28.4 C
Mumbai
March 7, 2026
Mumbai News Kannada
ಮುಂಬಯಿ

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ





ಮುಂಬಯಿ; ಮಹಾನಗರದ ಜನಪ್ರಿಯ ನಾಟಕ ತಂಡ ಅಭಿನಯ ಮಂಟಪ ಮುಂಬಯಿಯ ಕಲಾವಿದರು ಅಭಿನಯಿಸುವ “ಕೋರ್ದಬ್ಬು ತನ್ನಿ ಮಾನಿಗ” ಮತ್ತು “ಪಂಜುರ್ಲಿ” ಈ ಎರಡು ತುಳು ನಾಟಕಗಳ ಮುಹೂರ್ತವು ಅಸಲ್ಪದ ಗೀತಾಂಬಿಕ ಮಂದಿರದ ಅರ್ಚಕರಿಂದ ಮಾತೆ ಗೀತಾಂಬಿಕೆಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ನಡೆಯಿತು.
ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ. ಶೆಟ್ಟಿ ,ನಿರ್ದೇಶಕ ಕರುಣಾಕರ ಕೆ. ಕಾಪು ಮತ್ತು ಸಾ ದಯ ಇವರೊಂದಿಗೆ ಎಲ್ಲಾ ಕಲಾವಿದರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು . ಮಾರ್ಚ್ 9 ರಂದು ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮ ಅಂದೇರಿ ಮೊಗವೀರ ಭವನದಲ್ಲಿ ನಡೆಯಲಿದ್ದು, ಅಂದು ಪಂಜುರ್ಲಿ ನಾಟಕ ಪ್ರದರ್ಶನಗೊಳ್ಳಲಿದೆ . ಕೋರ್ದಬ್ಬು ತನ್ನಿ ಮಾನಿಗ ನಾಟಕವು ಅಭಿನಯ ಮಂಟಪದ 43ನೇ ವಾರ್ಷಿಕೋತ್ಸವದಂದು ಪ್ರದರ್ಶನಗೊಳ್ಳಲಿದೆ. ಕೋರ್ದಬ್ಬು ತನ್ನಿ ಮಾನಿಗ ದಿ. ಯು ಆರ್ ಚಂದರ್ ಮತ್ತು ಪಂಜುರ್ಲಿ ನಾಟಕವನ್ನು ಭರತ್ ಕರ್ಕೆರ ಮಂಗಳೂರು ರಚಿಸಿದ್ದು, ಈ ನಾಟಕಗಳನ್ನು ಖ್ಯಾತ ನಿರ್ದೇಶಕ ಅಭಿನಯ ಮಂಟಪದ ಕರುಣಾಕರ ಕೆ. ಕಾಪು ಇವರು ನಿರ್ದೇಶಿಸುತ್ತಿದ್ದಾರೆ..



Related posts

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk

ಮೊಗವೀರ ಬ್ಯಾಂಕಿನ ಆಡಳಿತ ಮಂಡಳಿ ಸಂಸದ ಗೋಪಾಲ್ ಶೆಟ್ಟಿ ಅವರನ್ನು ಭೇಟಿ

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಮಹಿಳಾ ವಿಭಾಗದ ವತಿಯಿಂದ ಅಷ್ಟ ವಿನಾಯಕ ದರ್ಶನ ಪ್ರವಾಸ.

Mumbai News Desk

ದಹಿಸರ್‌ನಲ್ಲಿ 19ನೇ ವರ್ಷದ ಅಯ್ಯಪ್ಪ ಸ್ವಾಮಿ ಮಹಾಪೂಜೆ ಸಂಭ್ರಮ

Mumbai News Desk

ಅನಿತಾ ಪಿ.ತಾಕೊಡೆಯವರಿಗೆ ಚೆಂಬೂರು ಕರ್ನಾಟಕ ಸಂಘ ಕೊಡಮಾಡುವ “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮಾರಕ ಪ್ರಶಸ್ತಿ”

Mumbai News Desk