September 6, 2026
Mumbai News Kannada
ಪ್ರಕಟಣೆ

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ





ಮುಂಬೈ : 15.04.2024
   ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘ (ರಿ) ವು ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಬುಧವಾರ ತಾ.17 ನೆಯ ಎಪ್ರಿಲ್ 2024 ರಂದು ತನ್ನ 75 ನೆಯ ವರ್ಷಾಚರಣೆಯು ಚಾಲನೆಗೊಳ್ಳಲಿದೆ.
  ಪ್ರಾತಃಕಾಲ 7 ಗಂಟೆಗೆ  ಪರೇಲ್ ನ ಸ್ವಂತ  ಕಟ್ಟಡದಲ್ಲಿ ಶ್ರೀ ಗಣಪತಿ ಹೋಮ ಆನಂತರ 10.30 ಕ್ಕೆ ಸಯಾನ್ ಪೂರ್ವದ ಜಿ ಎಸ್ ಬಿ ಸೇವಾಮಂಡಲದ ಸಭಾಭಾವನದಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಚೈತ್ರಗೌರೀ ಅರಶಿನ ಕುಂಕುಮ ಕಾರ್ಯಕ್ರಮವಿರುವುದು.
  ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮವಿದ್ದು 75 ನೆಯ ವರ್ಷಾಚರಣೆಯ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ , ಪದ್ಮಶ್ರೀ ಎಚ್.ಸದಾನಂದ ಕಾಮತ್ ಹಾಗೂ ಮುಂಬೈ ಸಂಘದ ಮಾಜಿ ಅಧ್ಯಕ್ಷ ಮಾಧವ ವಿ. ಪ್ರಭು ಉಪಸ್ಥಿತರಿರುವರು.
   ದೂರದೃಷ್ಟಿಯುಳ್ಳ ಸಮಾಜದ ಹಿರಿಯರು 1950 ನೆಯ ಇಸವಿ ಮಾರ್ಚ್ ತಾ.15 ರ ರಾಮ ನವಮಿಯಂದು  ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಿವಿಧ ಸಮಾಜಪರ ಕಾರ್ಯಕ್ರಮಗಳನ್ನು ಜರಗಿಸಿಕೊಂಡು  ಬರುತ್ತಾ ಇದೀಗ ಜರಗುವ 75 ವರ್ಷಾಚರಣೆಯ ಆರಂಭೋತ್ಸವಕ್ಕೆ ಮಹಾರಾಷ್ಟ್ರದಾದ್ಯಂತ ಇರುವ ಸಮಾಜ ಸದಸ್ಯ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕಾಗಿ ಅಧ್ಯಕ್ಷ ರಾಮಚಂದ್ರ ಎಸ್. ನಾಯಕ್ , ಕಾರ್ಯದರ್ಶಿ ರಮೇಶ ಯು.ಕಾಮತ್ ಹಾಗೂ ಖಜಾಂಚಿ ಅನಿಲ್ ಪಿ. ನಾಯಕ್ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಾಧ್ಯಮ ಸುದ್ಧಿ : ಪಿ.ಆರ್.ರವಿಶಂಕರ್ ಮುಂಬೈ 8483980035



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ : ನ. 18ರಂದು ಉಡುಪಿಯಲ್ಲಿ ಸಮಾಲೋಚನೆ ಸಭೆ

Mumbai News Desk

ಕುಲಾಲ ಪ್ರತಿಷ್ಠಾನ ಮಂಗಳೂರು- ಏಪ್ರಿಲ್ 13 ರಂದು ಕುಲಾಲ ಪರ್ಬ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ : ಮೀರಾ ಭಾಯಂದರ್ ಶಾಖೆಯ ವತಿಯಿಂದ ಜನೆವರಿ 18ರಂದು ‘ಕ್ರೀಡಾಕೂಟ – 2026’

Mumbai News Desk

ಜ. 28  ಭಂಡಾರಿ ಸೇವಾ ಸಮಿತಿ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ 

Mumbai News Desk

ಫೆ.17ರಂದು ಸೃಜನಾ ಮುಂಬಯಿ ವತಿಯಿಂದ ಸಾಹಿತ್ಯ ವಿಮರ್ಶೆ, ಕೃತಿ ಬಿಡುಗಡೆ, ಜನಪದ ಹಾಡುಗಳ ಪ್ರಸ್ತುತಿ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಿ 7ರಂದು “ಕುರ್ಲಾ ಬಂಟರ ಭವನದಲ್ಲಿ ” ವಿಶ್ವಬಂಟರ ಸಮಾಗಮ “ಜಾಗತಿಕ ಮಟ್ಟದ ಕಾರ್ಯಕ್ರಮದ ವಿಶೇಷ ಸಭೆ.

Mumbai News Desk