30 C
Mumbai
April 24, 2026
Mumbai News Kannada
ಮುಂಬಯಿ

ಸಯನ್ ಗೋಕುಲ ಶ್ರೀ ಕೃಷ್ಣ ಮಂದಿರಕ್ಕೆ ನಾಡೋಜ ಜಿ ಶಂಕರ್ ಭೇಟಿ.






ಗೋಕುಲ ಶ್ರೀ ಕೃಷ್ಣ ಮಂದಿರ ತುಳು ಕನ್ನಡಿಗರ ಗೌರವ ನೆಚ್ಚಿಸಿದೆ: ಡಾ. ಜಿ ಶಂಕರ್.


ಚಿತ್ರ ವರದಿ ದಿನೇಶ್ ಕುಲಾಲ್

ಮುಂಬಯಿ ಜೂ 30.ಸಯನ್ ಬಿ ಎಸ್ ಕೆ ಬಿ ಅಸೋಸಿಯೇಶನ್ ಗೋಕುಲ ದೇವಸ್ಥಾನಕ್ಕೆ ಮೊಗವೀರ ಸಮಾಜದ ಕುಲರತ್ನ. ಉಡುಪಿ ಜಿ ಶಂಕರ್ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್ ಅವರು
ಭೇಟಿ ನೀಡಿದಾಗ ದೇವಸ್ಥಾನದ ಅಧ್ಯಕ್ಷರಾದ ಡಾ. ಸುರೇಶ್ ರಾವ್ ಅವರು ಕ್ಷೇತ್ರದ ವಿಶೇಷ ಪ್ರಸಾದವನ್ನು ನೀಡಿ ಗೌರವಿಸಿ ದೇವಸ್ಥಾನದ ಸೇವಾಕಾರಿಗಳು ಮತ್ತು ಬಿ ಎಸ್ ಕೆ ಬಿ ಅಸೋಸಿಯೇಷನ್ 100 ವರ್ಷದ ಸಂಭ್ರಮದ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ದೇವಸ್ಥಾನದ ಕಲಾಕೃತಿಗಳು ಕೆತ್ತನೆಯ ಕೆಲಸಗಳು ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದ ಡಾ. ಜಿ ಶಂಕರ್ ಅವರು ಮುಂಬೈಯಲ್ಲಿ ವಾಸ್ತವಿರುವ ತುಳು ಕನ್ನಡಿಗರಿಗೆ ಗೋಕುಲ ಸಂಕಿರಣ ಗೌರವವನ್ನು ಹೆಚ್ಚಿಸಿದೆ. ನೂರು ವರ್ಷದ ಸಂಭ್ರಮದಲ್ಲಿರುವ ಬಿ ಎಸ್ ಕೆ ಬಿ ಅಸೋಸಿಯೇಷನ್ ಸೇವಾ ಕಾರ್ಯಗಳಲ್ಲಿ ನಮ್ಮ ಸಹಕಾರವಿದೆ ಎಂದು ತಿಳಿಸಿದರು.

. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷರಾದ ಜಯ ಸಿ. ಕೋಟ್ಯಾನ್, ದಿವ್ಯಾ ಶಿಪ್ಪಿನ್ಗ್ ನ ಆಡಳಿತ ನಿರ್ದೇಶಕ ವೇದ್ ಪ್ರಕಾಶ್ ಶ್ರೀಯಾನ್, ವಿನಯ್ ಕರ್ಕೇರ, ದಿನೇಶ್ ಎರ್ಮಾಳ್, ದೇವಸ್ಥಾನದ ಕಾರ್ಯದರ್ಶಿ ಅನಂತ್ ಫೋತಿ, ಹರಿದಾಸ್ ಭಟ್ ಉಪಸ್ಥಿತರಿದ್ದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಜೀವಿಕ ವಿಜಯಓದ್ಭಾವ ಶೆಟ್ಟಿ ಗೆ ಶೇ 94 ಅಂಕ.

Mumbai News Desk

ಕರ್ನಾಟಕ ಸಂಘ ಮುಂಬಯಿ, ಡಾ.ಸುನೀತಾ ಶೆಟ್ಟಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಮತ್ತು ಕೃತಿ ಬಿಡುಗಡೆ ಸಮಾರಂಭ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ಚಂದನ್ ಗೌಡ ಶೇ.89.80  ಅಂಕ.

Mumbai News Desk

ಭಾಯಂದರ್ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ, ಮೀರಾ ಭಾಯಂದರ್ 16ನೇ ವಾರ್ಷಿಕ ಪಾದಯಾತ್ರೆ.

Mumbai News Desk

ಮುಂಬೈನಲ್ಲಿ 426 ಫ್ಲಾಟ್‌ಗಳು ಲಭ್ಯ : ಬೆಲೆಗಳು ಕೈಗೆಟುಕದ ಕಾರಣ, ಸ್ವಂತ ಮನೆ ಹೊಂದುವವರಿಗೆ ಗ್ರಹ ಖರೀದಿ ಒಂದು ಮರೀಚಿಕೆಯೇ?

Mumbai News Desk