July 22, 2026
Mumbai News Kannada
ಪ್ರಕಟಣೆ

ಶ್ರೀ ರಜಕ ಸಂಘ ಮುಂಬಯಿ (ರಿ), ಜು. 21 ರಂದು 85ನೇ ವಾರ್ಷಿಕ ಮಹಾಸಭೆ







ಪ್ರಿಯ ರಜಕ ಬಾಂಧವರೇ,
ನಮ್ಮ ಸಂಘದ 85ನೇ ವಾರ್ಷಿಕ ಮಹಾಸಭೆಯು ತಾ. 21.07.2024 ನೇ ರವಿವಾರ ಬೆಳಿಗ್ಗೆ ಘಂಟೆ 9.30 ಕ್ಕೆ ಸರಿಯಾಗಿ ಸ್ವಾಮಿ ನಿತ್ಯಾನಂದ ಹಾಲ್, ಮುಖ್ಯ ಅಧ್ಯಾಪಕ ಭವನ, ಪ್ಲೋಟ್ ನಂ. 6ಬಿ, ಸಾಯನ್ ಸರ್ಕಲ್ ಎದುರುಗಡೆ, ಸಾಯನ್ (ಪ.), ಇಲ್ಲಿ ಜರಗಲಿರುವುದು, ತಾವೆಲ್ಲಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕಾಗಿ ವಿನಂತಿ.
ಕಾರ್ಯಸೂಚಿ
1) ಸ್ವಾಗತ ಭಾಷಣ
2) ಪ್ರಾರ್ಥನೆ
3) 84ನೇ ವಾರ್ಷಿಕ ಮಹಾಸಭೆಯ ವರದಿಯನ್ನು ಓದಿ ಮಂಜೂರು ಮಾಡುವುದು.
4) 2023-2024ರ ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರಗಳನ್ನು ಓದಿ ಮಂಜೂರು ಮಾಡುವುದು
5) ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
6) 2024-2026ರ ವರ್ಷಕ್ಕೆ ಕಾರ್ಯಕಾರಿಣಿ ಸಮಿತಿಯ ಸದಸ್ಯರ ಮತ್ತು ಪದಾಧಿಕಾರಿಗಳ ಆಯ್ಕೆ ಮಾಡುವುದು
7) 2024-2026ರ ವರ್ಷಕ್ಕೆ ವಲಯಗಳ, ಮಹಿಳಾ ಹಾಗೂ ಯುವ ವಿಭಾಗದ ಅಧ್ಯಕ್ಷರ ಆಯ್ಕೆ ಮಾಡುವುದು
8 ) 2024-2025ರ ವರ್ಷಕ್ಕೆ ಶಾಸನಬದ್ಧ ಮತ್ತು ಆಂತರಿಕ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡುವುದು
9 ) ಸದಸ್ಯರ ಭಾಷಣ
10) ಸಾಧಕರ, ಸ್ವರ್ಣ ದಂಪತಿಯರ ಮತ್ತು ನವ ದಂಪತಿಯರ ಸನ್ಮಾನ
11) ಅಧ್ಯಕ್ಷರ ಅನುಮತಿಯ ಮೇರೆಗೆ ಇನ್ನಿತರ ವಿಷಯ
12) ಅಧ್ಯಕ್ಷರ ಭಾಷಣ
13 )ಧನ್ಯವಾದ
14) ರಾಷ್ಟ್ರಗೀತೆ

1) ಸಮಯಕ್ಕೆ ಸರಿಯಾಗಿ (ಕೋರಮ್) ಕಾನೂನಿಗೆ ಬೇಕಾದಷ್ಟು ಸದಸ್ಯರು ಹಾಜರಿರದಿದ್ದಲ್ಲಿ ಅರ್ಧ ಘಂಟೆಯ ಕಾಲ ಕಾದು ಮುಂದುವರಿದ ಸಭೆಯೆಂದು ಪರಿಗಣಿಸಿ, ಸಭೆಯನ್ನು ನೆರವೇರಿಸಲಾಗುವುದು.
2) ಈ ವರದಿಯಲ್ಲಿ ಏನಾದರೂ ತಿದ್ದುಪಡಿ ಕಂಡು ಬಂದರೆ ಅಥವಾ ಮಹಾಸಭೆಯಲ್ಲಿ ಠರಾವು ಮಂಜೂರು ಮಾಡ ಬಯಸುವುದಾದರೆ ಅಂತಹ ಸೂಚನೆಗಳನ್ನು ಬರಹ ಮೂಲಕ ತಾ.15.07.2024 ರೊಳಗೆ ಸಂಘದ ಕಾರ್ಯಾಲಯಕ್ಕೆ ತಲುಪಿಸತಕ್ಕದ್ದು. ತದನಂತರ ದೊರಕಿದ ಯಾವುದೇ ಪತ್ರಗಳನ್ನು ಪರಿಗಣಿಸಲಾಗದು.
3) ಮಹಾಸಭೆಗೆ ಬರುವಾಗ ಈ ವರದಿ ಪುಸ್ತಕವನ್ನು ತರಬೇಕಾಗಿ ವಿನಂತಿ.
ಇತೀ ಆಡಳಿತ ಮಂಡಳಿಯ ಪರವಾಗಿ,

ಸಿ ಎ ವಿಜಯ ಕುಂದರ್ ((ಅಧ್ಯಕ್ಷರು ) ಸುಮಿತ್ರಾ ಆರ್ ಫಲಿಮಾರ್
( ಗೌರವ ಕಾರ್ಯದರ್ಶಿ)



Related posts

ಮೀರಾರೋಡ್, ಜ: 11: ಬಂಟ್ಸ್ ಫೋರಂ ಮೀರಾ-ಬಾಯಂಧರ್ ಇದರ ಮಹಿಳಾ ಸಮಿತಿಯ ವಾರ್ಷಿಕ ಭಜನಾಮಂಗಳೋತ್ಸವ ಕಾರ್ಯಕ್ರಮ

Mumbai News Desk

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ

Mumbai News Desk

ಗೋರೆಗಾಂವ್ ಕರ್ನಾಟಕ ಸಂಘ : ಮಾ. 9ರಂದು 66ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿ

Mumbai News Desk

ಏ. 13 ರಂದು ಮಂಗಳೂರಲ್ಲಿ ನಡೆಯಲಿರುವ ಕುಲಾಲ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Mumbai News Desk

ಮಾರ್ಚ್ 2 ಕ್ಕೆ ಭಯಂದರ್ ನಲ್ಲಿ ನಡೆಯುವ ಅಖಿಲ ಭಾರತ ಸಂತ ಸಮಿತಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಾಯಿ ಈಶ್ವರ್ ಗುರೂಜಿ ಭಾಗಿ.

Mumbai News Desk

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ

Mumbai News Desk