
ಮುಂಬಯಿ: ತಾನಾಜಿ ನಗರ, ಕುರಾರ್ ಗ್ರಾಮ, ಮಲಾಡ್ (ಪೂ), ಮುಂಬಯಿ–400097 ರಲ್ಲಿ ನೆಲೆಸಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ತಾನದಲ್ಲಿ ಸಮಿತಿ ವತಿಯಿಂದ 48ನೇ ವರ್ಷದ ನವರಾತ್ರಿ ದಸರಾ ಮಹೋತ್ಸವವು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಪ್ರತಿದಿನ ಬೆಳಗ್ಗೆ 8.00ಕ್ಕೆ ಮಹಾಪೂಜೆ, ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ ಭಜನೆ, ಗಾನವಿನೋದ, ಕುಂಕುಮಾರ್ಚನೆ, ಮಹಾನೈವೇದ್ಯ, ಪ್ರಸಾದ ವಿತರಣೆ ನಡೆಯಲಿದೆ.
ಈ ಅವಧಿಯಲ್ಲಿ ಆರತಿ ದುರ್ಗಾ ಪೂಜೆ, ಮಹಿಷಾಸುರಮರ್ಧಿನಿ ಪೂಜೆ, ಚಂಡಿಕಾ ಹೋಮ, ಕುಮಾರಿ ದುರ್ಗಾ ಕಲ್ಯಾಣ, ಅಂಬಿಕಾ ದುರ್ಗಾ ಕಲ್ಯಾಣ, ಕಾಳಿಕಾಂಬಾ ಪೂಜೆ, ಮಹಾಸರಸ್ವತಿ ಗೀತೆ ಕಲ್ಯಾಣ, ಮಹಾಲಕ್ಷ್ಮಿ ಕಲ್ಯಾಣ ಹಾಗೂ ದುರ್ಗಾಪರಮೇಶ್ವರಿ ಕಲ್ಯಾಣ ಸೇರಿದಂತೆ ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 1 ರಂದು ಮಹಾಪೂಜೆಯೊಂದಿಗೆ ವಿಶೇಷ ಅನ್ನಸಂತರ್ಪಣೆ, ಹಾಗೂ ಅಕ್ಟೋಬರ್ 2 ರಂದು ವಿಜಯದಶಮಿಯಂದು ರಾತ್ರಿ 8 ಗಂಟೆಗೆ ರಂಗಪೂಜೆ ಜರುಗಲಿದೆ.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಶಂಕರನಾರಾಯಣ ತಂತ್ರಿ, ಡೊಂಬಿವಲಿ ಮತ್ತು ಮಂದಿರದ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಭಟ್ ಸೂಡಾ ಇವರ ಪೌರೋಹಿತ್ಯದಲ್ಲಿ ಜರುಗಲಿದೆ.
ಸಮಿತಿಯ ಪದಾಧಿಕಾರಿಗಳು :
ಅಧ್ಯಕ್ಷರು: ಶ್ರೀ ರಘುನಾಥ್ ಕೆ. ಕೊಟ್ಟಾರಿ – 📱 9892748470
ಗೌ. ಪ್ರ. ಕಾರ್ಯದರ್ಶಿ: ಶ್ರೀ ಸೋಮಪ್ಪ ಬಿ. ಕೊಟ್ಯಾನ್ – 📱 8976549430
ಗೌ. ಕೊಶಾಧಿಕಾರಿ: ಶ್ರೀ ಬಾಬು ಎಮ್ . ಸುವರ್ಣ – 📱 9324567720

ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು – ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ





