April 2, 2025
ಪ್ರಕಟಣೆ

ಡಿ.24 ರಂದು ಭಂಡಾರಿ ಸೇವಾ ಸಮಿತಿ ಮುಂಬಯಿ  –  ಭಂಡಾರಿ  ಫ್ಯಾಮಿಲಿ ಫೆಸ್ಟಿವಲ್ 2023,

ಮುಂಬಯಿ :  ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ವತಿಯಿಂದ ಸಮಾಜ ಬಾಂಧವರಿಗೆ ಡಿ. 24ರಂದು ಬೆಳಿಗ್ಗೆ 10  ರಿಂದ ಘಾಟ್ ಕೋಪರ್ ಪೂರ್ವ ರೈಲು ನಿಲ್ಧಾಣದ ಸಮೀಪ,  ಜವೆರಿ ಬೆಹನ್ ಪೋಪಟ್ ಲಾಲ್ ಸಭಾಗೃಹ,  ಉಪಾಶ್ರಯ ಲೇನ್ ಇಲ್ಲಿ ನಡೆಯಲಿರುವುದು.  

 ಅಂದು ಬೆಳಿಗ್ಗೆ 10 ಗಂಟೆಗೆ ಭಜನೆ,  11 ಗಂಟೆಗೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ೧೧ ರಿಂದ ೧೨ ರ ತನಕ ಶ್ರೀ ರಾಮಾಯಣ ದರ್ಶನಂ ನೃತ್ಯ  ರೂಪಕ, ನಂತರ ಸಭಾ ಕಾರ್ಯಕ್ರಮ  ಅಧ್ಯಕ್ಷತೆಯನ್ನು ಭಂಡಾರಿ ಸೇವಾ ಸಮಿತಿ ಮುಂಬಯಿಯ  ಅಧ್ಯಕ್ಷರಾದ ಪ್ರಭಾಕರ ಪಿ ಭಂಡಾರಿ ವಹಿಸಲಿರುವರು.

 ಮುಖ್ಯ ಅತಿಥಿಯಾಗಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ, ಗೌರವ ಅತಿಥಿಗಳಾಗಿ ಕಚೂರು ಶ್ರೀ ನಾಗೇಶ್ವರ ಟೆಂಪಲ್ ಇದರ ವ್ಯವಸ್ಥಾಪಕ ಟ್ರಸ್ಟಿ ಸುರೇಶ್ ಎಸ್  ಭಂಡಾರಿ ಕಡಂದಲೆ,  ಮಲಾಡ್ ಕನ್ನಡ ಸಂಘದ ಅಧ್ಯಕ್ಷರಾದ ನ್ಯಾ. ಜಗದೀಶ್ ಹೆಗ್ಡೆ .ಭಂಡಾರಿ ಮಹಾಮಂಡಲದ ಮಾಜಿ ಅಧ್ಯಕ್ಷ ಸದಾಶಿವ ಭಂಡಾರಿ ಸಕಲೇಶಪುರ, ಭಂಡಾರಿ  ಸೇವಾ ಸಮಿತಿ ಮುಂಬಯಿಯ ಮಾಜಿ ಅಧ್ಯಕ್ಷ ನ್ಯಾ. ಶೇಖರ್ ಭಂಡಾರಿ ಆಗಮಿಸಲಿದ್ದಾರೆ.  

.  ಮಧ್ಯಾಹ್ನದ ನಂತರ ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್ ಟ್ರಷ್ಟ್ ಇದರ ಬಾಲ ಕಲಾವಿದರಿಂದ ಸದಾನಂದ ಶೆಟ್ಟಿಯವರ ನಿರ್ದೇಶನದಲ್ಲಿ ಸುದರ್ಶನ ವಿಜಯ ತುಳು ಯಕ್ಷಗಾನ ಪ್ರದರ್ಶನವು ನಡೆಯಲಿದೆ.  ಕಲಾ ಸೌರಭ ಇವರಿಂದ ವಿವಿಧ ವಿನೋದಾವಳಿ ನಂತರ ಶೀನ ಬಂಡಾರಿ ಮತ್ತು ಸದಸ್ಯರಿಂದ ತುಳು ತುಳು ನಾಟಕ ಬಿಕ್ರ ಮೆಳಂತಾ ಪ್ರದರ್ಶನವಿದೆ.

. ಈ ಸಮಾರಂಭಕ್ಕೆ ಸಮಾಜ ಬಾಂಧವರು ಹಾಗೂ ಅಭಿಮಾನಿಗಳು ಅಧಿಕ ಸಂಖ್ಯಯಲ್ಲಿ ಆಗಮಿಸಿ ಸಹಕರಿಸಬೇಕಾಗಿ ಭಂಡಾರಿ ಸೇವಾ ಸಮಿತಿಯ ಪರವಾಗಿ ಅಧ್ಯಕ್ಷರಾದ ಪ್ರಭಾಕರ್ ಪಿ ಭಂಡಾರಿ. ಗೌರವ ಪ್ರಧಾನ ಕಾರ್ಯದರ್ಶಿ ರಮೇಶ್ ವಿ. ಭಂಡಾರಿ,  ಗೌರವ ಕೋಶಾಧಿಕಾರಿ ಕೆ. ಶೀನ ಭಂಡಾರಿ, 

 ಉಪಾಧ್ಯಕ್ಷರುಗಳಾದ ಶಶಿಧರ್ ಎಸ್ ಭಂಡಾರಿ ಮತ್ತು ರಮಾನಂದ ವಿ ಭಂಡಾರಿ,  ಜೊತೆ ಕಾರ್ಯದರ್ಶಿ ರಂಜಿತ್ ಭಂಡಾರಿ,  ಜೊತೆ ಕೋಶಾಧಿಕಾರಿ ರಾಕೇಶ್ ಭಂಡಾರಿ,  ಸಲಹಾ ಸಮಿತಿಯ ಕಾರ್ಯದರ್ಶಿ ನ್ಯಾ.  ಆರ್ ಎಂ ಭಂಡಾರಿ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಆರ್ ಭಂಡಾರಿ, ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಜಯಸುಧ ಟಿ ಬಂಡಾರಿ,  ಕಾರ್ಯದರ್ಶಿ ಲತಾ ವೈ ಭಂಡಾರಿ ಹಾಗೂ ಸದಸ್ಯರು ವಿನಂತಿಸಿದ್ದಾರೆ.

Related posts

ಫೆ. 04 ರಂದು ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣಾ ಶಿಬಿರ.

Mumbai News Desk

ಗೋರೆಗಾಂವ್ ಸಹಕಾರ್ ವಾಡಿ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮ . ಜ. 25 ರಂದು 59ನೇ ವಾರ್ಷಿಕ ಮಹೋತ್ಸವ, ಗುರು ಮೂರ್ತಿ ಅಭಿಷೇಕ 

Mumbai News Desk

ಜುಲೈ 12-ರಂದು ಅಂಧೇರಿ ಮೊಗವೀರ ಭವನದಲ್ಲಿ “ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ತಥಾಸ್ತು ಫೌಂಡೇಶನ್ ಮಲಾಡ್, ಮೇ 24ರಿಂದ 25ರ ತನಕ ಧಾರ್ಮಿಕ ಉತ್ಸವ, ಕೊರಗಜ್ಜ ನೆಮೋತ್ಸವ.

Mumbai News Desk

ಬೊಂಬೇ ಬಂಟ್ಸ್ ಅಸೋಷಿಯೇಶನ್ ಮಹಿಳಾ ವಿಭಾಗ, ಜೂ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk
ನಮ್ಮ ವಾಟ್ಸಪ್‌ ಗ್ರೂಪ್‌ಗೆ ಸೇರಿ