32 C
Mumbai
April 24, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸಾನ್ ನಗರ ಥಾಣೆ ಆಗಸ್ಟ್ 17ರಂದು 19ನೇ ವಾರ್ಷಿಕ ರಕ್ತದಾನ ಶಿಬಿರ





ಥಾಣೆ ಪಶ್ಚಿಮ ಕಿಸಾನ್ ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯು 25 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಈ ಸಂಸ್ಥೆಯು ಸಮಾಜಪರ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದು, ಕಳೆದ 18 ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.
19ನೇ ವರ್ಷದ ರಕ್ತದಾನ ಶಿಬಿರವು ಆಗಸ್ಟ್ 17ರ ರವಿವಾರದಂದು ಬೆಳಿಗ್ಗೆ 9:00ಗಂಟೆಯಿಂದ ಸಾಯಂಕಾಲ 4 ಗಂಟೆತನಕ, ಕಿಸನ್ ನಗರ ನಂ. 1, ಮುನ್ಸಿಪಲ್ ಮೈದಾನದ ಹತ್ತಿರದ ಓಧವ್ ಬಾಗ್ ಹಾಲ್ ನಲ್ಲಿ ನಡೆಯಲಿದೆ.
ಕೇವಲ ಮುಂಬೈ ಮತ್ತು ಥಾಣೆ ಈ ಎರಡು ಜಿಲ್ಲೆಗಲ್ಲಿಯೇ ಥಲಲ್ಸೇಮಿಯ ಮೇಜರ್ ( Thalassemia Major )ಎಂಬ ರಕ್ತದ ಕೊರತೆಯಿಂದ ಆಗುವ ಕಾಯಿಲೆಯಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಅವರಿಗೆ ಸರಾಸರಿ 21 ದಿನಗಳ ಅಂತರದಲ್ಲಿ ರಕ್ತ ನೀಡಬೇಕಾಗುತ್ತದೆ. ರಕ್ತದ ಕೊರತೆಯಾದಲ್ಲಿ ಪ್ರಾಣಕ್ಕೆ ಅಪಾಯವಿರುತ್ತದೆ . ಮುಲುಂಡ್ ಮತ್ತು ಥಾಣೆ ಪರಿಸರದ ಖ್ಯಾತ ಶಿಶು ಸದ್ಯ ಡಾ. ಸತ್ಯಪ್ರಕಾಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮತ್ತು ಸಾರ್ವಜನಿಕ ಮಕ್ಕಳ ಮತ್ತು ಪರಿಸರದ ಕಲ್ಯಾಣ ಚಟುವಟಿಕೆಗಳಿಗೆ ಸ್ವಯಂಪ್ರೇರಿತ ಸಂಸ್ಥೆಯಾದ ಥಿಂಕ್ ಫೌಂಡೇಶನ್ ಸಂಸ್ಥೆಯ ಉಪಾಧ್ಯಕ್ಷ ವಿನಯ್ ಶೆಟ್ಟಿ ಅವರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಆಯೋಜಿಸುತ್ತಿರುವ ರಕ್ತದಾನ ಶಿಬರದಲ್ಲಿ ರಕ್ತದಾನಿಗಳು ಪಾಲ್ಗೊಂಡು ಸಹಕರಿಸಬೇಕಾಗಿ ಸಮಿತಿಯ ಅಧ್ಯಕ್ಷ ಜಯರಾಮ್ ಪೂಜಾರಿ ಮತ್ತು ಪದಾಧಿಕಾರಿಗಳು, ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗೆ : 7021869714/ 7498169626 ಸಂಪರ್ಕಿಸಬಹುದು.



Related posts

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ ಪೂರ್ವ : ಫೆ. 8ಕ್ಕೆ ವಾರ್ಷಿಕ ಮಂಗಳೂತ್ಸವ

Mumbai News Desk

ಡಿ.3ರಂದು ಮುಂಬೈಯಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಷಷ್ಠಿಯಬ್ದ ಮಹೋತ್ಸವ.

Mumbai News Desk

ಫೆ.1 ರಿಂದ 3 ರ ವರಗೆ ಶ್ರೀ ಶನೀಶ್ವರ ಮಂದಿರ (ರಿ), ಭಟ್ಟಿಪಾಡದ 40ನೇ ವಾರ್ಷಿಕ ಮಹಾಪೂಜೆ.

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ನ.23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಜನವರಿ 2 ರಿಂದ 12 ರವರೆಗೆ ರಂಗ್ ದ ರಾಜೆ ಸುಂದರ್ ರೈ ಮಂದಾರ ಸಾರಥ್ಯದ ‘ಅಮ್ಮ ಕಲಾವಿದೆರ್ ಕುಡ್ಲ’ ತಂಡದಿಂದ ‘ಆನ್ ಮಗೆ’ ನಾಟಕದ ಮುಂಬೈ, ಪುಣೆ ಪ್ರದರ್ಶನ

Mumbai News Desk