32 C
Mumbai
March 7, 2026
Mumbai News Kannada
ಸುದ್ದಿ

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ





 

ಕುಲಾಲ ಸಂಘ ಮುಂಬಯಿ ಇದರ,ಪ್ರಾಪರ್ಟಿ ಅಭಿವೃದ್ಧಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ದಾನಿ ಲ |ಜಯರಾಮ್ ಮೂಲ್ಯ(79) ಅವರು ೨೬.೪.೨೦೨೫ ರಂದು  ಅನಾರೋಗ್ಯದಿಂದ ಅವರ ನಿವಾಸವಾದ
ಶ್ರೀ ವರ್ಧನ್, ವಿಬಿ ಫಡಕೆ ರಸ್ತೆ, ಕೇಳ್ಕರ್ ಕಾಲೇಜು ಹತ್ತಿರ, ಮುಲುಂಡ್ ಪೂರ್ವ ಇಲ್ಲಿ ನಿಧನರಾದರು.
ಅವರು ಮೂಲತ  ಬಜ್ಪೆಯ ಅದ್ಯಪಾಡಿಯವರು,ಮೃತರು ಪತ್ನಿ , ಒರ್ವ ಪುತ್ರ. ಒಬ್ಬಳು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಜಯರಾಮ್ ಮೂಲ್ಯ ಅವರು ಮುಲುಂಡ್ ಮಿತ್ರವೃಂದ ದ  ಪದಾಧಿಕಾರಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಲೆ, ಕಲಾವಿದರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಮುಂಬಯಿ ಕುಲಾಲ ಸಂಘದ ಸೇವಾದಳದಲ್ಲಿ ಸೇವಾ ಕರ್ತರಾಗಿ, ಆಸ್ತಿ ಅಭಿವೃದ್ಧಿ ಸಮಿತಿಯ ಕಾರ್ಯ ಧ್ಯಕ್ಷರಾಗಿ,ಸಂಘದ ಥಾಣೆ ಗೊಡ್ ಬಂದರ್ ನಲ್ಲಿರುವ ಜಾಗದ ಅಭಿವೃದ್ಧಿಗಾಗಿ ದಿವಂಗತ ಪಿ ಕೆ ಸಾಲಿಯಾನ್ ಅವರೊಂದಿಗೆ ಅಪಾರವಾಗಿ ಶ್ರಮಿಸಿದವರು. ಸಂಘದ ವಿವಿಧ ಯೋಜನೆಗಳಿಗೆ ಸದಾ ಸಹಕಾರವನ್ನು ನೀಡುತ್ತಾ, ವಿವಿಧ ಪದವಿಗಳನ್ನು ಅಲಂಕರಿಸಿಕೊಂಡವರು.ಮುಲುಂಡ್‌ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿಕೊಂಡವರು.
ಅವರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಕುಲಾಲ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

   ಲ !ಜಯರಾಮ್ ಮೂಲ್ಯ ನಿಧಾನಕ್ಕೆ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ. ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮತ್ತಿತರ ಪದಾಧಿಕಾರಿಗಳು. ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲಿಯಾನ್ ಮತ್ತಿತರ ಸದಸ್ಯರು ದುಃಖ ಸಂತಾಪ ಸೂಚಿಸಿರುವರು.

B. Dinesh Kulal

Mob.: 9821868674



Related posts

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನ  ದ  , 50ನೇ ವಾರ್ಷಿಕ ಮಹಾಪೂಜೆ, ಗೆ ಚಾಲನೆ.

Mumbai News Desk

ನವದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ, 18 ಜನರ ಸಾವು

Mumbai News Desk

ಬೆಂಗಳೂರು : ದಕ್ಷಿಣ ಕನ್ನಡಿಗರ ಸಂಘದ ಸಂಭ್ರಮಾಚರಣೆ, ಸಾಧಕರಿಗೆ ಪ್ರಶಸ್ತಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರಿಗೆ ‘ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ,

Mumbai News Desk

ಬೊಯಿಸರ್  ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಗುರುಪೂರ್ಣಿಮೆ

Mumbai News Desk

‘ಮಿಸ್ ಟೀನ್ ಗ್ಯಾಲಕ್ಟಿಕ್ ಯೂನಿವರ್ಸ್ ಇಂಡಿಯಾ 2026’ ದಕ್ಷಿಣ ಭಾರತದ ವಿಜೇತರ ಪಟ್ಟ ಅಲಂಕರಿಸಿದ ಪೂರ್ವಿ ಏಕನಾಥ ಕುಲಾಲ್

Mumbai News Desk

ನಿಶಾ ಪೂಜಾರಿ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ

Mumbai News Desk