ಶ್ರೀ ಕ್ಷೇತ್ರ ಓಡಿಯೂರಿನ ಒಡೆಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಜುಲೈ 24, ಗುರುವಾರ, ಸಂಜೆ 6 ಗಂಟೆಗೆ ಅಂಧೇರಿ ಪಶ್ಚಿಮ ವೀರ ದೇಸಾಯಿ ಮಾರ್ಗ, ಶ್ರೀ ಮಹಾಲಕ್ಷ್ಮೀ ಕಾಲನಿಯ ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಗೆ ಭೇಟಿ ನೀಡಿ ಗುರುಭಕ್ತರನ್ನು ಹರಸಲಿರುವರು.
ಅಂದು ಸಂಜೆ 6 ರಿಂದ 7ರ ತನಕ ಭಜನೆ, 7ರಿಂದ 7.30 ಸ್ವಾಮೀಜಿ ಅವರ ಪಾದಪೂಜೆ, 7.30 ರಿಂದ 8.30 – ಆಶೀರ್ವಚನ, ಬಳಿಕ ಪ್ರಸಾದ ವಿತರಣೆ.
ಗುರುಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸ್ವಾಮೀಜಿ ಅವರ ಆಶೀರ್ವಚನ ಪಡೆಯುವಂತೆ, ಶ್ರೀ ಮಹಾಲಕ್ಷ್ಮೀ ಭಜನಾ ಮಂಡಳಿಯ ಟ್ರಸ್ಟೀಗಳು, ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ : 7045898157, 9892435643 ಸಂಪರ್ಕಿಸಬಹುದು.




