September 6, 2026
Mumbai News Kannada
ಸುದ್ದಿ

ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 1981-82 ರ ಹಳೆ ವಿದ್ಯಾರ್ಥಿಗಳ ಸಮ್ಮಿಲನ:





ಉಡುಪಿ: ಉಡುಪಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 1981-82 ರ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉಪನ್ಯಾಸಕರ ಉಪಸ್ಥಿತಿಯಲ್ಲಿ ಜರಗಿತು. ನಿವೃತ್ತ ಉಪನ್ಯಾಸಕರಾದ ಡಾ| ಎಂ.ಆರ್.ಹೆಗಡೆ, ಡಾ| ಟಿ.ಎನ್.ರಾಮಕೃಷ್ಣ (TNR), ಮೋಹನ್ ಕಲ್ಲೂರಾಯರವರು ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮವು ಜಾನಕಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಸುಧಾಕರ ಶೆಟ್ಟಿಯವರು ಸ್ವಾಗತಿಸಿದರು. ನಂತರ ಉಪನ್ಯಾಸಕರಿಗೆ ಗೌರವಾರ್ಪಣೆ ಮಾಡಿ ಗುರುಗಳ ಆಶೀರ್ವಾದ ಪಡೆದು ಕೃತಾರ್ಥರೆನಿಸಿಕೊಂಡರು. ಜೀವನದ ಮೌಲ್ಯಗಳ ಬಗ್ಗೆ ಉಪನ್ಯಾಸಕರು ಸಂದೇಶ ನೀಡಿ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಮುಂದಿನ ವರ್ಷ 60ರ ಸಂಭ್ರಮದಲ್ಲಿರುವ ಕಾಲೇಜಿನ ಇತಿಹಾಸದಲ್ಲಿ ಇಂತಹ ಸಮ್ಮಿಲನ ನಡೆದದ್ದು ಪ್ರಥಮ ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ ವಿಧ್ಯಾರ್ಥಿಗಳು ತಮ್ಮ ತಮ್ಮ ಪರಿಚಯ ನೀಡಿ ಕಾರ್ಯಕ್ರಮದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಯೋಜಿಸಿದ ಅಲೆವೂರು ನಾಗರಾಜ ಆಚಾರ್ಯ, ಬೈಕಾಡಿ ಸೂರಪ್ಪ ಕುಂದರ್ ಮುಂಬಯಿ, ಹಾಗೂ ಸಕು ಪಾಂಗಾಳ ಇವರನ್ನು ಉಪನ್ಯಾಸಕರು ಗೌರವಿಸಿದರು.
ಮನೋರಂಜನೆಗಾಗಿ ಮುಂಬಯಿಯ ಜಾದೂಗಾರ ಸೂರಪ್ಪ ಕುಂದರ್ ಹಾಗೂ ಶಾಂತಾರಾಮ ಶೆಟ್ಟಿ ಬಳ್ಳಾರಿಯವರು ಜಾದೂ ಪ್ರದರ್ಶನ ನೀಡಿ ರಂಜಿಸಿದರು. ಸಕು ಪಾಂಗಾಳ ಕಾರ್ಯಕ್ರಮ ನಿರೂಪಿಸಿದರು.ಕೊನೆಯಲ್ಲಿ ಸುರೇಶ್ ಬೈಲೂರು ವಂದನಾರ್ಪಣೆ ಗೈದರು.



Related posts

ಬಿಲ್ಲವ ಸಮುದಾಯದ ವಿರುದ್ಧ ಅನಿತಾ ಕಾಸರಗೋಡು ಹೇಳಿಕೆ: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ತೀವ್ರ ಖಂಡನೆ

Mumbai News Desk

ಭಾರತ್ ಬ್ಯಾಂಕ್ ಗೆ “ಅತ್ಯುತ್ತಮ ಐಟಿ ರಿಸ್ಕ್ ಮ್ಯಾನೇಜ್ಮೆಂಟ್ ಪ್ರಶಸ್ತಿ” ಯ ಗರಿ

Mumbai News Desk

ನಿಟ್ಟೆ ವಿಶ್ವವಿದ್ಯಾಲಯದ   ಮಹಾಲಿಂಗ ಅಡ್ಯಂತಾಯ ಮೆಮೊರಿಯಲ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂಲ್ಕಿ ಜೀವನ್ ಕೆ. ಶೆಟ್ಟಿ  ಆಯ್ಕೆ

Mumbai News Desk

ದರ್ಶನ್ ಗೆ 6 ವಾರ ಕಾಲ ಶರತ್ತು ಬದ್ದ ಜಾಮೀನು

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk

ಜಿಲ್ಲಾ ಧಾರ್ಮಿಕ ಪರಿಷತ್ ಸಮಿತಿಯ ಸದಸ್ಯರಾಗಿ ಜಗನ್ನಾಥ ಚೌಟ ಬದಿಗುಡ್ಡೆ ನೇಮಕ

Mumbai News Desk