July 22, 2026
Mumbai News Kannada
ಮುಂಬಯಿ

ಮುಂಬೈಯ ಉದ್ಯಮಿ, ಸಂಘಟಕ ಶ್ರೀನಿವಾಸ ಸಾಫಲ್ಯ ಅವರ ಸೋಮೇಶ್ವರ ನಿವಾಸದಲ್ಲಿ ಶ್ರೀ ಸತ್ಯನಾರಾಯಣ ಮಹಾಪೂಜೆ,ಶ್ರೀ ಶನಿ ಮಹಾಪೂಜೆ.







ಸೋಮೇಶ್ವರದ ಒಡೆಯ ಸೋಮನಾಥ ದೇವರ ಮಹಾದ್ವಾರದ ಸನಿಹ ” ದಿವ್ಯ ಶ್ರೀ ” ನಿವಾಸ ದ ಯಾಜಮಾನ ಮುಂಬೈಯ ಸಾಫಲ್ಯ ಸೇವಾ ಸಂಘದ ಅದ್ಯಕ್ಷರು ಹಾಗೂ ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿ ಮಲಾಡ್ ನ ಅಧ್ಯಕ್ಷರೂ ಆದ ಶ್ರೀನಿವಾಸ ಸಾಫಲ್ಯ ಮತ್ತು ಅವರ ಪತ್ನಿ ರತಿಕಾ ಶ್ರೀನಿವಾಸ ಸಾಫಲ್ಯ ಅವರು ತಮ್ಮ ನಿವಾಸದಲ್ಲಿ ದಿನವಿಡೀ ಧಾರ್ಮಿಕ ಕಾರ್ಯಕ್ರಮ ವನ್ನು ಆಯೋಜಿಸಿದ್ದರು.


ತಾ- 16-11-23 ರ ವೃಶ್ಚಿಕ ಸಂಕ್ರಮಣದ ಪರ್ವಕಾಲದಲ್ಲಿ ಬೆಳಿಗ್ಗೆ ಶ್ರೀ ಸತ್ಯನಾರಯಣ ಮಹಾ ಪೂಜೆ ಯು ಶ್ರೀಪತಿ ಭಟ್ ಅವರ ಪೌರೋಹಿತ್ಯ ದಲ್ಲಿ ಸಾಂಗವಾಗಿ ನಡೆಯಿತು. ಪೂಜೆಯ ನಂತರ ಮಹಾ ಮಂಗಳಾರತಿ ನಡೆಯಿತು.
ಮದ್ಯಾಹ್ನ ನಡೆದ ಅನ್ನ ಸಂತರ್ಪಣೆಯಲ್ಲಿ ನೂರಾರು ಭಕ್ತ ಭಾಂದವರು ಭಾಗಿಗಳಾದರು.


ಅಪರಾಹ್ನ ಎರಡುಘಂಟೆ ನಲವತ್ತ ಐದು ನಿಮಿಷ ಕ್ಕೆ ಶ್ರೀಪತಿ ಭಟ್ ಅವರು ಶನಿ ದೇವರ ಕಲಶ ಪೂಜೆ ನೆರವೆರಿಸಿದರು.
ಬಳಿಕ ಶ್ರೀ ಶನಿಗ್ರಂಥ ಪಾರಯಾಣ ಯಕ್ಷಗಾನ ತಾಳ ಮದ್ದಳೆ ರೂಪಕ ದಲ್ಲಿ ನಡೆಯಿತು. ಶ್ರೀ ಮಹತೋಬರ ಶನಿ ಮಹಾತ್ಮ ಪೂಜಾ ಸಮಿತಿ ಮಲಾಡ್ ದ ಸದಸ್ಯರು ಹಾಗೂ ಯಕ್ಷಗಾನದ ಹೆಸರಾಂತ ಹಾಸ್ಯಗಾರ ಸೀತಾರಾಮ ಕುಲಾಲ್, ಶ್ರೀಪತಿ ಭಟ್ , ನಾರಾಯಣ ಶೆಟ್ಟಿ ,ವಾಸು ಸಾಲಿಯಾನ್ , ಸದಾನಂದ ಕಾಮತ್ , ಚಂದ್ರ ಕುಮಾರ್ ಶೆಟ್ಟಿ , ಗಂಗಾಧರ ಸುವರ್ಣ , ಸಹದೇವ ಸಾಲಿಯಾನ್ , ಉಮೇಶ್ ಕಾಂ ತರ ಮತ್ತು ಸ್ವತಹ ಶ್ರೀನಿವಾಸ ಸಾಫಲ್ಯ ಅವರು ಪಾರಾಯಣದಲ್ಲಿ ಭಾಗವಹಿಸಿದ್ದರು. ನಂತರ ಶ್ರೀ ಶನಿ ದೇವರಿಗೆ ಭಜನೆಯ ಜತೆಗೆ ಮಂಗಳಾರತಿ ಮಾಡಲಾಯಿತು. ಭಕ್ತ ಭಾಂದವರು ಶ್ರೀ ಸತ್ಯನಾರಾಯಣ ದೇವರ, ಶ್ರೀ ಶನಿದೇವರ ಮಹಾಪ್ರಸಾದ ಸ್ವೀಕರಿಸಿದರು. ಮುಂಬಯಿ ಸಾಫಲ್ಯ ಸಮಾಜ ಭಾಂದವರು, ಶ್ರೀ ಮಹತೋಬಾರ ಶನಿ ಮಹಾತ್ಮ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶ್ರೀನಿವಾಸ ಸಾಫಲ್ಯ ಅವರ ಕುಟುಂಬಸ್ತರು, ಪರಿಸರದ ಭಕ್ತರು ದಿನವಿಡೀ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ದೀಪಾವಳಿಹಬ್ಬದ ಶುಭಾಶಯಗಳು



Related posts

ಮುಂಬೈ : ಮೊದಲ ಮಹಿಳಾ ಬಿಎಂಸಿ ಆಯುಕ್ತರಾಗಿ ಅಶ್ವಿನಿ ಭಿಡೆ ನೇಮಕ

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ದಹಿಸರ್ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದಲ್ಲಿ 40ನೇ ವಾರ್ಷಿಕ ಮಹಾಪೂಜಾ ಮಹೋತ್ಸವ (ಬಲಿ ಉತ್ಸವ, ಸಾಧಕರಿಗೆ ಸನ್ಮಾನ, ಯಕ್ಷಗಾನ ಪ್ರದರ್ಶನ)

Mumbai News Desk

ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ‘ಆಟಿಡೊಂಜಿ ದಿನ’ ಆಚರಣೆ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಾರ್ಥನಾ ಪೂಜಾರಿಗೆ ಶೇ 94.40 ಅಂಕ.

Mumbai News Desk

ಶ್ರೀ ಮಹಾವಿಷ್ಣು ಮಂದಿರ , ಡೊಂಬಿವಲಿ , ವಾರ್ಷಿಕ ಭಜನಾ ಮಂಗಲೋತ್ಸವ ಹಾಗೂ ಏಕಾಹ ಭಜನೆ.

Mumbai News Desk