32 C
Mumbai
April 24, 2026
Mumbai News Kannada
ಮುಂಬಯಿ

ಅಭಿನಯ ಮಂಟಪ ( ರಿ.) ಮುಂಬಯಿ ಎರಡು ನಾಟಕಗಳ ಮುಹೂರ್ತ





ಮುಂಬಯಿ; ಮಹಾನಗರದ ಜನಪ್ರಿಯ ನಾಟಕ ತಂಡ ಅಭಿನಯ ಮಂಟಪ ಮುಂಬಯಿಯ ಕಲಾವಿದರು ಅಭಿನಯಿಸುವ “ಕೋರ್ದಬ್ಬು ತನ್ನಿ ಮಾನಿಗ” ಮತ್ತು “ಪಂಜುರ್ಲಿ” ಈ ಎರಡು ತುಳು ನಾಟಕಗಳ ಮುಹೂರ್ತವು ಅಸಲ್ಪದ ಗೀತಾಂಬಿಕ ಮಂದಿರದ ಅರ್ಚಕರಿಂದ ಮಾತೆ ಗೀತಾಂಬಿಕೆಗೆ ಪೂಜೆ ಸಲ್ಲಿಸುವ ಮೂಲಕ ಇತ್ತೀಚೆಗೆ ನಡೆಯಿತು.
ಅಭಿನಯ ಮಂಟಪದ ಅಧ್ಯಕ್ಷರಾದ ಬಾಲಕೃಷ್ಣ ಡಿ. ಶೆಟ್ಟಿ ,ನಿರ್ದೇಶಕ ಕರುಣಾಕರ ಕೆ. ಕಾಪು ಮತ್ತು ಸಾ ದಯ ಇವರೊಂದಿಗೆ ಎಲ್ಲಾ ಕಲಾವಿದರು ಹಾಗೂ ಸದಸ್ಯರು ಪಾಲ್ಗೊಂಡಿದ್ದರು . ಮಾರ್ಚ್ 9 ರಂದು ಮೊಗವೀರ ಕನ್ನಡ ಮಾಸಿಕದ 85ನೇ ಸಂಭ್ರಮ ಅಂದೇರಿ ಮೊಗವೀರ ಭವನದಲ್ಲಿ ನಡೆಯಲಿದ್ದು, ಅಂದು ಪಂಜುರ್ಲಿ ನಾಟಕ ಪ್ರದರ್ಶನಗೊಳ್ಳಲಿದೆ . ಕೋರ್ದಬ್ಬು ತನ್ನಿ ಮಾನಿಗ ನಾಟಕವು ಅಭಿನಯ ಮಂಟಪದ 43ನೇ ವಾರ್ಷಿಕೋತ್ಸವದಂದು ಪ್ರದರ್ಶನಗೊಳ್ಳಲಿದೆ. ಕೋರ್ದಬ್ಬು ತನ್ನಿ ಮಾನಿಗ ದಿ. ಯು ಆರ್ ಚಂದರ್ ಮತ್ತು ಪಂಜುರ್ಲಿ ನಾಟಕವನ್ನು ಭರತ್ ಕರ್ಕೆರ ಮಂಗಳೂರು ರಚಿಸಿದ್ದು, ಈ ನಾಟಕಗಳನ್ನು ಖ್ಯಾತ ನಿರ್ದೇಶಕ ಅಭಿನಯ ಮಂಟಪದ ಕರುಣಾಕರ ಕೆ. ಕಾಪು ಇವರು ನಿರ್ದೇಶಿಸುತ್ತಿದ್ದಾರೆ..



Related posts

ಕುಲಾಲ ಸಂಘ ಮುಂಬಯಿ ಇದರ ನವಿ ಮುಂಬೈ ಸ್ಥಳೀಯ ಸಮಿತಿಯ ಸತ್ಯನಾರಾಯಣ ಪೂಜೆ, 150 ನೇ ತಿಂಗಳ ಭಜನೆ, ಹಳದಿ ಕುಂಕುಮ

Mumbai News Desk

ನಾಲಾಸೋಪಾರ ದ ಉದ್ಯಮಿ, ಸಮಾಜ ಸೇವಕ. ಸಂಘಟಕ,  ಶಶಿಧರ. ಕೆ ಶೆಟ್ಟಿ ಇನ್ನಂಜೆಯವರಿಗೆ ಪೋಲಿಸ್ ಇಲಾಖೆಯ ಅತ್ಯುತ್ತಮ  ಸೇವಕರ್ತ ಪ್ರಶಸ್ತಿ ಪ್ರದಾನ .

Mumbai News Desk

ಶ್ರೀ ಮಹಾ ವಿಷ್ಣು ಮಂದಿರ ಡೊಂಬಿವಲಿ: ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ‘ಅರಿಶಿನ-ಕುಂಕುಮ’ ಕಾರ್ಯಕ್ರಮ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

Mumbai News Desk

ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಿಂದರಿನ ವಾರ್ಷಿಕ ಮಹಾಸಭೆ.

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ – ನಾಗರ ಪಂಚಮಿ ಆಚರಣೆ

Mumbai News Desk