July 23, 2026
Mumbai News Kannada
ಸುದ್ದಿ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.








ಮನೋಹರ್ ಶೆಟ್ಟಿ ಸಮಾಜಕ್ಕೆ ಅನುಕರಣಿಯರು – ದುಗ್ಗಣ್ಣ ಸಾವಂತ


ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಶ್ವರರಾಗಿ ದಕ್ಷ ಆಡಳಿತ ನೀಡಿ ಸ್ವರ್ಗಸ್ತರದ ಎನ್ ಎಸ್ ಮನೋವ ಶೆಟ್ಟಿ ಕಕ್ವಗುತ್ತು ಗ ಅವರಿಗೆ ಈ ಕ್ಷೇತ್ರ ಬಪ್ಪನಾಡುವಿನ ಜ್ಞಾನ ಮಂದಿರದಲ್ಲಿ ಮಾರ್ಚ್ 23ರಂದು ನುಡಿ ನಮನ ಕಾರ್ಯಕ್ರಮ ಜರಗಿತು.
ಈ ಸಂದರ್ಭ ಮಾತನಾಡಿದ ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೋಕ್ತೆಸರರಾದ ದುಗ್ಗಣ್ಣ ಸಾವಂತರು ಮಾತನಾಡುತ್ತ ” ಬಪ್ಪನಾಡು ದೇವಳದಲ್ಲಿ ಜವಾಬ್ದಾರಿತವಾಗಿ ಕಾರ್ಯನಿರ್ವಹಿಸಿದ ಮನೋಹರ್ ಶೆಟ್ಟಿ ಅವರು ಸಮಾಜಕ್ಕೆ ಅನುಕರಣೆಯರು. ಯಾವುದೇ ಸ್ವಾರ್ಥ ಇಲ್ಲದೆ ಒಳ್ಳೆಯ ಮನೋಭಾವನೆ, ದಕ್ಷತೆ, ಶಿಸ್ತು ಮತ್ತು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಅವರ ಅಗಲುವಿಕೆ ತುಂಬಲಾರದ ನಷ್ಟ ಎಂದು ಅವರು ನುಡಿ ನಮ್ಮನ್ನು ಸಲ್ಲಿಸಿದರು.
ಶಾಸಕ ಉಮನಾಥ ಎ ಕೋಟ್ಯಾನ್, ಮಾಜಿ ಸಚಿವ ಕೆ ಅಭಯ್ ಚಂದ್ರ ಜೈನ್, ಕಸಾಪ ರಾಜ್ಯ ಪೂರ್ವಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕರಾದ ತ್ರಿಪತಿ ಉಪಾಧ್ಯಾಯ ಮತ್ತು ನರಸಿಂಹ ಭಟ್, ಸಸಿಹಿತ್ಲು ಭಗವತಿ ದೇವಳದ ಅಪ್ಪು ಯಾನೆ ಶ್ರೀನಿವಾಸ ಪೂಜಾರಿ, ಎಳತ್ತೂರು ದೇವಳದ ಸಂತೋಷ್ ಕುಮಾರ್ ಹೆಗ್ಡೆ, ಬಿಲ್ಲವ ಸಂಘದ ವಾಮನ ಕೋಟ್ಯಾನ್ ನಡಿಕುದ್ರು, ಬಂಟರ ಸಂಘದ ಅಶೋಕ್ ಕುಮಾರ್ ಶೆಟ್ಟಿ, ಬಪ್ಪನಾಡು ದೇವಳದ ಜೀರ್ಣೋದ್ಧಾರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿ ಕಿಲ್ಪಾಡಿ ಭಂಡಸಾಲೆ, ಪತಂಜಲಿ ಯೋಗ ಸಮಿತಿಯ ರಾಜೇಶ್ ಭುವನಾಭೀರಾಮ ಉಡುಪ, ಗುರುವಪ್ಪ ಕೋಟ್ಯಾನ್, ಸುನಿಲ್ ಆಳ್ವ ನುಡಿ ನಮನ ಸಲ್ಲಿಸಿದರು.
ದೇವಳದ ಪವಿತ್ರಪಾಣಿ ಅತ್ತೂರು, ಬೈಲಮನೆ ವೆಂಕಟರಾಜು ಉಡುಪ, ಜೀರ್ಣೋದ್ದಾರ ಸಮಿತಿಯ ಮಾಜಿ ಅಧ್ಯಕ್ಷ ಪಾದೆಮನೆ ಜಯಂತ್ ರೈ, ಪ್ರಮುಖರಾದ ಸುಭಾಸಚಂದ್ರ ಭಂಡಾರಿ, ಕೋಲ್ನಾಡು ಕಿರಣ್ ಶೆಟ್ಟಿ, ರಾಮಚಂದ್ರ ನಾಯಕ್, ಹರಿಶ್ಚಂದ್ರ ಪಿ.ಸಾಲ್ಯಾನ್, ಮೂಲ್ಕಿ ಸಪಂ ಅಧ್ಯಕ್ಷ ಸತೀಶ್ ಅಂಚನ್ ಜೀವನ್ ಕೆ ಶೆಟ್ಟಿ ಉದಯಶೆಟ್ಟಿ ಜಯಶೆಟ್ಟಿ ಮಯೂರಿ, ಸಂಜೀವ ದೇವಾಡಿಗ ನಾಗೇಶ್ಕೊಪ್ಪನಾಡು ಶಿವಶಂಕರ್ ವರ್ಮ, ಮನೋಹರ್ ಶೆಟ್ಟಿ ಮತ್ತು ಅವರ ಕುಟುಂಬಿಕರು ಉಪಸ್ಥಿತರಿದ್ದರು.



Related posts

ಕೊಂಕಣ ರೈಲ್ವೆ ವಿಲೀನಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಒತ್ತಾಯ: ಕರಾವಳಿ ಅಭಿವೃದ್ಧಿಗೆ ಲೋಕಸಭೆಯಲ್ಲಿ ಬಲವಾದ ಮಂಡನೆ

Mumbai News Desk

ಬಂಟ್ವಾಳ: ‘ಯಕ್ಷರಂಗದ ರಾಜ’ ಖ್ಯಾತಿಯ ಪೆರುವಾಯಿ ನಾರಾಯಣ ಶೆಟ್ಟಿ ಇನ್ನಿಲ್ಲ,

Mumbai News Desk

ಮೋದಿ-ಪುಟಿನ್ ಭೇಟಿ: ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆಗೆ ಒತ್ತು

Mumbai News Desk

ರಂಗನಟ, ದೂರದರ್ಶನ ಕಲಾವಿದ ರಮೇಶ ಶಿವಪುರ ಅವರಿಗೆ ಮಾತೃ ವಿಯೋಗ

Mumbai News Desk

ಮುಂಬಯಿಯ ಹಿರಿಯ ಪತ್ರಕರ್ತ ರವಿ ಬಿ ಅಂಚನ್ ರಿಗೆ ಮಾತೃ ವಿಯೋಗ.

Mumbai News Desk

ಮಂಗಳೂರು ಕುಲಾಲ ಭವನದ ಉದ್ಘಾಟನೆಯ ಆಹ್ವಾನ ಪತ್ರಿಕೆ ವಿತರಣೆ: ಕುಲಾಲ ಸುಧಾರಕ ಸಂಘ ಪುಣೆ ಸದಸ್ಯರಿಗೆ ಆಹ್ವಾನ

Mumbai News Desk