30.9 C
Mumbai
June 8, 2026
Mumbai News Kannada
ಮುಂಬಯಿ

ಕುಲಾಲ ಪರ್ಬ  ಮುಂಬೈಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ.





ಕುಲಾಲ ಪರ್ಬ” ದಲ್ಲಿ ಮುಂಬೈಯ ದಾನಿ ಸುನಿಲ್ ಸಾಲ್ಯಾನ್ ಗುರುತಿಸಿರುವುದು ಅಭಿಮಾನ ತಂದಿದೆ: ರಘು ಮೂಲ್ಯ ಪಾದೆ ಬೆಟ್ಟು.

ಮಂಗಳೂರು :   ಮುಂಬೈಯ ಕುಲಾಲರು  ಎಲ್ಲಾರು ಒಂದೇ ಕುಟುಂಬದಂತೆ ಕುಲಾಲ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಮುಂಬೈ ಕುಲಾಲ ಸಂಘ ಸಮಾಜದ ಬಂಧುಗಳಿಗೆ ಆಶ್ರಯವನ್ನು ನೀಡುತ್ತಾ ಬಂದಿದೆ. ಸಂಘಕ್ಕೆ ಮತ್ತು ಸಮಾಜಕ್ಕೆ  ಕೊಡುಗೆಯನ್ನು ನೀಡಿರುವ ಸುನಿಲ್ ರಾಜು ಸಾಲ್ಯಾನ್ ಮತ್ತು ದೇವಕಿ ಸಾಲ್ಯಾನ್ ದಂಪತಿಯನ್ನು ಮಂಗಳೂರಿನ ಕುಲಾಲ ಪರ್ಬ ದಲ್ಲಿ ಗುರುತಿಸಿ ಸನ್ಮಾನಿಸಿರುವ ಕಾರ್ಯ ಅಭಿನಂದನೆಯ ಎಂದು ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘುಮೂಲ್ಯ ಪಾದಬೆಟ್ಟು ಮಾಧ್ಯಮಕ್ಕೆ ತಿಳಿಸಿದ್ದಾರೆ.

,    ಜನ್ಮ  ಭೂಮಿ ಮಂಗಳೂರಿನಲ್ಲಿ  ಕುಲಾಲ ಪರ್ಬ ,13/04/2025 ರಂದು ಆದಿತ್ಯವಾರ 2 ಗಂಟೆಯಿಂದ ,ಮಂಗಳೂರಿನ ಉರ್ವ ಸ್ಟೋರ್ ನ ಹತ್ತಿರ ಅಂಬೇಡ್ಕರ್ ಸಭಾ ಭವನದಲ್ಲಿ ಶ್ರೀಮತಿ ಸುಮಿತ್ರ ರಾಜು ಸಾಲ್ಯಾನ್ ವೇದಿಕೆಯಲ್ಲಿ ಶ್ರೀ ಧಾಮ ಮಾಣಿಲ ಶ್ರೀ ಶ್ರೀ ಮೋಹನ್ ದಾಸ ಸ್ವಾಮೀಜಿಯವರ ಉದ್ಘಾಟಿಸಿ ,ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನೃತ್ತ್ಯೋತ್ಸವ, ನಾಟಕ , ನುರಿತ ಯುವಕರಿಂದ ತಾಲೀಮು , ಆವಶ್ಯಕತೆ ಇದ್ದವರಿಗೆ ನೆರವು ,  25 ಪ್ರತಿಭೆಗಳನ್ನು ಗುರುತಿಸಿ ಸಾದಕರಿಗೆ ಪ್ರತಿಭೆ ಪುರಸ್ಕಾರ ಗೌರವವನ್ನು  .ಮಹಾದಾನಿ ,ಕುಲಾಲರ ಬಂದು, ಶ್ರೀಮಂತ. ಬಡವ ಎನ್ನದೆ  ಕರೆದಾಗ ಓಗೊಟ್ಟು ಬಂದು ,ಅವರಿಗೆ ಬೆನ್ನುಲ್ಬಾಗಿ ನಿಂತು, ಹಿತವಚನ ನೀಡಿ ಸಹಾಯ ಹಸ್ತ ನೀಡುವ ಕುಲಾಲ ಕಣ್ಮಣಿ ಶ್ರೀಯುತ ಸುನಿಲ್ ಸಾಲಿಯಾನ್  ದoಪತಿಯವರಿಗೆ , ಅವರು ತಾಯಿ ಹೆಸರಿನಲ್ಲಿ ನಿರ್ಮಾಣ ವಾಗಿರುವ. ಸುಮಿತ್ರಾ ರಾಜು ಸಾಲಿಯಾನ್ ರವರ ಭವ್ಯ ವೇದಿಕೆಯಲ್ಲಿ ಗಣ್ಯಾದಿ ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ನೀಡಲಾಗುವುದು ಇದಕ್ಕೆ ಮುಂಬೈ ಕುಲಾಲರು ಸಾಕ್ಷಿಯಾಗೋಣ   ಎಂದು ನುಡಿದರು

 ಮುಂಬೈ ಕುಲಾಲ ಸಂಘದ ಗೌರವ ಅಧ್ಯಕ್ಷ.   ದೇವದಾಸ್ ಕುಲಾಲ್ಅವರು ತನ್ನ ಅಭಿಪ್ರಾಯವನ್ನು ತಿಳಿಸಿ ಮುಂಬೈಯ ವಿವಿಧ ಸಮಾಜದ

ಪ್ರಮುಖರಾದ ಐಕಳ ಹರೀಶ್‌ ಶೆಟ್ಟಿ, ಸದಾಶಿವ ಶೆಟ್ಟಿಕನ್ಯಾನ, ಶಶಿಧರ ಶೆಟ್ಟಿ ಬರೋಡ,

ಕರ್ನಿರೆ ವಿಶ್ವನಾಥ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ. ಮೋಹನ್ ಪೂಜಾರಿ‌ ರಘು ಮೂಲ್ಯ. ಗಿರೀಶ್ ಸಾಲ್ಯಾನ್. ಜಗದೀಶ್ ಬಂಜನ್. ಡಾಕ್ಟರ್ ಸುರೇಖಾ ರತನ್ ಕುಲಾಲ್. ಅಶೋಕ್ ಮೂಲ್ಯ ದಾಣೆ, 

ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಈ .

ಕುಲಾಲ ಪರ್ಬ ವನ್ನು ಮುಂಬೈಯ ಕುಲಾಲರು ಒಗ್ಗಟ್ಟಾಗಿ ಯಶಸ್ವಿ  ಗೊಳಿಸೋಣ  ಎಂದು ನುಡಿದರು.

 ಮುಂಬೈಯ ಜ್ಯೋತಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯ ಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ಮಾತನಾಡಿ

ಶ್ರೀ ವೀರ ನಾರಾಯಣ ದೇವರ ಕೃಪೆಯಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ಜರಗಲಿ ,ಎಂದು ಶುಭ ಹಾರೈಸುವ ,

ಈ ಸಂದರ್ಭದಲ್ಲಿ   ಕುಲಾಲ ಸಂಘ ಮುಂಬಯಿ ಉಪಾಧ್ಯಕ್ಷ ಡಿ ಐ  ಮೂಲ್ಯ. ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್. ಗೌರವ ಕೋಶಧಿಕಾರಿ ಜಯ ಅಂಚನ್. ಕುಲಾಲ ಪರ್ಬ ದಲ್ಲಿ ಸನ್ಮಾನ ಸ್ವೀಕರಿಸಲಿರುವ ಮುಂಬೈಯ ಮಹಾದಾನಿ ಸುನಿಲ್ ಸಾಲ್ಯಾನ್. ಉಮೇಶ್ ಬಂಗೇರ ಸುನಿಲ್ ಕುಲಾಲ್. ಅಮೂಲ್ಯ ಪತ್ರಿಕೆಯ ಉಪಸಂಪಾದಕ ಎಲ್ ಆರ್ ಮೂಲ್ಯ ಉಪಸ್ಥರಿದ್ದರು.

B. Dinesh Kulal

Mob.: 9821868674



Related posts

ಶ್ರೀ ದೇವಿ ಯಕ್ಷಕಲಾ ನಿಲಯ ವಿರಾರ್- ನಾಲಾಸೋಪಾರ: ಯಕ್ಷಗಾನ  ಶಿಬಿರ, ಭರತ ನಾಟ್ಯ, ಭಜನೆ,, ಕನ್ನಡ ಕಲಿಕೆ  ಮುಹೂರ್ತ

Mumbai News Desk

ಥಾಣೆ ಶ್ರೀ ಮಂತ್ರದೇವತೆ ಸನ್ನಿಧಿಯಲ್ಲಿ 4ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವ,

Mumbai News Desk

ಮುಂಬೈ ಗಿರ್ ಗಾಂವ್ ನಲ್ಲಿ  “ಗುಡಿಪಾಡ್ವಾ”  ಹಿಂದೂ ನವ ವರ್ಷಾಚರಣೆಯ ಸಂಭ್ರಮ.

Mumbai News Desk

ಮೀರಾರೋಡ್ ಪೂರ್ವದ ಶ್ರೀ ರಾಧಾ ಕೃಷ್ಣ ವೃದ್ಧಾಶ್ರಮಕ್ಕೆ ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ  ಮಹಿಳಾ ವಿಭಾಗ ಭೇಟಿ

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

Mumbai News Desk