32 C
Mumbai
April 24, 2026
Mumbai News Kannada
ಸುದ್ದಿ

ಮುಲುಂಡ್‌ :    ಲ!  ಜಯರಾಮ್ ಮೂಲ್ಯ ನಿಧನ





 

ಕುಲಾಲ ಸಂಘ ಮುಂಬಯಿ ಇದರ,ಪ್ರಾಪರ್ಟಿ ಅಭಿವೃದ್ಧಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ, ದಾನಿ ಲ |ಜಯರಾಮ್ ಮೂಲ್ಯ(79) ಅವರು ೨೬.೪.೨೦೨೫ ರಂದು  ಅನಾರೋಗ್ಯದಿಂದ ಅವರ ನಿವಾಸವಾದ
ಶ್ರೀ ವರ್ಧನ್, ವಿಬಿ ಫಡಕೆ ರಸ್ತೆ, ಕೇಳ್ಕರ್ ಕಾಲೇಜು ಹತ್ತಿರ, ಮುಲುಂಡ್ ಪೂರ್ವ ಇಲ್ಲಿ ನಿಧನರಾದರು.
ಅವರು ಮೂಲತ  ಬಜ್ಪೆಯ ಅದ್ಯಪಾಡಿಯವರು,ಮೃತರು ಪತ್ನಿ , ಒರ್ವ ಪುತ್ರ. ಒಬ್ಬಳು ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಜಯರಾಮ್ ಮೂಲ್ಯ ಅವರು ಮುಲುಂಡ್ ಮಿತ್ರವೃಂದ ದ  ಪದಾಧಿಕಾರಿಯಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಕಲೆ, ಕಲಾವಿದರಿಗೆ ಸದಾ ಪ್ರೋತ್ಸಾಹವನ್ನು ನೀಡುತ್ತಾ ಬಂದವರು. ಮುಂಬಯಿ ಕುಲಾಲ ಸಂಘದ ಸೇವಾದಳದಲ್ಲಿ ಸೇವಾ ಕರ್ತರಾಗಿ, ಆಸ್ತಿ ಅಭಿವೃದ್ಧಿ ಸಮಿತಿಯ ಕಾರ್ಯ ಧ್ಯಕ್ಷರಾಗಿ,ಸಂಘದ ಥಾಣೆ ಗೊಡ್ ಬಂದರ್ ನಲ್ಲಿರುವ ಜಾಗದ ಅಭಿವೃದ್ಧಿಗಾಗಿ ದಿವಂಗತ ಪಿ ಕೆ ಸಾಲಿಯಾನ್ ಅವರೊಂದಿಗೆ ಅಪಾರವಾಗಿ ಶ್ರಮಿಸಿದವರು. ಸಂಘದ ವಿವಿಧ ಯೋಜನೆಗಳಿಗೆ ಸದಾ ಸಹಕಾರವನ್ನು ನೀಡುತ್ತಾ, ವಿವಿಧ ಪದವಿಗಳನ್ನು ಅಲಂಕರಿಸಿಕೊಂಡವರು.ಮುಲುಂಡ್‌ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿಕೊಂಡವರು.
ಅವರ ಅಂತ್ಯಕ್ರಿಯೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಕುಲಾಲ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

   ಲ !ಜಯರಾಮ್ ಮೂಲ್ಯ ನಿಧಾನಕ್ಕೆ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ. ಗೌರವಾಧ್ಯಕ್ಷ ದೇವದಾಸ್ ಕುಲಾಲ್. ಮತ್ತಿತರ ಪದಾಧಿಕಾರಿಗಳು. ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲಿಯಾನ್ ಮತ್ತಿತರ ಸದಸ್ಯರು ದುಃಖ ಸಂತಾಪ ಸೂಚಿಸಿರುವರು.

B. Dinesh Kulal

Mob.: 9821868674



Related posts

ಸವಿತಾ ಎಸ್. ರೈ ಅವರಿಗೆ ಪಿಎಚ್.ಡಿ ಪದವಿ

Mumbai News Desk

ಬಂಟ್ವಾಳ ವೀರ ವಿಕ್ರಮ ಜೋಡುಕರೆ ಕಂಬಳ,ಧಾರ್ಮಿಕ ಮುಖಂಡ ಡಾ. ಎಮ್ ‌ಜೆ ಪ್ರವೀಣ್ ಭಟ್ ಅವರಿಗೆ ಸನ್ಮಾನ,

Mumbai News Desk

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ಕರ್ನಿರೆ ವಿಶ್ವನಾಥ್ ಶೆಟ್ಟಿ ಯವರಿಗೆ ಮಾತೃ ವಿಯೋಗ

Mumbai News Desk

ಕಾಂದಿವಲಿ: ಯೂನಿಯನ್ ಬ್ಯಾಂಕ್ ನಿವೃತ್ತ ಅಧಿಕಾರಿ ಕುಸುಮಲತಾ ಸುವರ್ಣ ನಿಧನ

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ :17ನೇ ವರ್ಧಂತ್ಯುತ್ಸವ ಸಂಪನ್ನ  

Mumbai News Desk