25 C
Mumbai
March 7, 2026
Mumbai News Kannada
ಮುಂಬಯಿ

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ





ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ದಿನಾಂಕ 14 ಡಿಸೆಂಬರ್ 2025ರಂದು ಗೋರಾಯಿಯ ಫಾರ್ಮ್ ರಿಜೆನ್ಸಿ ರಿಸಾರ್ಟ್‌ನಲ್ಲಿ ಸಮುದಾಯ ಪಿಕ್ನಿಕ್ ಅನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ವಿವಿಧ ಪ್ರದೇಶಗಳಿಂದ ಆಗಮಿಸಿದ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ದಿನವನ್ನೆಲ್ಲಾ ಸಂತೋಷದಿಂದ ಕಳೆದರು.

ಈ ಕಾರ್ಯಕ್ರಮಕ್ಕೆ ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಗಣ್ಯ ಅತಿಥಿಗಳಾದ ಶ್ರೀ ಪ್ರಜ್ವಲ್ ಸಾಲಿಯನ್, ಶ್ರೀಮತಿ ದಯಾವತಿ ಸುವರ್ಣ ಮತ್ತು ಶ್ರೀಮತಿ ಪ್ರೀತಿ ಶ್ರೀಯಾನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದರು.

ಶ್ರೀ ಬೋಜರಾಜ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಮನರಂಜನಾ ಆಟಗಳು ಎಲ್ಲ ವಯೋಮಾನದ ಸದಸ್ಯರನ್ನು ಆಕರ್ಷಿಸಿತು. ಈ ಸಂದರ್ಭ ಈಜುಕೊಳ, ರೇನ್ ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಸಂತೋಷದಿಂದ ಭಾಗವಹಿಸಿದರು.

ಕಾರ್ಯಕ್ರಮದ ಸಮಾರೋಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ ವಿ. ಕೋಟ್ಯಾನ್ ಅವರು ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಇತಿಹಾಸದಲ್ಲೇ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ದಯಾವತಿ ಸುವರ್ಣ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀ ವಿಶ್ವನಾಥ ಬಂಗೇರಾ, ಶ್ರೀ ಮೋಹನ್ ಪುತ್ರನ್, ಶ್ರೀಮತಿ ಪ್ರೇಮಾ ನಾಯ್ಕ್, ಶ್ರೀಮತಿ ಪಲ್ಲವಿ ಪುತ್ರನ್, ಶ್ರೀಮತಿ ಮೋಹಿನಿ ಮಲ್ಪೆ ಹಾಗೂ ಶ್ರೀಮತಿ ಇಂದಿರಾ ಪುತ್ರನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭವನ್ನು ಶ್ರೀ ಪ್ರದೀಪ್ ಪುತ್ರನ್ ಹಾಗೂ ಬಹುಮಾನ ವಿತರಣೆಯನ್ನು ಶ್ರೀ ನವೀನ್ ಪುತ್ರನ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು



Related posts

ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಶನ್ ನ ಮಹಿಳಾ ಭಚತ್ ಘಟಕ ವತಿಯಿಂದ ಹಳದಿ ಕುಂಕುಮ ಕಾರ್ಯಕ್ರಮ

Mumbai News Desk

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ, ನೂತನ ಪದಾಧಿಕಾರಿಗಳ ಆಯ್ಕೆ. ಗೌ.ಅಧ್ಯಕ್ಷರಾಗಿ ಸುರೇಶ್ ಪೂಜಾರಿ, ಅಧ್ಯಕ್ಷರಾಗಿ ಸಿ.ಎ. ಪೂಜಾರಿ ಅಯ್ಕೆ

Mumbai News Desk

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ),  ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ : ನೂತನ ಅಧ್ಯಕ್ಷರಾಗಿ ಗಣೇಶ್ ಕೆ ಕಾಂಚನ್ ಆಯ್ಕೆ

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮ.

Mumbai News Desk