30.9 C
Mumbai
June 8, 2026
Mumbai News Kannada
ಸುದ್ದಿ

ಓಟಗಾರ ಬಾಕಿಯಾದರೂ ಬಹುಮಾನ ಗೆದ್ದ ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ಕೋಣಗಳು. ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ಗುರುಪುರ ಕಂಬಳ.





—–

ಮಂಗಳೂರು, ಎ. 17: ಕೋಣಗಳಿಗೆ ಕಟ್ಟಿದ್ದ ನೇಗಿಲು ಕಳಚಿ ಬಿದ್ದು ಓಟಗಾರ ಬಾಕಿಯಾದರೂ ಕೋಣಗಳು  ಶಿಸ್ತಿನಿಂದ ಓಡಿ ಪ್ರಥಮ ಬಹುಮಾನ ಪಡೆದ ಅಪರೂಪದ ಸನ್ನಿವೇಶಕ್ಕೆ ಗುರುಪುರದ ‘ಮೂಳೂರು-ಅಡ್ಡರು’ ಜೋಡುಕರೆ ಕಂಬಳ ಸಾಕ್ಷಿಯಾಯಿತು.

ಆಗಿದ್ದೇನು?

ನೇಗಿಲು ಹಿರಿಯ ವಿಭಾಗದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ‘ಚಾನ್ಸ್’ ವಿಭಾಗ ಆರಂಭವಾಯಿತು. ಹೊಸ್ಮಾರು ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟರ ‘ಬಿ’ ಕೋಣಗಳು (‘ಬಾರ್ಗಿ’ ಹಾಗೂ ‘ಬೊಳ್ಳೆ’ ಕೋಣಗಳು) ‘ಅದ್ದೂರು’ ಕರೆಯಲ್ಲಿತ್ತು. ಬಂಬ್ರಾಣಬೈಲು ವಂದಿತ್ ಶೆಟ್ಟಿ ಕೋಣ ಓಡಿಸಲು ತಯಾರಾಗಿದ್ದರು. ಮಾಣಿ ಸಾಗು ತನ್ವಿ ಶೆಟ್ಟಿ (ಮಿನ್ನು ಹಾಗೂ ಸಂತು ಕೋಣಗಳು) ಅವರ ಕೋಣಗಳು ‘ಮೂಳೂರು’ ಕರೆಯಲ್ಲಿತ್ತು. ಎರಡೂ ಕರೆಯ ಕೋಣಗಳು ಓಟಕ್ಕೆ ಅಣಿಯಾಗಿದ್ದವು

ಆಗ ‘ಫ್ಲ್ಯಾಗ್’ ಎತ್ತಿ ಕೋಣಗಳ ಓಟಕ್ಕೆ ಸೂಚನೆಯೂ ಬಂತು. ಆದರೆ ಸೂರ್ಯಶ್ರೀ ರತ್ನಾ ಸದಾಶಿವ ಶೆಟ್ಟಿ ಅವರ ಕೋಣಗಳ ನೇಗಿಲು ತುಂಡಾಯಿತು. ಓಟಗಾರ ಬಂಬ್ರಾಣ ವಂದಿತ್ ಶೆಟ್ಟಿ ಅವರ ಕೈಯಲ್ಲೇ ನೇಗಿಲು ಉಳಿಯಿತು. ಓಟಗಾರನಿಗೂ ಏನೂ ಮಾಡಲು ಆಗಲಿಲ್ಲ. ಆದರೆ ಜೋಡಿ ಕೋಣಗಳು ಮಾತ್ರ (‘ಬಾರ್ಗಿ’ ಹಾಗೂ ‘ಬೊಳ್ಳೆ)

ಸ್ವಲವೂ ಗೊಂದಲವಿಲ್ಲದೆ ಓಟ ಮುಂದುವರಿಸಿತು. ವೇಗದ ಓಟದಲ್ಲೇ ಸಾಗಿದ ಕೋಣಗಳು ಪ್ರತಿಸ್ಪರ್ಧಿ ಕೋಣಗಳ ಎದುರಲ್ಲಿ ಗೆಲುವಿನ ದಾಖಲೆ ಬರೆದವು.

ವಿಶೇಷವೆಂದರೆ, ಇದೇ ಕೋಣಗಳು ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಹಿಂದೆಯೂ ನಡೆದಿತ್ತು

ಈ ಹಿಂದೆ 1981ರಲ್ಲಿ ಕೊಂಬ್ರಬೈಲು ಅಮ್ಮು ಪೂಜಾರಿ ಅವರ ಜೋಡಿ ಕೋಣಗಳು ನೇಗಿಲು ಹಿರಿಯ ವಿಭಾಗದ ಫೈನಲ್ ಪಂದ್ಯದಲ್ಲಿ ನೇಗಿಲು ಓಟಗಾರನ ಕೈತಪ್ಪಿದರೂ ಕೇವಲ ಕೋಣಗಳೇ ಓಡುವ ಮೂಲಕ ಅಂದು ಪ್ರಥಮ ಸ್ಥಾನ ಬಂದಿರುವುದನ್ನು ಕಂಬಳಾಭಿಮಾನಿಗಳು ನೆನಪು ಮಾಡುತ್ತಾರೆ.



Related posts

ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಗೆ ಬೆಂಕಿ – 20 ಪ್ರಯಾಣಿಕರು ಸಜೀವ ದಹನ

Mumbai News Desk

ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸಭೆ.

Mumbai News Desk

ರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಮತ್ತು ಸಬಲೀಕರಣ ಸಮಸ್ಯೆಗಳ ಬಗ್ಗೆ ಚರ್ಚೆ.

Mumbai News Desk

ಬೆಂಗಳೂರು – ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಸೇವೆಗೆ ಅಧಿಕೃತ ಚಾಲನೆ

Mumbai News Desk

ಮುಂಬೈ : ಥಾಣೆಯಲ್ಲಿ ಪೈಪ್‌ಲೈನ್ ಸೋರಿಕೆ: ಏಪ್ರಿಲ್ 11 ರಿಂದ 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತ

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk