September 6, 2026
Mumbai News Kannada
ಮುಂಬಯಿ

ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ಸಮುದಾಯ ಪಿಕ್ನಿಕ್ ಯಶಸ್ವಿಯಾಗಿ ಆಯೋಜನೆ





ವಸಾಯಿ ತಾಲೂಕು ಮೊಗವೀರ ಸಂಘ (ರಿ.) ವತಿಯಿಂದ ದಿನಾಂಕ 14 ಡಿಸೆಂಬರ್ 2025ರಂದು ಗೋರಾಯಿಯ ಫಾರ್ಮ್ ರಿಜೆನ್ಸಿ ರಿಸಾರ್ಟ್‌ನಲ್ಲಿ ಸಮುದಾಯ ಪಿಕ್ನಿಕ್ ಅನ್ನು ಉತ್ಸಾಹಭರಿತವಾಗಿ ಆಯೋಜಿಸಲಾಯಿತು. ವಿವಿಧ ಪ್ರದೇಶಗಳಿಂದ ಆಗಮಿಸಿದ ಸಂಘದ ಸದಸ್ಯರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ದಿನವನ್ನೆಲ್ಲಾ ಸಂತೋಷದಿಂದ ಕಳೆದರು.

ಈ ಕಾರ್ಯಕ್ರಮಕ್ಕೆ ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಗಣ್ಯ ಅತಿಥಿಗಳಾದ ಶ್ರೀ ಪ್ರಜ್ವಲ್ ಸಾಲಿಯನ್, ಶ್ರೀಮತಿ ದಯಾವತಿ ಸುವರ್ಣ ಮತ್ತು ಶ್ರೀಮತಿ ಪ್ರೀತಿ ಶ್ರೀಯಾನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಮಹತ್ವವನ್ನು ಹೆಚ್ಚಿಸಿದರು.

ಶ್ರೀ ಬೋಜರಾಜ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಮನರಂಜನಾ ಆಟಗಳು ಎಲ್ಲ ವಯೋಮಾನದ ಸದಸ್ಯರನ್ನು ಆಕರ್ಷಿಸಿತು. ಈ ಸಂದರ್ಭ ಈಜುಕೊಳ, ರೇನ್ ಡ್ಯಾನ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಸದಸ್ಯರು ಸಂತೋಷದಿಂದ ಭಾಗವಹಿಸಿದರು.

ಕಾರ್ಯಕ್ರಮದ ಸಮಾರೋಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಯಶೋಧರ ವಿ. ಕೋಟ್ಯಾನ್ ಅವರು ಮೋಗವೀರ ವ್ಯಾವಸ್ಥಾಪಕ ಮಂಡಳಿಯ ಇತಿಹಾಸದಲ್ಲೇ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ದಯಾವತಿ ಸುವರ್ಣ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಶ್ರೀ ವಿಶ್ವನಾಥ ಬಂಗೇರಾ, ಶ್ರೀ ಮೋಹನ್ ಪುತ್ರನ್, ಶ್ರೀಮತಿ ಪ್ರೇಮಾ ನಾಯ್ಕ್, ಶ್ರೀಮತಿ ಪಲ್ಲವಿ ಪುತ್ರನ್, ಶ್ರೀಮತಿ ಮೋಹಿನಿ ಮಲ್ಪೆ ಹಾಗೂ ಶ್ರೀಮತಿ ಇಂದಿರಾ ಪುತ್ರನ್ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭವನ್ನು ಶ್ರೀ ಪ್ರದೀಪ್ ಪುತ್ರನ್ ಹಾಗೂ ಬಹುಮಾನ ವಿತರಣೆಯನ್ನು ಶ್ರೀ ನವೀನ್ ಪುತ್ರನ್ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು



Related posts

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತಿ ಗರಡಿಯ ಪುನರ್ ನಿರ್ಮಾಣ ನಿಮಿತ್ತ ಸಮಾಲೋಚನಾ ಸಭೆ ಹಾಗೂ ಮನವಿ ಪತ್ರ ಬಿಡುಗಡೆ

Mumbai News Desk

ಮುಂಬಯಿ : ಫೆ. 1ರಿಂದ ಆಟೋರಿಕ್ಷಾ, ಟ್ಯಾಕ್ಸಿ ದರ 3ರೂ. ಏರಿಕೆ.

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿಯ ಕುಂದರಂಜನಿ – 2024

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಮಂಜೇಶ್ವರದ ಸೊಸೆ ಮುಂಬಯಿ ಮನಪಾ ಸದಸ್ಯೆ : 25ನೇ ವಾರ್ಡ್ ನಿಂದ ನಿಶಾ ಪರುಳೇಕರ್ – ಬಂಗೇರ ಆಯ್ಕೆ

Mumbai News Desk

ಸ. ಹಿ. ಪ್ರಾ. ಶಾಲೆ ಉಳಾಯಿಬೆಟ್ಟು ಆಶ್ರಯದಲ್ಲಿ ಮಕ್ಕಳ ಬಹುಭಾಷಾ ನಾಟಕೋತ್ಸವ

Mumbai News Desk