April 23, 2026
Mumbai News Kannada
ಪ್ರಕಟಣೆ

ಡಿ. 03. ಥಾಣೆಯಲ್ಲಿ ಪ್ರಸಾದ್ ಪೂಜಾರಿ ಕಲ್ಯಾ ಇವರ ಸೇವೆಯಲ್ಲಿ ಮಂತ್ರ ದೇವತೆಯ 6ನೇ ವಾರ್ಷಿಕ ಪೂಜೆ ಹಾಗೂ ನೇಮೋತ್ಸವ





​ಮುಂಬಯಿಯ ಹೋಟೆಲ್ ಉದ್ಯಮಿ, ಸಮಾಜ ಸೇವಕ ಮತ್ತು ಥಾಣೆ ವೈಶಾಲಿ ನಗರದ ನಿವಾಸಿಗಳಾದ ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಹಾಗೂ ಪ್ರಮೀಳಾ ಪೂಜಾರಿ ಇವರ ಸೇವೆಯಲ್ಲಿ, ಮಂತ್ರ ದೇವತೆಯ 6ನೇ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವವು ಡಿ. 03, ಬುಧವಾರದಂದು ವೈಶಾಲಿ ನಗರದಲ್ಲಿ ನಡೆಯಲಿದೆ.

​ಈ ಧಾರ್ಮಿಕ ಕಾರ್ಯಕ್ರಮವು ಶ್ರೀನಗರ ಪೊಲೀಸ್‌ ಸ್ಟೇಷನ್ ಹತ್ತಿರದ ನಿಶಿಗಂಧ ಕೋ.ಆಪ್. ಹೌಸಿಂಗ್ ಸೊಸೈಟಿಯಲ್ಲಿ ನೆರವೇರಲಿದೆ.

ಕಾರ್ಯಕ್ರಮಗಳ ವಿವರ:

​ದೇವತಾ ಕಾರ್ಯಕ್ರಮಗಳು ಬೆಳಿಗ್ಗೆ 6.00 ಗಂಟೆಗೆ ಕಲಶಾಭಿಷೇಕದೊಂದಿಗೆ ಪ್ರಾರಂಭವಾಗಲಿವೆ. ನಂತರ 8.00 ಗಂಟೆಗೆ ಗಣಹೋಮ ಮತ್ತು 10.00 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ಜರುಗಲಿದೆ. ಮಧ್ಯಾಹ್ನ 1.00 ಗಂಟೆಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ.

​ಮಧ್ಯಾಹ್ನ 2.00 ಗಂಟೆಯಿಂದ ಸ್ಥಳೀಯರಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5.00 ಗಂಟೆಗೆ ಮಂತ್ರದೇವತೆಯ ಬಾಲು ಭಂಡಾರ ಮೆರವಣಿಗೆ ನಡೆಯಲಿದೆ. ರಾತ್ರಿ 6.00 ಗಂಟೆಗೆ ಕುಣಿತ ಭಜನೆ ಹಾಗೂ 7.00 ಗಂಟೆಗೆ ಮಂತ್ರದೇವತೆಯ ಗಗ್ಗರ ಸೇವೆಯೊಂದಿಗೆ ಪೂಜಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.

​ಕಾರ್ಯಕ್ರಮದ ದರ್ಶನ ಸೇವೆಯನ್ನು ದೈವಪಾತ್ರಿಯಾಗಿ ಕಟಪಾಡಿ ಸನ್ನಿದ್ ಪೂಜಾರಿಯವರು ನೆರವೇರಿಸಲಿದ್ದಾರೆ. ಬೋಳ ಜಗ್ಗು ಬಳಗದವರಿಂದ ನರತನ ಸೇವೆ, ಮಂಗಲದಿ ಮಠದ ಜಗದೀಶ್ ಮೂಲ್ಯಯವರು ಮಧ್ಯಸ್ಥರಾಗಿ, ಮತ್ತು ಹರೀಶ ಪೂಜಾರಿ ಹಾಗೂ ತಂಡದಿಂದ ವಾಲಗದ ಸೇವೆ ನಡೆಯಲಿದೆ. ಗಣಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ಶ್ರೀಕಾಂತ್ ಭಟ್ ಬಳಗದವರು ನಡೆಸಿಕೊಡಲಿದ್ದಾರೆ.

​ಪ್ರಸಾದ್ ಪೂಜಾರಿ ಕಲ್ಯಾ ಹಾಳೆಕಟ್ಟೆ ಮತ್ತು ಪ್ರಮೀಳಾ ಪೂಜಾರಿಯವರು ಸಮಸ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ದೈವ ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9930247335.



Related posts

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ: ಅ. 10 ರಂದು 25ನೇ ವಾರ್ಷಿಕ  ಮಹಾಸಭೆ,  

Mumbai News Desk

ಫೆ. 8, 9 ಹಾಗೂ 10 ರಂದು ತಿರುಪತಿ ತಿರುಮಲದಲ್ಲಿ ಭಜನ ಕಾರ್ಯಕ್ರಮ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk

ಗಣೇಶಪುರಿ ಶ್ರೀ ನಿತ್ಯಾನಂದ ಬಾಬಾ ದರ್ಶನದಲ್ಲಿ ತಾತ್ಕಾಲಿಕ ಬದಲಾವಣೆ: ವಿಗ್ರಹ ನವೀಕರಣ ಹಿನ್ನೆಲೆ ಏಪ್ರಿಲ್ 27 ರಿಂದ ದರ್ಶನ ಸ್ಥಗಿತ

Mumbai News Desk

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜ. 18 ರಂದು ಬೃಹತ್ ರಕ್ತದಾನ ಶಿಬಿರ ಆಯೋಜನೆ

Mumbai News Desk