28.4 C
Mumbai
March 7, 2026
Mumbai News Kannada
ಪ್ರಕಟಣೆ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.





ಉಡುಪಿಯ ಹೃದಯಭಾಗದಲ್ಲಿ ಭಕ್ತರಿಂದ ಪ್ರತಿಷ್ಠೆಗೊಂಡು ಆರಾದಿಸಿಕೊಂಡು ಬರುತ್ತಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಉತ್ಸವವು ಜನವರಿ 15ರ ಸೋಮವಾರ ದಿಂದ 16ರ ಮಂಗಳವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.


ಜ.15 ಕ್ಕೆ ,ಸೂರ್ಯೋದಯದಿಂದ – ಸೂರ್ಯಾಸ್ತದ ವರೆಗೆ ಭಜನಾ ಕಾರ್ಯಕ್ರಮ ಕಪೆಟ್ಟು ಸೂರ್ಯಪ್ರಕಾಶ್,ವಿಶ್ವನಾಥ್ ಸನಿಲ್, ಶ್ರೀಕಾಂತ್ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಬೆಳ್ಳಿಗ್ಗೆ 8 ಗಂಟೆಗೆ ,ಮಧ್ಯಾಹ್ನ 12 ಗಂಟೆಗೆ, ರಾತ್ರಿ 8 ಗಂಟೆಗೆ ಮಹಾಪೂಜೆ ,ಹಾಗೂ ಪ್ರತಿ ಎರಡು ಗಂಟೆಗೆ ಚಾಮ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಿತ್ಯಾನಂದ ಮಂದಿರದಿಂದ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್-ಉಡ್ ಲ್ಯಾನ್ಡ್ ಹೋಟೆಲ್ ಬದಿಯಿಂದ ತೆಂಕಪೇಟೆಯಾಗಿ ಕೊಳದ ಪೇಟೆಯಿಂದ ಹಳೇ ಡಯಾನ ಸರ್ಕಲ್ ನಿಂದ ಜೋಡುಕಟ್ಟೆಗೆ ,ಅಲ್ಲಿಂದ ಹಿಂತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ಮಂದಿರ ತಲಪುವುದು.


ತಾ 16 ರಂದು ಬೆಳ್ಳಿಗ್ಗೆ 4.30ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗೆ ಭಕ್ತರಿಂದ ಸಿಯಾಳಾಭಿಷೇಕ.
5 ಗಂಟೆಗೆ – ಮಹಾಪೂಜೆ.
ಬೆಳ್ಳಿಗ್ಗೆ 8 ಗಂಟೆಗೆ ಪ್ರಥಮ ಆರತಿ
ಗಂಟೆ 9ಕ್ಕೆ ಶ್ರೀ ಗಣೇಶಯಜ್ಞ ಪ್ರಾರಂಭ
ಮದ್ಯಾಹ್ನ 12 ಗಂಟೆಗೆ ಮಹಾಪೂಜೆ
12.30 ಗಂಟೆಗೆ – ಬಾಲ ಭೋಜನ ಮತ್ತು ಮಹಾ ಅನ್ನಸಂತರ್ಪಣೆ.
ಸಂಜೆ 4 ಗಂಟೆಗೆ ಶ್ರೀ ಗಣೇಶಯಜ್ಞ ಪೂರ್ಣಾಹುತಿ
ರಾತ್ರಿ 8 ಗಂಟೆಗೆ ಮಹಾಪೂಜೆ.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಗಣೇಶ್ ಪುರಿಯ ಪ್ರಧಾನ ಅರ್ಚಕರಾದ ರಮೇಶ್ ಸುಲಾಖೆ ಮತ್ತು ಪುರೋಹಿತ ಬಳಗದವರು ವಹಿಸಿರುವರು.

ಅದೇ ದಿನ ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಸಭೆಯಲ್ಲಿ ಧಾರ್ಮಿಕ, ರಾಜಕೀಯ ಮುಖಂಡರು, ಊರ-ಪರಊರ ಗಣ್ಯರು,ಉದ್ಯಮಿಗಳು ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ವಿವಿಧ ನಿತ್ಯಾನಂದ ಮಂದಿರಗಳ ಪ್ರಮುಖರನ್ನು ಸನ್ಮಾನಿಸಲಾಗುವುದು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿ, ಇದರ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಹಾಗೂ ಅಧ್ಯಕ್ಷರು ಮತ್ತು ಟ್ರಸ್ಟಿಗಳು-ಶ್ರೀ ನಿತ್ಯಾನಂದ ಆಶ್ರಮ ,Kanhagad(ಕಾಸರಗೋಡು) ವರ್ದಂತಿ ಉತ್ಸವಕ್ಕೆಆದರದ ಸ್ವಾಗತ ಬಯಸಿದ್ದಾರೆ .



Related posts

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ  ಶ್ರೀಪಾದರು ಡಿ.20ರಿಂದ 22 ವರೆಗೆ ಸಾಂತಾಕ್ರೂಜ್  ಪೇಜಾವರ ಮಠದಲ್ಲಿ

Mumbai News Desk

ನವೆಂಬರ್ 23ರಿಂದ ಸತತ 17ನೇ ವರ್ಷದ ಮುಂಬಯಿ ಪ್ರವಾಸದಲ್ಲಿ ಕರಾವಳಿಯ ಪ್ರಸಿದ್ಧ ನಾಟಕ ತಂಡಕಿನ್ನಿಗೋಳಿ

Mumbai News Desk

ವಸಯಿ ತಾಲೂಕು ಮೊಗವೀರ ಸಂಘ : ನಾಳೆ (ಮಾ.16) ಮಹಿಳಾ ದಿನಾಚರಣೆ

Mumbai News Desk

ಸಾಂತಕ್ರೂಸ್   ಶ್ರೀ ಮಂತ್ರ ದೇವಿ   ದೇವಸ್ಥಾನ ವಾರ್ಷಿಕ ಮಹಾಪೂಜೆ.

Mumbai News Desk

ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ: ಅ. 11 ಮತ್ತು 12ರಂದು 48ನೇ ವಾರ್ಷಿಕ ಏಕಾಹ ಭಜನಾ ಮಂಗಲೋತ್ಸವ

Mumbai News Desk

ಜ. 31 ರಂದು ಗೋರೆಗಾಂವ್ ಕರ್ನಾಟಕ ಸಂಘ, ಮುಂಬೈ: ಗ್ರಂಥಾಯನ ವಿಭಾಗ’ದ ಆಶ್ರಯದಲ್ಲಿ ಎರಡು ಕೃತಿಗಳ ಬಿಡುಗಡೆ

Mumbai News Desk