿ’ ಹಾಗೂ ‘ಬೊಳ್ಳೆ’ ಕೋಣಗಳು) ‘ಅದ್ದೂರು’ ಕರೆಯಲ್ಲಿತ್ತು. ಬಂಬ್ರಾಣಬೈಲು ವಂದಿತ್ ಶೆಟ್ಟಿ ಕೋಣ ಓಡಿಸಲು ತಯಾರಾಗಿದ್ದರು. ಮಾಣಿ ಸಾಗು ತನ್ವಿ ಶೆಟ್ಟಿ (ಮಿನ್ನು ಹಾಗೂ ಸಂತು ಕೋಣಗಳು) ಅವರ ಕೋಣಗಳು ‘ಮೂಳೂರು’ ಕರೆಯಲ್ಲಿತ್ತು. ಎರಡೂ ಕರೆಯ ಕೋಣಗಳು ಓಟಕ್ಕೆ ಅಣಿಯಾಗಿದ್ದವು

ಆಗ ‘ಫ್ಲ್ಯಾಗ್’ ಎತ್ತಿ ಕೋಣಗಳ ಓಟಕ್ಕೆ ಸೂಚನೆಯೂ ಬಂತು. ಆದರೆ ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟಿ ಅವರ ಕೋಣಗಳ ನೇಗಿಲು ತುಂಡಾಯಿತು. ಓಟಗಾರ ಬಂಬ್ರಾಣ ವಂದಿತ್ ಶೆಟ್ಟಿ ಅವರ ಕೈಯಲ್ಲೇ ನೇಗಿಲು ಉಳಿಯಿತು. ಓಟಗಾರನಿಗೂ ಏನೂ ಮಾಡಲು ಆಗಲಿಲ್ಲ. ಆದರೆ ಜೋಡಿ ಕೋಣಗಳು ಮಾತ್ರ (‘ಬಾರ್ಗಿ’ ಹಾಗೂ ‘ಬೊಳ್ಳೆ)

ಸ್ವಲವೂ ಗೊಂದಲವಿಲ್ಲದೆ ಓಟ ಮುಂದುವರಿಸಿತು. ವೇಗದ ಓಟದಲ್ಲೇ ಸಾಗಿದ ಕೋಣಗಳು ಪ್ರತಿಸ್ಪರ್ಧಿ ಕೋಣಗಳ ಎದುರಲ್ಲಿ ಗೆಲುವಿನ ದಾಖಲೆ ಬರೆದವು.

ವಿಶೇಷವೆಂದರೆ, ಇದೇ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಹಿಂದೆಯೂ ನಡೆದಿತ್ತು

ಈ ಹಿಂದೆ 1981ರಲ್ಲಿ ಕೊಂಬ್ರಬೈಲು ಅಮ್ಮು ಪೂಜಾರಿ ಅವರ ಜೋಡಿ ಕೋಣಗಳು ನೇಗಿಲು ಹಿರಿಯ ವಿಭಾಗದ ಫೈನಲ್ ಪಂದ್ಯದಲ್ಲಿ ನೇಗಿಲು ಓಟಗಾರನ ಕೈತಪ್ಪಿದರೂ ಕೇವಲ ಕೋಣಗಳೇ ಓಡುವ ಮೂಲಕ ಅಂದು ಪ್ರಥಮ ಸ್ಥಾನ ಬಂದಿರುವುದನ್ನು ಕಂಬಳಾಭಿಮಾನಿಗಳು ನೆನಪು ಮಾಡುತ್ತಾರೆ.



Related posts

ಮಹಾಕುಂಭ ಮೇಳಕ್ಕೆ ಹರಿದುಬಂದ ಭಕ್ತ ಸಾಗರ: ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ; ಹಲವರ ಸಾವು ಶಂಕೆ, ಅಮೃತಸ್ನಾನಕ್ಕೆ ತಾತ್ಕಾಲಿಕ ತಡೆ

Mumbai News Desk

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾಧ್ಯಕ್ಷ, ಸಮಾಜ ಸೇವಕ ಡಿ. ಆರ್. ರಾಜು ನಿಧನ,ಗಣ್ಯರ ಸಂತಾಪ

Mumbai News Desk

ಕಾಪು ಶ್ರೀ ಹೊಸಮಾರಿಗುಡಿಯ ಜೀರ್ಣೋದ್ಧಾರಕ್ಕೆ ರಮೇಶ್ ಉಚ್ಚಿಲ ಮತ್ತು ಕುಟುಂಬಸ್ತರಿಂದ 75 ಶಿಲಾ ಸೇವೆ.

Mumbai News Desk

70ನೇ ಕನ್ನಡ ರಾಜ್ಯೋತ್ಸವ: ಕನ್ನಡಿಗರಿಗೆ ಕನ್ನಡದಲ್ಲೇ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Mumbai News Desk

ಬೊಯಿಸರ್ ನಿತ್ಯಾನಂದ ಸ್ವಾಮಿ ಮಂದಿರದ 14 ನೆಯ ವಾರ್ಷಿಕೋತ್ಸವ ಸಂಪನ್ನ

Mumbai News Desk