
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರಸಿದ್ಧ ಶ್ರೀ ಕ್ಷೇತ್ರ ಕಾಂತವರದ ವರ್ಷಾವಧಿ ಜಾತ್ರೆ ರಥೋತ್ಸವ ದಿನಾಂಕ 14.01.2026 ರಿಂದ 23.01.2026 ವರೆಗೆ ಜರಗಲಿದೆ.
ತಾರೀಕು 14/01/2026 ಆದಿತ್ಯವಾರ ಬೆಳಿಗ್ಗೆ 8 ರಿಂದ ಧ್ವಜಾರೋಹಣದೊಂದಿಗೆ ಮೊದಲ್ಗೊಂಡು 23.01.2026 ಮಂಗಳವಾರ ರಾತ್ರಿ ತನಕ ಉತ್ಸವ, ಚಂಡಿಕಾ ಹೋಮ , ಹವನ , ನವಕ ಕಲಶ, ಮಹಾ ಪೂಜೆ, ಕಟ್ಟೆ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ, ನಾಟಕ, ಮಂಡಲೋತ್ಸವ (ಒಳಗಿನ ತೇರು) ಇತ್ಯಾದಿ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕೊನೆಯ ದಿನ ರಾತ್ರಿಗೆ ಶ್ರೀ ಅಣ್ಣಪ್ಪ ದೈವದ ವರ್ಷಾವಧಿ ನೇಮೋತ್ಸವ ಬಹಳ ವಿಜೃಂಭಣೆಯಿಂದ ನಡೆಯಲಿದೆ.
ಈ ಮಹಾ ಕ್ಷೇತ್ರದ ವಾರ್ಷಿಕ ವಿಶೇಷ ರಥೋತ್ಸವಕ್ಕೆ ಭಕ್ತಾಧಿಗಳು, ಮುಂಬೈ ಮಹಾನಗರದಲ್ಲಿ ನೆಲೆಸಿರುವ, ಕಾಂತಾವರ, ಬೇಲಾಡಿ, ಸಾಣೂರು ಹಾಗೂ ಬೆಳುವಾಯಿ, ಪರಿಸರದಗ್ರಾಮಸ್ಥರು, ಭಕ್ತಾಧಿಗಳು ಆಗಮಿಸಿ, ತನು ಮನ ಧನಗಳಿಂದ, ಸಹಕರಿಸಿ, ಶ್ರೀ ದೇವರ, ಹಾಗೂ ಇಷ್ಟ ದೇವರುಗಳ ಕೃಪೆಗೆ, ಪಾತ್ರ ರಾಗಬೇಕಾಗಿ
ಶ್ರೀ. ಕೆ. ಜಯವರ್ಮ ರಾಜ ಬಲ್ಲಾಳ್( ಉತ್ಸವ ಸಮಿತಿಯ ಅಧ್ಯಕ್ಷರು), ಡಾ.ಕೆ. ಜೀವಂಧರ್ ಬಲ್ಲಾಳ್ ಬಾರಾಡಿ ಬೀಡು( ಧರ್ಮ ದರ್ಶಿಗಳು) ಹಾಗೂ ಕೆ. ಕೃಷ್ಣಮೂರ್ತಿ ಭಟ್( ಪ್ರಧಾನ ಅರ್ಚಕರು) ಹಾಗೂ, ಕಾಂತಾವರ, ಗ್ರಾಮದ, ಹತ್ತು ಸಮಸ್ತರು ವಿನಂತಿಸಿದ್ದಾರೆ.
ವಸಂತ ಬುನ್ನಾನ್ : 9970252064.




