July 23, 2026
Mumbai News Kannada
ಪ್ರಕಟಣೆ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.







ಉಡುಪಿಯ ಹೃದಯಭಾಗದಲ್ಲಿ ಭಕ್ತರಿಂದ ಪ್ರತಿಷ್ಠೆಗೊಂಡು ಆರಾದಿಸಿಕೊಂಡು ಬರುತ್ತಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಉತ್ಸವವು ಜನವರಿ 15ರ ಸೋಮವಾರ ದಿಂದ 16ರ ಮಂಗಳವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.


ಜ.15 ಕ್ಕೆ ,ಸೂರ್ಯೋದಯದಿಂದ – ಸೂರ್ಯಾಸ್ತದ ವರೆಗೆ ಭಜನಾ ಕಾರ್ಯಕ್ರಮ ಕಪೆಟ್ಟು ಸೂರ್ಯಪ್ರಕಾಶ್,ವಿಶ್ವನಾಥ್ ಸನಿಲ್, ಶ್ರೀಕಾಂತ್ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಬೆಳ್ಳಿಗ್ಗೆ 8 ಗಂಟೆಗೆ ,ಮಧ್ಯಾಹ್ನ 12 ಗಂಟೆಗೆ, ರಾತ್ರಿ 8 ಗಂಟೆಗೆ ಮಹಾಪೂಜೆ ,ಹಾಗೂ ಪ್ರತಿ ಎರಡು ಗಂಟೆಗೆ ಚಾಮ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಿತ್ಯಾನಂದ ಮಂದಿರದಿಂದ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್-ಉಡ್ ಲ್ಯಾನ್ಡ್ ಹೋಟೆಲ್ ಬದಿಯಿಂದ ತೆಂಕಪೇಟೆಯಾಗಿ ಕೊಳದ ಪೇಟೆಯಿಂದ ಹಳೇ ಡಯಾನ ಸರ್ಕಲ್ ನಿಂದ ಜೋಡುಕಟ್ಟೆಗೆ ,ಅಲ್ಲಿಂದ ಹಿಂತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ಮಂದಿರ ತಲಪುವುದು.


ತಾ 16 ರಂದು ಬೆಳ್ಳಿಗ್ಗೆ 4.30ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗೆ ಭಕ್ತರಿಂದ ಸಿಯಾಳಾಭಿಷೇಕ.
5 ಗಂಟೆಗೆ – ಮಹಾಪೂಜೆ.
ಬೆಳ್ಳಿಗ್ಗೆ 8 ಗಂಟೆಗೆ ಪ್ರಥಮ ಆರತಿ
ಗಂಟೆ 9ಕ್ಕೆ ಶ್ರೀ ಗಣೇಶಯಜ್ಞ ಪ್ರಾರಂಭ
ಮದ್ಯಾಹ್ನ 12 ಗಂಟೆಗೆ ಮಹಾಪೂಜೆ
12.30 ಗಂಟೆಗೆ – ಬಾಲ ಭೋಜನ ಮತ್ತು ಮಹಾ ಅನ್ನಸಂತರ್ಪಣೆ.
ಸಂಜೆ 4 ಗಂಟೆಗೆ ಶ್ರೀ ಗಣೇಶಯಜ್ಞ ಪೂರ್ಣಾಹುತಿ
ರಾತ್ರಿ 8 ಗಂಟೆಗೆ ಮಹಾಪೂಜೆ.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಗಣೇಶ್ ಪುರಿಯ ಪ್ರಧಾನ ಅರ್ಚಕರಾದ ರಮೇಶ್ ಸುಲಾಖೆ ಮತ್ತು ಪುರೋಹಿತ ಬಳಗದವರು ವಹಿಸಿರುವರು.

ಅದೇ ದಿನ ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಸಭೆಯಲ್ಲಿ ಧಾರ್ಮಿಕ, ರಾಜಕೀಯ ಮುಖಂಡರು, ಊರ-ಪರಊರ ಗಣ್ಯರು,ಉದ್ಯಮಿಗಳು ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ವಿವಿಧ ನಿತ್ಯಾನಂದ ಮಂದಿರಗಳ ಪ್ರಮುಖರನ್ನು ಸನ್ಮಾನಿಸಲಾಗುವುದು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿ, ಇದರ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಹಾಗೂ ಅಧ್ಯಕ್ಷರು ಮತ್ತು ಟ್ರಸ್ಟಿಗಳು-ಶ್ರೀ ನಿತ್ಯಾನಂದ ಆಶ್ರಮ ,Kanhagad(ಕಾಸರಗೋಡು) ವರ್ದಂತಿ ಉತ್ಸವಕ್ಕೆಆದರದ ಸ್ವಾಗತ ಬಯಸಿದ್ದಾರೆ .



Related posts

ಉಬಾರಮಣ್ಣು ಶ್ರೀ ಕೋಡ್ಬಬ್ಬು ದೈವಸ್ಥಾನ ಕೊಳುವೈಲು, ಪಾವಂಜೆ : ಎ. 4 ಹಾಗೂ ಎ. 5ರಂದು ವಾರ್ಷಿಕ ನೇಮೋತ್ಸವ

Mumbai News Desk

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಅ. 26 ರಂದು 24ನೇ ವಾರ್ಷಿಕ ಮಹಾಸಭೆ, ರಜತ ಸಂಭ್ರಮಕ್ಕೆ ಚಾಲನೆ

Mumbai News Desk

ಮಲಾಡ್ ಪೂರ್ವ   ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ ಜೂ 6 ರಂದು ಶನಿ ಜಯಂತಿ ಉತ್ಸವ

Mumbai News Desk

ದಹಿಸರ್: ಜುಲೈ 19ರಂದು ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 40ನೇ ವಾರ್ಷಿಕ ಮಹಾಸಭೆ

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas

ಮಾ. 8 ರಂದು ಜಗಜ್ಯೋತಿ ಕಲಾವೃಂದ ಕಚೇರಿಯಲ್ಲಿ ಮಹಾಶಿವರಾತ್ರಿ ಪೂಜೆ

Mumbai News Desk