ಮುಂಬಯಿ ಆ15.ಪವಿತ್ರವಾದ ಶ್ರಾವಣ ಮಾಸದ ಸತ್ಸಂಗ ದ ಅಂಗವಾಗಿ ಪ್ರತಿ ವರ್ಷ ಮಾಡಿಸುವಂತೆ ಈ ವರ್ಷವೂ ಸಹ ಹರಿಕಥಾ ವಿದ್ವಾನ್ ಕೈರ ಬೆಟ್ಟು ವಿಶ್ವನಾಥ್ ಭಟ್ ಅವರ ಸುಮಧುರ ಕಂಠ ಸಿರಿಯಲ್ಲಿ “ರಾಜಾ ಅಂಬರೀಷ” (ಏಕಾದಶಿ ಮಹಿಮೆ) ಎಂಬ ತುಳು ಹರಿಕಥಾ ಸಂಕೀರ್ತನೆ ಯು ಬೋರಿವಲಿ ಮಹಿಷ ಮರ್ದಿನಿ ಮಂದಿರದ ಪವಿತ್ರ ಆವರಣದಲ್ಲಿ ನಡೆಯಲಿದೆ, ಬೋರಿವಲಿ ಪ್ರದೇಶದ ಪ್ರಸಿದ್ಧ ಸಮಾಜಸೇವಕಿ ಶ್ರೀಮತಿ ಸುಧಾ ಕುಂದರ್ ಅವರು ಈ ಸತ್ಸಂಗ ಕಾರ್ಯಕ್ರಮ ವನ್ನು ಹಮ್ಮಿ ಕೊಂಡಿದ್ದು ಮಂದಿರದ ಆಡಳಿತ ಮುಕ್ತೇಶ್ವರ ರಾದ ಪ್ರದೀಪ ಶೆಟ್ಟಿ ಹಾಗೂ ಜಯರಾಜ್ ಶೆಟ್ಟಿ ಅವರು ಮಂದಿರದ ಆಡಳಿತ ಸಮಿತಿಯು ಪೂರ್ಣ ಸಹಕಾರ ವನ್ನು ನೀಡಲಿದ್ದಾರೆ.. ಹಾರ್ಮೋನಿಯಂ ನಲ್ಲಿ ಶ್ರೀ ಶೇಖರ್ ಸಸಿಹಿತ್ಲು ಅವರು ತಬ್ಲಾ ದಲ್ಲಿ ಜನಾರ್ಧನ ಸಾಲಿಯಾನ್, ತಾಳದಲ್ಲಿ ಪ್ರಶಾಂತ್ ಜತ್ತನ್ ಅವರು ಸಹಕರಿಸಿದ್ದಾರೆ.
.ಶ್ರೀ ಹರಿ ಭಕ್ತಿ ಯನ್ನು ಉತ್ತಮ ಸುಶ್ರಾವ್ಯ ಸಂಗೀತ ದೊಂದಿಗೆ ಪ್ರಚುರ ಪಡಿಸುವ ಈ ಉತ್ತಮ ಹರಿಕಥಾ ಸಂಕೀರ್ತನೆ ಗೆ ತಾವೆಲ್ಲರೂ ಸಕುಟುಂಬ ರಾಗಿ ಬಂದು ಭಾಗವಹಿಸಿ ಶ್ರೀದೇವಿ ಹಾಗೂ ಶ್ರೀ ಹರಿ ಕೃಪೆಗೆ ಪಾತ್ರರಾಗಬೇಕಾಗಿ ಆಯೋಜಕರು ವಿನಂತಿ ಮಾಡಿದ್ದಾರೆ…




