ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳು ಸಾಹಿತ್ಯ ಆಕಾಡೆಮಿಯ ಮಾಜಿ ಸದಸ್ಯ,ಸಾಹಿತಿ, ಬಿಜೆಪಿಯ ಮೀನುಗಾರ ಪ್ರಕೋಷ್ಟ್ ದ ಸದಸ್ಯ, ಸಕ್ರಿಯ ಕಾರ್ಯಕರ್ತರು,ಬೈಕಂಪಾಡಿ ಮೊಗವೀರ ಮಹಾಸಭಾದ ಮಾಜಿ ಕಾರ್ಯದರ್ಶಿ ಯೋಗೀಶ್ ಬೈಕಂಪಾಡಿ (64) ಅವರು ಅಲ್ಪ ಕಾಲದ ಅಸೌಖ್ಯಾದಿಂದ ಇಂದು ನಿಧನರಾದರು.
ಇವರ ಅಂತಿಮ ಕಾರ್ಯವು ಬೈಕಂಪಾಡಿಯ ಅವರ ಸ್ವಗೃಹದಲ್ಲಿ ಇಂದು (ಡಿ.29)ಸಂಜೆ 4 ಗಂಟೆಗೆ ನೆರವೇರಲಿದೆ.




