September 6, 2026
Mumbai News Kannada
ಮುಂಬಯಿ

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ





ಮುಂಬಯಿ; ಮಹಾನಗರದ ಜನಪ್ರಿಯ ನಾಟಕ ತಂಡ ಅಭಿನಯ ಮಂಟಪ ಮುಂಬಯಿಯ ಕಲಾವಿದರು ಅಭಿನಯಿಸುವ “ಕೋರ್ದಬ್ಬು ತನ್ನಿ ಮಾನಿಗ” ಮತ್ತು “ಪಂಜುರ್ಲಿ” ಈ ಎರಡು ತುಳು ನಾಟಕಗಳ ಮುಹೂರ್ತವು ಅಸಲ್ಪದ ಗೀತಾಂಬಿಕ ಮಂದಿರದ ಅರ್ಚಕರಿಂದ ಮಾತೆ ಗೀತಾಂಬಿಕೆಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ನಡೆಯಿತು.
ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ. ಶೆಟ್ಟಿ ,ನಿರ್ದೇಶಕ ಕರುಣಾಕರ ಕೆ. ಕಾಪು ಮತ್ತು ಸಾ ದಯ ಇವರೊಂದಿಗೆ ಎಲ್ಲಾ ಕಲಾವಿದರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು . ಮಾರ್ಚ್ 9 ರಂದು ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮ ಅಂದೇರಿ ಮೊಗವೀರ ಭವನದಲ್ಲಿ ನಡೆಯಲಿದ್ದು, ಅಂದು ಪಂಜುರ್ಲಿ ನಾಟಕ ಪ್ರದರ್ಶನಗೊಳ್ಳಲಿದೆ . ಕೋರ್ದಬ್ಬು ತನ್ನಿ ಮಾನಿಗ ನಾಟಕವು ಅಭಿನಯ ಮಂಟಪದ 43ನೇ ವಾರ್ಷಿಕೋತ್ಸವದಂದು ಪ್ರದರ್ಶನಗೊಳ್ಳಲಿದೆ. ಕೋರ್ದಬ್ಬು ತನ್ನಿ ಮಾನಿಗ ದಿ. ಯು ಆರ್ ಚಂದರ್ ಮತ್ತು ಪಂಜುರ್ಲಿ ನಾಟಕವನ್ನು ಭರತ್ ಕರ್ಕೆರ ಮಂಗಳೂರು ರಚಿಸಿದ್ದು, ಈ ನಾಟಕಗಳನ್ನು ಖ್ಯಾತ ನಿರ್ದೇಶಕ ಅಭಿನಯ ಮಂಟಪದ ಕರುಣಾಕರ ಕೆ. ಕಾಪು ಇವರು ನಿರ್ದೇಶಿಸುತ್ತಿದ್ದಾರೆ..



Related posts

ಮಲಾಡ್ ಗೋವಿಂದ್ ನಗರ್ ದ ಶ್ರೀ ಅಂಬಿಕಾ  ಮಂದಿರದಲ್ಲಿ ಭಕ್ತಿ ಸಂಭ್ರಮದ ದಸರಾ ಮಹೋತ್ಸವ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಭಾರತ್ ಬ್ಯಾಂಕ್: 48 ನೇ ಸಂಸ್ಥಾಪನಾ ದಿನಾಚರಣೆ ವಿಜೃಂಭಣೆಯಿಂದ ಆಚರಣೆ

Mumbai News Desk

ಮುಂಬೈ ವಿಶ್ವವಿದ್ಯಾಲಯ ಕನ್ನಡ ಎಂ.ಎ ಫಲಿತಾಂಶ: ಶ್ಯಾಮಲಾ ಉಚ್ಚಿಲ್ ಪ್ರಥಮ ಸ್ಥಾನ

Mumbai News Desk

ಗ್ರಾಹಕರ ವಿಶ್ವಾಸವೇ ಭಾರತ್ ಬ್ಯಾಂಕ್‌ನ ಶಕ್ತಿ: ಬಾಂದ್ರಾ ಪೂರ್ವ ಶಾಖೆಯಲ್ಲಿ 48ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ

Mumbai News Desk