32 C
Mumbai
March 7, 2026
Mumbai News Kannada
ಕರಾವಳಿಪ್ರಕಟಣೆ

ಡಿ.12 ರಿಂದ 23 ರ ವರಗೆ ಸೂಡ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ





12-12-2023ನೇ ಮಂಗಳವಾರ ಮೊದಲ್ಗೊಂಡು ತಾರೀಕು 23-12-2023ನೇ ಶನಿವಾರದ ವರೆಗೆ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ವಾರ್ಷಿಕ ಮಹೋತ್ಸವ ಜರಗಲಿರುವುದು.

ತತ್ಸಂಬಂಧವಾಗಿ ತಾರೀಕು 18-12-2023ನೇ ಸೋಮವಾರ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ಹಾಗೂ ತಾರೀಕು 21-12-2023ನೇ ಗುರುವಾರ ಮಹಾರಥೋತ್ಸವ ಜರಗಲಿರುವುದು.

ಆ ಪ್ರಯುಕ್ತ ತಾವು ತಮ್ಮ ಇಷ್ಟಮಿತ್ರರೊಂದಿಗೆ ಬಂದು, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ಸುಬ್ರಹ್ಮಣ್ಯ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಶ್ರೀ ವೇ। ಮೂ |ಹಯವದನ ತಂತ್ರಿಗಳು, ಶ್ರೀ ವೇ। ಮೂ। ವಿಷ್ಣುಮೂರ್ತಿ ಭಟ್, ಶಿರ್ವ ಕೋಡು ಶ್ರೀ ಜಯಶೀಲ ಹೆಗ್ಡೆ ಅನುವಂಶೀಯ ಆಡಳಿತ ಮೊಕ್ತಸರರು ಮತ್ತು ಗ್ರಾಮಸ್ಥರು, ಅರ್ಚಕರು ಅಪೇಕ್ಷಿಸಿದ್ದಾರೆ.

ತಾ. 12-12-2023ನೇ ಮಂಗಳವಾರ: ಶ್ರೀ ದೇವರ ಗರ್ಭಗುಡಿಯ ಸುತ್ತು ಪೌಳಿಯ ನೂತನ ಕಾಷ್ಠವೃತದ ಸಮರ್ಪಣೆ, ಬೆಳಿಗ್ಗೆ 8-00: ಪುಣ್ಯಾಹ ವಾಚನ, ಗಣಯಾಗ, ಸಾನ್ನಿಧ್ಯ ಕಲಶ (ಪಂಚವಿಂಶತಿ ಕಲಶ), ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ.

ಧಾರ್ಮಿಕ ಕಾರ್ಯಕ್ರಮಗಳು :

ತಾ. 12-12-2023ನೇ ಮಂಗಳವಾರ: ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಾಶಾಭಿಷೇಕ, ಮಧ್ಯಾಹ್ನ 12-00ಕ್ಕೆ ಮಹಾಪೂಜೆ,
ಸಂತರ್ಪಣೆ, ರಾತ್ರಿ 8-00ಕ್ಕೆ ಉತ್ಸವಮೂರ್ತಿ ಹೊರಡುವುದು, 11-00ಕ್ಕೆ ರಂಗಪೂಜೆ, 12-00ಕ್ಕೆ ದೀಪೋತ್ಸವ, ಬಲಿ.

ತಾ. 13-12-2023ನೇ ಬುಧವಾರದಿಂದ 15-12-2023ನೇ ಶುಕ್ರವಾರದವರೆಗೆ: ಪ್ರತಿದಿನ ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ, 11-00ಕ್ಕೆ ಮಹಾಪೂಜೆ, ರಾತ್ರಿ 8-00ಕ್ಕೆ ನಿತ್ಯಬಲಿ.

ತಾ. 16-12-2023ನೇ ಶನಿವಾರ: ಬೆಳಿಗ್ಗೆ ಘಂಟೆ 7-00ಕ್ಕೆ ಉಷಃಕಾಲ ಪೂಜೆ, ಘಂಟೆ 9-00ಕ್ಕೆ ಪಂಚಾಮೃತಾಭಿಷೇಕ, ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ರಾತ್ರಿ 8-00ಕ್ಕೆ ನಿತ್ಯಬಲಿ, 9-00ಕ್ಕೆ ಅಂಕುರ ಬಲಿ, 9-30ಕ್ಕೆ ಅಂಕುರಾರೋಪಣ.

ತಾ. 17-12-2023ನೇ ರವಿವಾರ: ಬೆಳಿಗ್ಗೆ ಧ್ವಜಾರೋಹಣ, ಬಲಿ, ಮಧ್ಯಾಹ್ನ ಮಹಾಪೂಜೆ, ಸಂತರ್ಪಣೆ, ರಾತ್ರಿ ಘಂಟೆ 7-00ಕ್ಕೆ ವಿಶೇಷ ಬಲಿ, 9-00ಕ್ಕೆ ಮಹಾರಂಗಪೂಜೆ, ಭೂತಬಲಿ.

ತಾ. 18-12-2023ನೇ ಸೋಮವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಕಲಾಶಾಭಿಷೇಕ, ಮಹಾಪೂಜೆ, ಬಲಿ, ಷಷ್ಠಿ ಮಹೋತ್ಸವ, ರಥೋತ್ಸವ, ಮಹಾ ಅನ್ನಸಂತರ್ಪಣೆ, ರಾತ್ರಿ 8-00ಕ್ಕೆ ಬಲಿ, ರಥೋತ್ಸವ, ಭೂತ ಬಲಿ.

ತಾ. 19-12-2023ನೇ ಮಂಗಳವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, ಹೋಮ, ಮಹಾಪೂಜೆ, ರಾತ್ರಿ ಘಂಟೆ 8-00ಕ್ಕೆ ಊರಾಯಣ ಬಲಿ, ಪೂಜೆ, ಭೂತ ಬಲಿ.

ತಾ. 20-12-2023ನೇ ಬುಧವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಆಶ್ಲೇಷಾ ಬಲಿ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಘಂಟೆ 8-00ಕ್ಕೆ ಬಲಿ, ಕಟ್ಟೆಪೂಜೆ, ಭೂತ ಬಲಿ.

ತಾ. 21-12-2023ನೇ ಗುರುವಾರ: ಬೆಳಿಗ್ಗೆ ಪಂಚಾಮೃತಾಭಿಷೇಕ, ಅಷ್ಟಕುಲ ನಾಗಪೂಜಾ, ಹೋಮ ಕಲಶಾಭಿಷೇಕ, ಮಹಾಪೂಜೆ, ರಥಶುದ್ದಿ ಬಲಿ, ರಥಾರೋಹಣ, ಸಂತರ್ಪಣೆ. ರಾತ್ರಿ 8-30ಕ್ಕೆ ಮಹಾರಥೋತ್ಸವ, ಬಲಿ, ಪೂಜೆ, ಭೂತ ತಂಬಿಲ, ಭೂತಬಲಿ, ಕವಾಟ ಬಂಧನ.

ತಾ. 22-12-2023ನೇ ಶುಕ್ರವಾರ: ಬೆಳಿಗ್ಗೆ ಕವಾಟೋದ್ಘಾಟನೆ, ಅಭಿಷೇಕ ಪೂಜೆ, ನಿತ್ಯಬಲಿ, ಕಲಾಶಾಭಿಷೇಕ, ಮಹಾಪೂಜೆ, ತುಲಾಭಾರ, ನಾಗದರ್ಶನ, ರಾತ್ರಿ ಘಂಟೆ 8-00ಕ್ಕೆ ಸವಾರಿ ಬಲಿ, ಓಕುಳಿ, ಕೆರೆ ದೀಪೋತ್ಸವ, ಕಟ್ಟೆಪೂಜೆ, ಅವಕೃತ ಸ್ನಾನ, ಪೂರ್ಣಾಹುತಿ, ಮಹಾಮಂತ್ರಾಕ್ಷತೆ, ಧ್ವಜ ಅವರೋಹಣ, ರಾತ್ರಿ ಪೂಜೆ.

ತಾ. 23-12-2023ನೇ ಶನಿವಾರ: ಬೆಳಿಗ್ಗೆ ಗಣಯಾಗ, ಮಹಾ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ
ವಿತರಣೆ.

ಸಾಂಸ್ಕೃತಿಕ ಕಾರ್ಯಕ್ರಮಗಳು :

ತಾ. 12-12-2023 ಮಂಗಳವಾರ : ಪೂರ್ವಾಹ್ನ 10-00ರಿಂದ ‘ಯಕ್ಷಗಾನ ತಾಳಮದ್ದಲೆ- ವಿದುರ ಭಕ್ತಿ – ಶ್ರೀ ಸುಬ್ರಹ್ಮಣ್ಯ ಬೈಪಾಡಿತ್ತಾಯ, ನಂದಳಿಕೆ ಮತ್ತು ಬಳಗ.
ಸಂಜೆ 6-00ರಿಂದ: ‘ಭಜನೆ’ – ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಸೂಡ

ತಾ. 13-12-2023 ಬುಧವಾರ : ಸಂಜೆ 6-00ರಿಂದ: ‘ಭಜನೆ’ – ಶ್ರೀ ದುರ್ಗಾದೇವಿ ಭಜನಾ ಮಂಡಳಿ, ಪಾಲುಮನೆ, ಸೂಡ

ತಾ. 14-12-2023 ಗುರುವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ಶಾಸ್ತಾವು ಭಜನಾ ಮಂಡಳಿ, ಶಾಸ್ತಾವು, ಪುನಾರು

ತಾ. 15-12-2023 ಶುಕ್ರವಾರ: ಸಂಜೆ 6-30ರಿಂದ: ‘ರಾಮನಾಮ ಸಂಕೀರ್ತನೆ ಮತ್ತು ಭಜನೆ’ – ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ, ಸೂಡ

ತಾ. 16-12-2023 ಶನಿವಾರ: ಸಂಜೆ 6-30ರಿಂದ ಭಜನೆ – ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ, ಕೋಡು ಪಂಜಿಮಾರು.

ತಾ. 17-12-2023 ರವಿವಾರ: ಸಂಜೆ 7-00ರಿಂದ: ‘ಭರತನಾಟ್ಯ ನೃತ್ಯನೂಪುರ’ -ನೃತ್ಯಗುರುಗಳಾದ ವಿದುಷಿ ಶ್ರೀಮತಿ ಕವಿತಾ ಉಪಾಧ್ಯಾಯ ಇವರ ನಿರ್ದೇಶನದಲ್ಲಿ ನೃತ್ಯ ದೀಕ್ಷಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನೃತ್ಯಕಾರ್ಯಕ್ರಮ.

ತಾ. 18-12-2023 ಸೋಮವಾರ: ರಾತ್ರಿ 10-30ರಿಂದ: ‘ಯಕ್ಷಗಾನ ಬಯಲಾಟ – ಕೋಟಿ ಚೆನ್ನಯ’ –ಶ್ರೀ ಮಯೂರ ವಾಹನ ಯಕ್ಷಗಾನ ನಾಟಕ ಸಭಾ, ಸೂಡ.

ತಾ. 19-12-2023 ಮಂಗಳವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ವಿಶ್ವಕರ್ಮ ಭಜನಾ ಮಂಡಳಿ, ಹಳೆಯಂಗಡಿ.

ತಾ. 20-12-2023 ಬುಧವಾರ: ಸಂಜೆ 6-00ರಿಂದ: ‘ಭಜನೆ’ – ಶ್ರೀ ಮಹಾಕಾಳಿ ಭಜನಾ ಮಂಡಳಿ, ಮಂಗಲ್ದಿ ಮಠ, ಪಳ್ಳಿ.

ತಾ. 21-12-2023 ಗುರುವಾರ: ಬೆಳಿಗ್ಗೆ 10-00ರಿಂದ ‘ಭಜನೆ’ -ಶ್ರೀ ಮಹಾಲಸಾ ನಾರಾಯಣೀ ಭಜನಾ ಮಂಡಳಿ, ಶಿರ್ವ ರಾತ್ರಿ 10-30ರಿಂದ ‘ತುಳುನಾಟಕ – ತೊಟ್ಟಿಲ್ – ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ

ತಾ. 22-12-2023 ಶುಕ್ರವಾರ: ಬೆಳಿಗ್ಗೆ 10-00ರಿಂದ ‘ಭಜನೆ’ – ಶ್ರೀ ಲಕ್ಷ್ಮೀಜನಾರ್ಧನ ಭಜನಾ ಮಂಡಳಿ, ಕಾಪು ಸಂಜೆ 5ರಿಂದ 7-30: ‘ಯಕ್ಷಗಾನ ತಾಳಮದ್ದಲೆ’ -ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ, ಸುರತ್ಕಲ್.

ವಿಶೇಷ ಸೂಚನೆ :

ತಾ. 18-12-2023ನೇ ಸೋಮವಾರ ಷಷ್ಠಿ ಮಹೋತ್ಸವದಂದು
ಮಧ್ಯಾಹ್ನ ಘಂಟೆ 1-00ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ

ತಾ. 22-12-2023ನೇ ಶುಕ್ರವಾರ ರಾತ್ರಿ ಜುಮಾದಿ ದೈವದ ನೇಮೋತ್ಸವ

ತಾ. 16-01-2024ನೇ ಮಂಗಳವಾರ ಕಿರುಷಷ್ಠಿ ಉತ್ಸವ
ಮಧ್ಯಾಹ್ನ ಅನ್ನಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳು ನಡೆಯಲಿರುವುದು
.

ಹರಕೆ, ಕಾಣಿಕೆ, ಧನಸಹಾಯ ಕಳುಹಿಸುವವರು “ಶಿರ್ವ ಕೋಡು ಜಯಶೀಲ ಹೆಗ್ಡೆ, ಆಡಳಿತ ಮೊತ್ತೇಸರರು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸೂಡ – 574116” ಅಥವಾ ಬ್ಯಾಂಕ್ ಆಫ್ ಬರೋಡಾ, ಸೂಡ ಶಾಖೆಯ ಈ ಕೆಳಗಿನ ಖಾತೆಗೆ ಕಳುಹಿಸಿ ಕೊಟ್ಟಲ್ಲಿ ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು. ಪ್ರಸಾದವನ್ನು ಅಂಚೆ ಮೂಲಕ ಕಳುಹಿಸಿಕೊಡಲಾಗುವುದು.
S.B. A/c No.: 81750100001166 IFSC Code: BARBOVJSOOD Bank of Baroda, Sooda Branch



Related posts

ಸೆ.7 ರಂದು ಜಯ ಸಿ ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಐಕಳ ಹರೀಶ್ ಶೆಟ್ಟಿ ಅವರಿಗೆ ‘ಶಿವಗಿರಿ ಸಮ್ಮಾನ್ ಪ್ರಶಸ್ತಿ’ ಪ್ರಧಾನ ಸಮಾರಂಭ

Mumbai News Desk

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 

Mumbai News Desk

ಶ್ರೀ ಸದ್ಗುರು ಶನೀಶ್ವರ ಸೇವಾ ಸಮಿತಿ ಕಾಂದಿವಲಿ ಪೂರ್ವ : ನ. 15ರಂದು, 51ನೇ ವಾರ್ಷಿಕ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಮಹೋತ್ಸವ ಮತ್ತು ಭಂಡಾರ

Mumbai News Desk

ಡೊಂಬಿವಲಿ: “ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಆಶ್ರಯದಲ್ಲಿ ಜ. 3ರಂದು ಶ್ರೀ ಶನೀಶ್ವರ ಮಹಾಪೂಜೆ ಹಾಗೂ ಸತ್ಯನಾರಾಯಣ ಪೂಜೆ

Mumbai News Desk

ಅಕ್ಟೋಬರ್ 26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ, ಸಾಹಿತ್ಯ ಚರ್ಚೆ

Mumbai News Desk

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ

Mumbai News Desk