32 C
Mumbai
March 7, 2026
Mumbai News Kannada
ಮುಂಬಯಿ

ಸಯನ್ ಗೋಕುಲ ಶ್ರೀ ಕೃಷ್ಣ ಮಂದಿರಕ್ಕೆ ನಾಡೋಜ ಜಿ ಶಂಕರ್ ಭೇಟಿ.






ಗೋಕುಲ ಶ್ರೀ ಕೃಷ್ಣ ಮಂದಿರ ತುಳು ಕನ್ನಡಿಗರ ಗೌರವ ನೆಚ್ಚಿಸಿದೆ: ಡಾ. ಜಿ ಶಂಕರ್.


ಚಿತ್ರ ವರದಿ ದಿನೇಶ್ ಕುಲಾಲ್

ಮುಂಬಯಿ ಜೂ 30.ಸಯನ್ ಬಿ ಎಸ್ ಕೆ ಬಿ ಅಸೋಸಿಯೇಶನ್ ಗೋಕುಲ ದೇವಸ್ಥಾನಕ್ಕೆ ಮೊಗವೀರ ಸಮಾಜದ ಕುಲರತ್ನ. ಉಡುಪಿ ಜಿ ಶಂಕರ್ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅವರು
ಭೇಟಿ ನೀಡಿದಾಗ ದೇವಸ್ಥಾನದ ಅಧ್ಯಕ್ಷರಾದ ಡಾ. ಸುರೇಶ್ ರಾವ್ ಅವರು ಕ್ಷೇತ್ರದ ವಿಶೇಷ ಪ್ರಸಾದವನ್ನು ನೀಡಿ ಗೌರವಿಸಿ ದೇವಸ್ಥಾನದ ಸೇವಾಕಾರಿಗಳು ಮತ್ತು ಬಿ ಎಸ್ ಕೆ ಬಿ ಅಸೋಸಿಯೇಷನ್ 100 ವರ್ಷದ ಸಂಭ್ರಮದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಕಲಾಕೃತಿಗಳು ಕೆತ್ತನೆಯ ಕೆಲಸಗಳು ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದ ಡಾ. ಜಿ ಶಂಕರ್ ಅವರು ಮುಂಬೈಯಲ್ಲಿ ವಾಸ್ತವಿರುವ ತುಳು ಕನ್ನಡಿಗರಿಗೆ ಗೋಕುಲ ಸಂಕಿರಣ ಗೌರವವನ್ನು ಹೆಚ್ಚಿಸಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಬಿ ಎಸ್ ಕೆ ಬಿ ಅಸೋಸಿಯೇಷನ್ ಸೇವಾ ಕಾರ್ಯಗಳಲ್ಲಿ ನಮ್ಮ ಸಹಕಾರವಿದೆ ಎಂದು ತಿಳಿಸಿದರು.

. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ದಿವ್ಯಾ ಶಿಪ್ಪಿನ್ಗ್ ನ ಆಡಳಿತ ನಿರ್ದೇಶಕ ವೇದ್ ಪ್ರಕಾಶ್ ಶ್ರೀಯಾನ್, ವಿನಯ್ ಕರ್ಕೇರ, ದಿನೇಶ್ ಎರ್ಮಾಳ್, ದೇವಸ್ಥಾನದ ಕಾರ್ಯದರ್ಶಿ ಅನಂತ್ ಫೋತಿ, ಹರಿದಾಸ್ ಭಟ್ ಉಪಸ್ಥಿತರಿದ್ದರು.



Related posts

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ: ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ‘ಅರಿಶಿನ-ಕುಂಕುಮ’ ಕಾರ್ಯಕ್ರಮ

Mumbai News Desk

ಡೊಂಬಿವಲಿಯ ರಾಧಾಕೃಷ್ಣ ಶನೀಶ್ವರ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿಯ ಭಕ್ತಿಮಯ ಆಚರಣೆ

Mumbai News Desk

ಮಲಾಡ್ ಮಹತೋಭಾರ ಶ್ರೀ ಶನೀಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ ಸಂಭ್ರಮ, ಚಾಲನೆ,

Mumbai News Desk

ಭಾರತ್ ಬ್ಯಾಂಕ್ ಧಾರಾವಿ ಶಾಖೆ –ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk

ವಸಾಯಿ ಕರ್ನಾಟಕ ಸಂಘ: ಅಧ್ಯಕ್ಷರಾಗಿ ಕರ್ನೂರು ಶಂಕರ್ ಆಳ್ವ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಪಿ. ಶೆಟ್ಟಿ ಆಯ್ಕೆ

Mumbai News Desk

ಭಾಯಂದರ್ ಆರಾಧನಾ ಫ್ರೆಂಡ್ಸ್ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.

Mumbai News Desk