September 6, 2026
Mumbai News Kannada
ಪ್ರಕಟಣೆ

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,





ಮೂಡಬಿದ್ರಿ .ಜ.8.ದೋಲ್ಗೊಟ್ಟು, ಕೆಲ್ಲಪುತ್ತಿಗೆಯಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತ ರಾಗಿರುವ ಸಂಜೀವ ಗುರುಸ್ವಾಮಿ ಅವರು ಸ್ಥಾಪಿಸಿರುವ ಶ್ರೀ ಧರ್ಮಶಾಸ್ತ ಭಕ್ತವೃಂದದ
23ನೇ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ ಜ.11ನೇ ಭಾನುವಾರ ಸಂಜೀವ ಗುರುಸ್ವಾಮಿಯವರ ನೇತೃತ್ವದಲ್ಲಿ
ನಡೆಯಲಿದೆ.
ಬೆಳಿಗ್ಗೆ ದೇವತಾ ಪ್ರಧಾನ, ಗಣಹೋಮ, ಶರಣು ಘೋಷ,ನಿತ್ಯ ಪೂಜೆ, ಗಂಟೆ 07.00 ರಿಂದ : ವೃತಧಾರಿಗಳ ಇರುಮುಡಿ ಕಟ್ಟುವುದು,ಮಧ್ಯಾಹ್ನ 12.00 ಗಂಟೆಗೆ ಮಧ್ಯಾಹ್ನದ ಪಡಿಪೂಜೆ, ಮಹಾಪೂಜೆ, ಪ್ರಸಾದ ವಿತರಣೆ,
ಮಧ್ಯಾಹ ಅನ್ನಸಂತರ್ಪಣೆ ನಡೆಯಲಿದೆ,

ಸಂಧ್ಯಾಕಾಲ 6ರಿಂದ ಭಜನಾ ಮಂಡಳಿಯಿಂದ ಭಜನೆ,
ರಾತ್ರಿ ಗಂಟೆ 08.00 ರಿಂದ ಮಂಗಳಾರತಿ ಹಾಗೂ ಪ್ರಸಾದ ವಿತರಣೆ. ಸಂಜೆ ಗಂಟೆ 07.30ಕ್ಕೆ ಸರಿಯಾಗಿ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ
ಶ್ರೀ ಕ್ಷೇತ್ರ ಹಿರಿಯಡಕ ಇವರಿಂದ
“ಅಪ್ಪೆ ಮಾಯಂದಾಲ್”ಎಂಬ ಪುಣ್ಯ ಕಥಾಭಾಗವನ್ನುಯಕ್ಷಗಾನ ಬಯಲಾಟವಾಗಿ ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳು ಸಪರಿವಾರ, ಇಷ್ಟ-ಮಿತ್ರ, ಬಂಧು-ಬಾಂಧವರೊಡಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಕಲಿಯುಗ ವರದ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಸಂಜೀವ ಗುರುಸ್ವಾಮಿ ಅಯ್ಯಪ್ಪ ,ವೃತಧಾರಿಗಳು ಮತ್ತು ಊರ, ಪರವೂರ ಹತ್ತು ಸಮಸ್ತರು , ಸನತ್ ಪೂಜಾರಿ ವಿರಾರ್ ಮುಂಬೈ
ವಿನಂತಿಸಿಕೊಂಡಿದ್ದಾರೆ ,
9880227041, 8197418266



Related posts

ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ : ಅ. 15ಕ್ಕೆ 19ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾ ಪೂಜೆ

Mumbai News Desk

ಮಾ 9 ರಿಂದ 11 ರ ವರಗೆ ಶ್ರೀ ಜಗದಂಬಾ ಮಂದಿರ, ಡೊಂಬಿವಲಿಯ 9ನೇ ವಾರ್ಷಿಕೋತ್ಸವ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠ : ಡಿ. 23ಕ್ಕೆ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರನೇ ವರ್ಷದ ಸಮಾರಾಧನೆ

Mumbai News Desk

ಮೇ 31, 2026 ರಂದು ಕುಮಾರಿ ಲಿಖಿತಾ ರತ್ನಾಕರ ಕರ್ಕೇರರ ಭರತನಾಟ್ಯಂ ಪ್ರಥಮ ರಂಗ ಪ್ರವೇಶ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk