ಉಡುಪಿಯ ಹೃದಯ ಭಾಗ, ಕೆ. ಎಂ. ರೋಡ್ ಬಳಿಯ, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ತೃತೀಯ ವರ್ಧಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ ಜನವರಿ 16, 2026ರ ಶುಕ್ರವಾರ ಜರಗಲಿದೆ.
ಅಂದು ನಡೆಯುವ ಧಾರ್ಮಿಕ ಕಾರ್ಯಕ್ರಮ :
ಬೆಳಿಗ್ಗೆ 05:00 ಗಂಟೆಗೆ – ಕಾಕಡ ಆರತಿ
ಬೆಳಿಗ್ಗೆ 5.ರಿಂದ 6.00ರ ತನಕ ಗಣ ಹೋಮ
ಬೆಳಿಗ್ಗೆ 6.00 ರಿಂದ 7.00ರ ತನಕ ಭಗವಾನ್ ನಿತ್ಯಾನಂದ ಸ್ವಾಮಿಗೆ ಸಿಯಾಳಾಭಿಷೇಕ( ಭಕ್ತರಿಂದ )
ಬೆಳಿಗ್ಗೆ 8. 00 ರಿಂದ 8:30ರ ತನಕ ಮಹಾಪೂಜೆ
ಬೆಳಿಗ್ಗೆ 8:30 ರಿಂದ ಭಜನಾ ಕಾರ್ಯಕ್ರಮ (ವಿವಿಧ ಭಜನಾ ಮಂಡಳಿಗಳಿಂದ )
ಮಧ್ಯಾಹ್ನ 12. 00 ಗಂಟೆಗೆ ಮಹಾಪೂಜೆ
ಮಧ್ಯಾಹ್ನ 12.20ಕ್ಕೆ ಪಲ್ಲಪೂಜೆ
ಮಧ್ಯಾಹ್ನ 12:30 ರಿಂದ ಬಾಲ ಭೋಜನ ಮತ್ತು ಅನ್ನ ಸಂತರ್ಪಣೆ
ಸಂಜೆಯ ಕಾರ್ಯಕ್ರಮ :
ಸಂಜೆ 4:30ಕ್ಕೆ ಪಲ್ಲಕ್ಕಿ ಮೆರವಣಿಗೆ (ಉಡುಪಿ ನಗರದೊಳಗೆ )
ಸಂಜೆ 6.00 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ರಾತ್ರಿ 7.45 ಕ್ಕೆ ಪಲ್ಲಕ್ಕಿ ಪೂಜೆ
ರಾತ್ರಿ 8.00 ಗಂಟೆಗೆ ಮಹಾಪೂಜೆ
ರಾತ್ರಿ 8:30 ಕ್ಕೆ ಅನ್ನ ಪ್ರಸಾದ ವಿತರಣೆ
ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದಿನವಿಡಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿಯವರ ಅನುಗ್ರಹ ಪಡೆಯುವಂತೆ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದ ಉಡುಪಿಯ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಆಶ್ರಮ ಪಬ್ಲಿಕ್ ಟ್ರಸ್ಟ್ ಕಾಞಂಗಾಡ್ ನ ಅಧ್ಯಕ್ಷರು ಮತ್ತು ಟ್ರಸ್ಟಿಗಳು ವಿನಂತಿಸಿದ್ದಾರೆ.




