September 6, 2026
Mumbai News Kannada
ಪ್ರಕಟಣೆ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿಜ.15 ಮತ್ತು 16ರಂದು ಪ್ರಥಮ ವರ್ಧಂತಿ ಉತ್ಸವ.





ಉಡುಪಿಯ ಹೃದಯಭಾಗದಲ್ಲಿ ಭಕ್ತರಿಂದ ಪ್ರತಿಷ್ಠೆಗೊಂಡು ಆರಾದಿಸಿಕೊಂಡು ಬರುತ್ತಿರುವ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಪ್ರಥಮ ವರ್ಧಂತಿ ಉತ್ಸವವು ಜನವರಿ 15ರ ಸೋಮವಾರ ದಿಂದ 16ರ ಮಂಗಳವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.


ಜ.15 ಕ್ಕೆ ,ಸೂರ್ಯೋದಯದಿಂದ – ಸೂರ್ಯಾಸ್ತದ ವರೆಗೆ ಭಜನಾ ಕಾರ್ಯಕ್ರಮ ಕಪೆಟ್ಟು ಸೂರ್ಯಪ್ರಕಾಶ್,ವಿಶ್ವನಾಥ್ ಸನಿಲ್, ಶ್ರೀಕಾಂತ್ ಶೆಟ್ಟಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಬೆಳ್ಳಿಗ್ಗೆ 8 ಗಂಟೆಗೆ ,ಮಧ್ಯಾಹ್ನ 12 ಗಂಟೆಗೆ, ರಾತ್ರಿ 8 ಗಂಟೆಗೆ ಮಹಾಪೂಜೆ ,ಹಾಗೂ ಪ್ರತಿ ಎರಡು ಗಂಟೆಗೆ ಚಾಮ ಪೂಜೆ ನಡೆಯಲಿದೆ.
ಸಂಜೆ 5 ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಿತ್ಯಾನಂದ ಮಂದಿರದಿಂದ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್-ಉಡ್ ಲ್ಯಾನ್ಡ್ ಹೋಟೆಲ್ ಬದಿಯಿಂದ ತೆಂಕಪೇಟೆಯಾಗಿ ಕೊಳದ ಪೇಟೆಯಿಂದ ಹಳೇ ಡಯಾನ ಸರ್ಕಲ್ ನಿಂದ ಜೋಡುಕಟ್ಟೆಗೆ ,ಅಲ್ಲಿಂದ ಹಿಂತಿರುಗಿ ಕವಿ ಮುದ್ದಣ್ಣ ಮಾರ್ಗವಾಗಿ ಮಂದಿರ ತಲಪುವುದು.


ತಾ 16 ರಂದು ಬೆಳ್ಳಿಗ್ಗೆ 4.30ಕ್ಕೆ ಭಗವಾನ್ ನಿತ್ಯಾನಂದ ಸ್ವಾಮಿಗೆ ಭಕ್ತರಿಂದ ಸಿಯಾಳಾಭಿಷೇಕ.
5 ಗಂಟೆಗೆ – ಮಹಾಪೂಜೆ.
ಬೆಳ್ಳಿಗ್ಗೆ 8 ಗಂಟೆಗೆ ಪ್ರಥಮ ಆರತಿ
ಗಂಟೆ 9ಕ್ಕೆ ಶ್ರೀ ಗಣೇಶಯಜ್ಞ ಪ್ರಾರಂಭ
ಮದ್ಯಾಹ್ನ 12 ಗಂಟೆಗೆ ಮಹಾಪೂಜೆ
12.30 ಗಂಟೆಗೆ – ಬಾಲ ಭೋಜನ ಮತ್ತು ಮಹಾ ಅನ್ನಸಂತರ್ಪಣೆ.
ಸಂಜೆ 4 ಗಂಟೆಗೆ ಶ್ರೀ ಗಣೇಶಯಜ್ಞ ಪೂರ್ಣಾಹುತಿ
ರಾತ್ರಿ 8 ಗಂಟೆಗೆ ಮಹಾಪೂಜೆ.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಗಣೇಶ್ ಪುರಿಯ ಪ್ರಧಾನ ಅರ್ಚಕರಾದ ರಮೇಶ್ ಸುಲಾಖೆ ಮತ್ತು ಪುರೋಹಿತ ಬಳಗದವರು ವಹಿಸಿರುವರು.

ಅದೇ ದಿನ ಸಂಜೆ 5 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಸಭೆಯಲ್ಲಿ ಧಾರ್ಮಿಕ, ರಾಜಕೀಯ ಮುಖಂಡರು, ಊರ-ಪರಊರ ಗಣ್ಯರು,ಉದ್ಯಮಿಗಳು ಉಪಸ್ಥಿತರಿರುವರು.ಈ ಸಂದರ್ಭದಲ್ಲಿ ವಿವಿಧ ನಿತ್ಯಾನಂದ ಮಂದಿರಗಳ ಪ್ರಮುಖರನ್ನು ಸನ್ಮಾನಿಸಲಾಗುವುದು.
ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ- ಉಡುಪಿ, ಇದರ ಟ್ರಸ್ಟಿಗಳು, ಆಡಳಿತ ಮಂಡಳಿ, ಶ್ರೀ ನಿತ್ಯಾನಂದ ಸೇವಾ ಸಮಿತಿ ಹಾಗೂ ಅಧ್ಯಕ್ಷರು ಮತ್ತು ಟ್ರಸ್ಟಿಗಳು-ಶ್ರೀ ನಿತ್ಯಾನಂದ ಆಶ್ರಮ ,Kanhagad(ಕಾಸರಗೋಡು) ವರ್ದಂತಿ ಉತ್ಸವಕ್ಕೆಆದರದ ಸ್ವಾಗತ ಬಯಸಿದ್ದಾರೆ .



Related posts

ಕರ್ನಾಟಕ ಸಂಘ, ಕಲ್ಯಾಣ: 23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk

ಡಿ. 17ರಂದು  ಪೊವಾಯಿ  ವಿದೂಶಿ ಗೀತಾ ವೇದ್ (ಸಾಲ್ಯಾನ್) ರ ನಟನಾ ನೃತ್ಯ ಅಕಾಡೆಮಿಯ 11ನೇ ವಾರ್ಷಿಕೋತ್ಸವ

Mumbai News Desk

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ

Mumbai News Desk

ನ.19 ರಂದು ಪುಣೆಯಲ್ಲಿ ಸುವರ್ಣಯುಗ ಪುಸ್ತಕ ಬಿಡುಗಡೆ, ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರುಗಳಿಗೆ ಸನ್ಮಾನ

Mumbai News Desk

ಜ.14 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿಸುವರ್ಣಯುಗ ಗ್ರಂಥ ಬಿಡುಗಡೆ ಸಮಾರಂಭ

Mumbai News Desk

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎ. 4: ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರಿಂದ ‘ಧೀಮಂತ ಧರ್ಮಪಾಲ’ ಆತ್ಮಕಥನ ಕೃತಿ ಲೋಕಾರ್ಪಣೆ

Mumbai News Desk