30.9 C
Mumbai
June 8, 2026
Mumbai News Kannada
ಮುಂಬಯಿ

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ





ಮುಂಬಯಿ; ಮಹಾನಗರದ ಜನಪ್ರಿಯ ನಾಟಕ ತಂಡ ಅಭಿನಯ ಮಂಟಪ ಮುಂಬಯಿಯ ಕಲಾವಿದರು ಅಭಿನಯಿಸುವ “ಕೋರ್ದಬ್ಬು ತನ್ನಿ ಮಾನಿಗ” ಮತ್ತು “ಪಂಜುರ್ಲಿ” ಈ ಎರಡು ತುಳು ನಾಟಕಗಳ ಮುಹೂರ್ತವು ಅಸಲ್ಪದ ಗೀತಾಂಬಿಕ ಮಂದಿರದ ಅರ್ಚಕರಿಂದ ಮಾತೆ ಗೀತಾಂಬಿಕೆಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ನಡೆಯಿತು.
ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ. ಶೆಟ್ಟಿ ,ನಿರ್ದೇಶಕ ಕರುಣಾಕರ ಕೆ. ಕಾಪು ಮತ್ತು ಸಾ ದಯ ಇವರೊಂದಿಗೆ ಎಲ್ಲಾ ಕಲಾವಿದರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು . ಮಾರ್ಚ್ 9 ರಂದು ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮ ಅಂದೇರಿ ಮೊಗವೀರ ಭವನದಲ್ಲಿ ನಡೆಯಲಿದ್ದು, ಅಂದು ಪಂಜುರ್ಲಿ ನಾಟಕ ಪ್ರದರ್ಶನಗೊಳ್ಳಲಿದೆ . ಕೋರ್ದಬ್ಬು ತನ್ನಿ ಮಾನಿಗ ನಾಟಕವು ಅಭಿನಯ ಮಂಟಪದ 43ನೇ ವಾರ್ಷಿಕೋತ್ಸವದಂದು ಪ್ರದರ್ಶನಗೊಳ್ಳಲಿದೆ. ಕೋರ್ದಬ್ಬು ತನ್ನಿ ಮಾನಿಗ ದಿ. ಯು ಆರ್ ಚಂದರ್ ಮತ್ತು ಪಂಜುರ್ಲಿ ನಾಟಕವನ್ನು ಭರತ್ ಕರ್ಕೆರ ಮಂಗಳೂರು ರಚಿಸಿದ್ದು, ಈ ನಾಟಕಗಳನ್ನು ಖ್ಯಾತ ನಿರ್ದೇಶಕ ಅಭಿನಯ ಮಂಟಪದ ಕರುಣಾಕರ ಕೆ. ಕಾಪು ಇವರು ನಿರ್ದೇಶಿಸುತ್ತಿದ್ದಾರೆ..



Related posts

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಎಂಟನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ಜೈ ಶ್ರೀ ವಿಶ್ವಕರ್ಮ ಭಜನಾ ಮಂಡಳಿಯ 15ನೇ ವರ್ಷದ ಸಂಭ್ರಮ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ : ಭಕ್ತಿ ಸಂಭ್ರಮದ   ಪಲ್ಲಕ್ಕಿ ಉತ್ಸವ, .

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ.

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಸುವರ್ಣ ಕರ್ನಾಟಕ ರಾಜ್ಯೋತ್ಸವ

Mumbai News Desk