30.9 C
Mumbai
June 8, 2026
Mumbai News Kannada
ಪ್ರಕಟಣೆ

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ





ಮುಂಬೈ : 15.04.2024
   ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘ (ರಿ) ವು ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಬುಧವಾರ ತಾ.17 ನೆಯ ಎಪ್ರಿಲ್ 2024 ರಂದು ತನ್ನ 75 ನೆಯ ವರ್ಷಾಚರಣೆಯು ಚಾಲನೆಗೊಳ್ಳಲಿದೆ.
  ಪ್ರಾತಃಕಾಲ 7 ಗಂಟೆಗೆ  ಪರೇಲ್ ನ ಸ್ವಂತ  ಕಟ್ಟಡದಲ್ಲಿ ಶ್ರೀ ಗಣಪತಿ ಹೋಮ ಆನಂತರ 10.30 ಕ್ಕೆ ಸಯಾನ್ ಪೂರ್ವದ ಜಿ ಎಸ್ ಬಿ ಸೇವಾಮಂಡಲದ ಸಭಾಭಾವನದಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಚೈತ್ರಗೌರೀ ಅರಶಿನ ಕುಂಕುಮ ಕಾರ್ಯಕ್ರಮವಿರುವುದು.
  ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮವಿದ್ದು 75 ನೆಯ ವರ್ಷಾಚರಣೆಯ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ , ಪದ್ಮಶ್ರೀ ಎಚ್.ಸದಾನಂದ ಕಾಮತ್ ಹಾಗೂ ಮುಂಬೈ ಸಂಘದ ಮಾಜಿ ಅಧ್ಯಕ್ಷ ಮಾಧವ ವಿ. ಪ್ರಭು ಉಪಸ್ಥಿತರಿರುವರು.
   ದೂರದೃಷ್ಟಿಯುಳ್ಳ ಸಮಾಜದ ಹಿರಿಯರು 1950 ನೆಯ ಇಸವಿ ಮಾರ್ಚ್ ತಾ.15 ರ ರಾಮ ನವಮಿಯಂದು  ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಿವಿಧ ಸಮಾಜಪರ ಕಾರ್ಯಕ್ರಮಗಳನ್ನು ಜರಗಿಸಿಕೊಂಡು  ಬರುತ್ತಾ ಇದೀಗ ಜರಗುವ 75 ವರ್ಷಾಚರಣೆಯ ಆರಂಭೋತ್ಸವಕ್ಕೆ ಮಹಾರಾಷ್ಟ್ರದಾದ್ಯಂತ ಇರುವ ಸಮಾಜ ಸದಸ್ಯ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕಾಗಿ ಅಧ್ಯಕ್ಷ ರಾಮಚಂದ್ರ ಎಸ್. ನಾಯಕ್ , ಕಾರ್ಯದರ್ಶಿ ರಮೇಶ ಯು.ಕಾಮತ್ ಹಾಗೂ ಖಜಾಂಚಿ ಅನಿಲ್ ಪಿ. ನಾಯಕ್ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಾಧ್ಯಮ ಸುದ್ಧಿ : ಪಿ.ಆರ್.ರವಿಶಂಕರ್ ಮುಂಬೈ 8483980035



Related posts

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾ ಸಮಿತಿ: ಡಿ. 20 ರಂದು 81ನೇ ವಾರ್ಷಿಕ ಮಹಾಪೂಜೆ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಡಿ.24ರಂದು 9ನೇ ಮೂಲತ್ವ ವಿಶ್ವ ಪ್ರಶಸ್ತಿ-2023.

Mumbai News Desk

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ಮಾ. 9ರಂದು ಮೊಗವೀರ ಮಾಸಿಕದ 85ರ ಸಂಭ್ರಮ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ವಸಾಯಿ ಕರ್ನಾಟಕ ಸಂಘ : ಸ್ವಾತಂತ್ರೋತ್ಸವ ಸಂಭ್ರಮ, ದತ್ತು ಸ್ಪೀಕರ, ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Mumbai News Desk