July 23, 2026
Mumbai News Kannada
ಪ್ರಕಟಣೆ

ಮುಂಬೈ ರಾಜಾಪುರ ಸಾರಸ್ವತ ಸಂಘದ ಅಮೃತ ಮಹೋತ್ಸವದ ಶುಬಾರಂಭ







ಮುಂಬೈ : 15.04.2024
   ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘ (ರಿ) ವು ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಬುಧವಾರ ತಾ.17 ನೆಯ ಎಪ್ರಿಲ್ 2024 ರಂದು ತನ್ನ 75 ನೆಯ ವರ್ಷಾಚರಣೆಯು ಚಾಲನೆಗೊಳ್ಳಲಿದೆ.
  ಪ್ರಾತಃಕಾಲ 7 ಗಂಟೆಗೆ  ಪರೇಲ್ ನ ಸ್ವಂತ  ಕಟ್ಟಡದಲ್ಲಿ ಶ್ರೀ ಗಣಪತಿ ಹೋಮ ಆನಂತರ 10.30 ಕ್ಕೆ ಸಯಾನ್ ಪೂರ್ವದ ಜಿ ಎಸ್ ಬಿ ಸೇವಾಮಂಡಲದ ಸಭಾಭಾವನದಲ್ಲಿ ಶ್ರೀ ಸತ್ಯನಾರಾಯಣ ಮಹಾ ಪೂಜೆ ಹಾಗೂ ಚೈತ್ರಗೌರೀ ಅರಶಿನ ಕುಂಕುಮ ಕಾರ್ಯಕ್ರಮವಿರುವುದು.
  ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮವಿದ್ದು 75 ನೆಯ ವರ್ಷಾಚರಣೆಯ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ , ಪದ್ಮಶ್ರೀ ಎಚ್.ಸದಾನಂದ ಕಾಮತ್ ಹಾಗೂ ಮುಂಬೈ ಸಂಘದ ಮಾಜಿ ಅಧ್ಯಕ್ಷ ಮಾಧವ ವಿ. ಪ್ರಭು ಉಪಸ್ಥಿತರಿರುವರು.
   ದೂರದೃಷ್ಟಿಯುಳ್ಳ ಸಮಾಜದ ಹಿರಿಯರು 1950 ನೆಯ ಇಸವಿ ಮಾರ್ಚ್ ತಾ.15 ರ ರಾಮ ನವಮಿಯಂದು  ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಿವಿಧ ಸಮಾಜಪರ ಕಾರ್ಯಕ್ರಮಗಳನ್ನು ಜರಗಿಸಿಕೊಂಡು  ಬರುತ್ತಾ ಇದೀಗ ಜರಗುವ 75 ವರ್ಷಾಚರಣೆಯ ಆರಂಭೋತ್ಸವಕ್ಕೆ ಮಹಾರಾಷ್ಟ್ರದಾದ್ಯಂತ ಇರುವ ಸಮಾಜ ಸದಸ್ಯ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕಾಗಿ ಅಧ್ಯಕ್ಷ ರಾಮಚಂದ್ರ ಎಸ್. ನಾಯಕ್ , ಕಾರ್ಯದರ್ಶಿ ರಮೇಶ ಯು.ಕಾಮತ್ ಹಾಗೂ ಖಜಾಂಚಿ ಅನಿಲ್ ಪಿ. ನಾಯಕ್ ಪ್ರಕಟಣೆಯ ಮೂಲಕ ವಿನಂತಿಸಿಕೊಂಡಿದ್ದಾರೆ.
ಮಾಧ್ಯಮ ಸುದ್ಧಿ : ಪಿ.ಆರ್.ರವಿಶಂಕರ್ ಮುಂಬೈ 8483980035



Related posts

ತುಳು ಸಂಘ ಬೊರಿವಲಿ, ಡಿ. 8 ರಂದು ಸ್ನೇಹ ಮಿಲನ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬೈ ಜ 5:೮೪ ನೇ ವಾರ್ಷಿಕ ಮಿಲನ ‘ಸಾಫಲ್ಯ -೨೦೨೫’ 

Mumbai News Desk

ಶ್ರೀ ನಾಗಬ್ರಹ್ಮ ಕ್ಷೇತ್ರ ಪುತ್ರನ್ ಆದಿ ಮೂಲಸ್ಥಾನ ಗೋಂಟು, ಮುಲ್ಕಿ : ಎ. 22ರಿಂದ ಎ. 26ರ ತನಕ ಬ್ರಹ್ಮ ಕಲಶೋತ್ಸವ ಮತ್ತು ವರ್ಧಂತ್ಯೋತ್ಸವ

Mumbai News Desk

ಕರ್ನಾಟಕ ಸಂಘ ಕಲ್ಯಾಣ: ಮಾ. 9ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk