July 23, 2026
Mumbai News Kannada
ಪ್ರಕಟಣೆ

ಡಿ 24 ರಂದು ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ.







 

ಮುಂಬಯಿ :ವರ್ಲಿ ಪರಿಸರದಲ್ಲಿ ಸಾಮಾಜಿಕ ಧಾರ್ಮಿಕ ಸೇವೆಗಳನ್ನು ಮಾಡುತ್ತಾ ಬಂದಿರುವ ಪಡುಬಿದ್ರೆ, ಬೆಂಗ್ರೆ ರಮೇಶ ಗುರುಸ್ವಾಮಿ ಯವರು 29ವರ್ಷಗಳ ಹಿಂದೆ ಅಪ್ಪಾಜಿ ಬೀಡು, ಮಧುಸೂಧನ ಮಿಲ್ ಕಾಂಪೋಂಡ್ ಪಿ. ಬಿ. ಮಾರ್ಗ, ವರ್ಲಿ, ಮುಂಬಯಿ ಇಲ್ಲಿ ಸ್ಥಾಪಿಸಿದ ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನ 29ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ ಹಾಗೂ ಅನ್ನಸಂತರ್ಪಣಾ ಕಾರ್ಯಕ್ರಮವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನ, ಮಧುಸೂಧನ ಮಿಲ್ ಕಾಂಪೋಂಡ್, (ಸೆಂಚುರಿ ಮಿಲ್ ಸಮೀಪ)  ಪಿ. ಬಿ. ಮಾರ್ಗ, ವರ್ಲಿ, ಮುಂಬಯಿ – 400013 ಇಲ್ಲಿ ರವಿವಾರ, ಡಿ. 24 ರಂದು ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 11 ರ ತನಕ ನಡೆಯಲಿದೆ.

ಬೆಳಿಗ್ಗೆ 5 ರಿಂದ ಶರಣು ಘೋಷ, 6 ರಿಂದ ಗಣಹೋಮ, ಬೆಳಿಗ್ಗೆ 9.30  ರಿಂದ ಅಪ್ಪಾಜಿ ಬೀಡು  ಮಹಿಳಾ ಸದಸ್ಯರಿಂದ ಭಜನೆ, 12 ರಿಂದ 1 ರ ತನಕ ಮಹಾಪೂಜೆ ಮತ್ತು ಮಹಾ ಮಂಗಳಾರತಿ, ಮಧ್ಯಾಹ್ನ 1 ರಿಂದ 3 ರ ತನಕ ಭಕ್ತಿ ಗಾನ ಸುಧೆ, ಶಿಬರೂರು ಸುರೇಶ್ ಎಲ್ ಶೆಟ್ಟಿ ಮಣಿಕಂಠ ಭಕ್ತವೃಂದ, ಪನ್ವೆಲ್ ಇವರಿಂದ, ಮಧ್ಯಾಹ್ನ ೧ ರಿಂದ ೪ ರ ತನಕ ತೀರ್ಥ ಪ್ರಸಾದ ಮತ್ತು ಅನ್ನ ಸಂತರ್ಪಣೆ. ಸಂಜೆ ಗಂಟೆ 6 ರಿಂದ ಶ್ರೀ  ಅಯ್ಯಪ್ಪ ಸ್ವಾಮಿ ದೀಪೋತ್ಸವ (1118 ತುಪ್ಪದ ದೀಪಗಳಿಂದ ಭವ್ಯ ಮಂಟಪವನ್ನು ಅಲಂಕರಿಸಿ), ಮತ್ತು 8.15ರ ತನಕ ಭಕ್ತಿ ರಸಮಂಜರಿ, ಬ್ರಾಮರಿ ಕಲಾ ತಂಡ ಕುಡ್ಲ ಇವರಿಂದ, ರಾತ್ರಿ 8 ರಿಂದ 10 ರ ತನಕ ಶ್ರೀ ಅಪ್ಪಾಜಿ ಬೀಡು ಪೌಂಡೇಶನ್ ನ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ಸಂಸ್ಥಾಪಕರಾದ ರಮೇಶ್ ಗುರುಸ್ವಾಮಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತವೃಂದ ರೇರೋಡ್  ನ ಸತೀಶ್ ಗುರುಸ್ವಾಮಿ ಇವರಿಂದ ಆಶೀರ್ವಚನ, ಮುಖ್ಯ ಅತಿಥಿಯಾಗಿ ಇಸ್ಸಾರ್ ಪೈನಾನ್ಸಿಯಲ್ ನ ಸಿ. ಎಂ.ಡಿ. ಡಾ. ಆರ್. ಕೆ. ಶೆಟ್ಟಿ, ಗೌರವ ಅತಿಥಿಗಳಾಗಿ  ಸೂರ್ಯಕಾಂತ್ ಜೆ. ಸುವರ್ಣ (ಕಾರ್ಯಾಧ್ಯಕ್ಷ,  ಭಾರತ್ ಕೋ-ಆಪರೇಟಿವ್ ಬ್ಯಾಂಕ್, ಮುಂಬಯಿ ಲಿ.), ಅನಿತಾ ಅಶೋಕ್ ಶೆಟ್ಟಿ, ಶಾರದಾ ರೆಸಿಡೆನ್ಸಿ ದಾದರ್, ಆಗಮಿಸಲಿರುವರು. ಶ್ರೀ ಅಯ್ಯಪ್ಪ ಭಕ್ತವೃಂದ ಭಾಯಂದರ್ ನ ಹರೀಶ್ ಗುರುಸ್ವಾಮಿ ಮತ್ತು ವರ್ಲಿ ಅಪ್ಪಾಜಿ ಬೀಡು ಅಶೋಕ್ ಗುಜ್ಜೆಟ್ಟಿ ಇವರಿಗೆ ಗುರು ವಂದನೆ ನಡೆಯಲಿದೆ.  ರಾತ್ರಿ 10.30 ರಿಂದ ಮಂಗಳಾರತಿ ಹರಿವರಾಸನಂ ನಡೆಯಲಿದೆ.

ಭಕ್ತಾಭಿಮಾನಿಗಳು ಈ ಸಮಾರಂಭಕ್ಕೆ ಆಗಮಿಸಿ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್ ನ ಟ್ರಷ್ಟಿಗಳಾದ ಶ ಶಾಂಭವಿ ಆರ್. ಶೆಟ್ಟಿ, ಸುರೇಶ್ ಎಸ್. ಶೆಟ್ಟಿ ಕೇದಗೆ,ರತ್ನಾಕರ ಜಿ. ಶೆಟ್ಟಿ, ರಘುನಾಥ ಎನ್. ಶೆಟ್ಟಿ, ಬಿ. ದಿನೇಶ್  ಕುಲಾಲ್, ಪುಷ್ಪರಾಜ್ ಎಸ್. ಶೆಟ್ಟಿ, ರತ್ನಾಕರ್ ಆರ್. ಶೆಟ್ಟಿ, ಮೊಹನ್ ಟಿ. ಚೌಟ, ವಸಂತ್ ಪೂಜಾರಿ, ಕಾರ್ಯಾಕಾರಿ ಸಮಿತಿಯ ಪರವಾಗಿ ಅಧ್ಯಕ್ಷರಾದ ಪದ್ಮನಾಭ ಎಸ್ ಶೆಟ್ಟಿ, ಸಂಚಾಲಕ ಹಾಗೂ ಟ್ರಸ್ಟಿ ಸಂತೋಷ್ ವಿ ಶೆಟ್ಟಿ,   ಗೌ. ಕೋಶಾಧಿಕಾರಿ, ಪ್ರಸಾದ್ ಶೆಟ್ಟಿ  ಅರುವ, ಸಂಚಾಲಕ ಹಾಗೂ ಟ್ರಸ್ಟಿ ಸಂತೋಷ್ ವಿ ಶೆಟ್ಟಿ, ಉಪಾಧ್ಯಕ್ಷ ಉದಯ್ ಶೆಟ್ಟಿ, ಜೊತೆ ಕಾರ್ಯದರ್ಶಿ ವಿಜಯ್ ಬಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಸತ್ಯನಾರಾಯಣ ಕುಚನ್, ಸಲಹೆಗಾರರಾದ ಅರುಣ್ ಆಳ್ವ ಕಾಂತಡಿಗುತ್ತು, ಭೋಜ ಎಸ್ ಶೆಟ್ಟಿ ಕೇದಗೆ, ಅರುಣ್ ಶೆಟ್ಟಿ, ಪಡಿ ಪೂಜಾ ಸಮಿತಿಯ ಕಾರ್ಯದಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕುರ್ಕಾಲ್, ಶೇಖರ ಶೆಟ್ಟಿ ವರ್ಲಿ, ಭರತ್  ಶೆಟ್ಟಿ ಅತ್ತೂರು,  ಸಮಿತಿಯ ಸದಸ್ಯರಾದ  ಬಾಲಚಂದ್ರ ಡಿ. ಶೆಟ್ಟಿ, ಅರವಿಂದ್ ಶೆಟ್ಟಿ, ರಾಜೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಗಣೇಶ್ ಸಾಲ್ಯಾನ್, ಪ್ರಕಾಶ್ ಶೆಟ್ಟಿ, ಪ್ರಕಾಶ್ ಜಾದವ್, ಸತೀಶ್ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಸಾದ್ ಶೆಟ್ಟಿ, ಲೋಕೇಶ್  ತೋಳಾರ್, ಸಂತೋಶ್ ನಾಯಕ್, ಶ್ರೀಕಾಂತ್ ಶೆಟ್ಟಿ, ಚಂದ್ರಕಾಂತ್ ಭಂಡಾರಿ, ದಿಲೀಪ್ ಮೊಗವೀರ, ಅಜಯ್ ಶೆಟ್ಟಿ, ಸಂತೋಷ್ ಸಾಲ್ಯಾನ್, ಹರೀಶ್ ಶೆಟ್ಟಿ, ಸತೀಷ್ ಪೂಜಾರಿ, ಪಾರ್ಥಸಾರತಿ ಆರ್ ಶೆಟ್ಟಿ,  ಜಯಕರ್ ಶೆಟ್ಟಿ, ಸಚಿನ್ ಶೆಟ್ಟಿ, ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ಪರವಾಗಿ ಕಾರ್ಯಾಧ್ಯಕ್ಷೆ  ಕವಿತಾ ಜಿ. ಶೆಟ್ಟಿ, ಕಾರ್ಯದರ್ಶಿ  ರೋಹಿಣಿ ಎಸ್ ಪೂಜಾರಿ, ಕೋಶಾಧಿಕಾರಿ ಶೋಭಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಶೆ ದಿವ್ಯ ಪಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜಾತ ಎನ್. ಪುತ್ರನ್, ಜೊತೆ ಕೋಶಾಧಿಕಾರಿ  ನಿರ್ಮಲ ಕೆ. ಶೆಟ್ಟಿ, ಸದಸ್ಯರುಗಳಾದ ಶಾರದಾ ಜೆ. ಶೆಟ್ಟಿ, ವಿಜಯಶ್ರೀ ಎಸ್ ಶೆಟ್ಟಿ, ರಮ್ಯ ಎಸ್. ಶೆಟ್ಟಿ, ರಾಣಿ ಆರ್. ಶೆಟ್ಟಿ, ರಾಗಿಣಿ ಆರ್. ಶೆಟ್ಟಿ, ಸುಮಿತ್ರ ಪಿ. ಶೆಟ್ಟಿ, ನಿಮಾ ಆರ್ ಶೆಟ್ಟಿ, ಸಂಗೀತ ಪಿ. ಶೆಟ್ಟಿ, ಶರ್ಮಿಳಾ ಶೆಟ್ಟಿ, ಸರೋಜಿನಿ ಕೆ. ಕರ್ಕೇರ, ವೀಣಾ ಎಂ ಹೆಗ್ಡೆ, ಶೈಲ ಎಲ್ ಶೆಟ್ಟಿ, ಯಶಸ್ವಿ ಆರ್ ಶೆಟ್ಟಿ, ಸುಪ್ರಿತ ಎ. ಶೆಟ್ಟಿ, ಸಲಹೆಗಾರಗಾದ ಉಶಾ ಬಿ. ಶೆಟ್ಟಿ, ಯಶೋಧಾ ಎಸ್. ಶೆಟ್ಟಿ, ವಿನೋದಾ ಜೆ. ಶೆಟ್, ಪ್ರಮೀಳಾ ಜೆ. ಶೆಟ್ಟಿ ಹಾಗೂ ಅಪ್ಪಾಜಿ ಬೀಡು ಪೌಂಡೇಶನಿನ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ.



Related posts

ಆಗಸ್ಟ್ 10 ರಂದು ಡೊಂಬಿವಲಿಯಲ್ಲಿ ‘ಚತುರ್ಜನ್ಮ ಮೋಕ್ಷ’ ಯಕ್ಷಗಾನ. ಅದ್ದೂರಿ ಸನ್ಮಾನ ಕಾರ್ಯಕ್ರಮ.

Mumbai News Desk

SHREE JAI BHAVANI SHANEESHWARA MANDIR – Appeal

Mumbai News Desk

ಮಾ. 1: ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾವೇಶ

Mumbai News Desk

ಮರಳುಗಾಡಿನಿಂದ ಮಹಾನಗರಕ್ಕೆ ಗಮ್ಮತ್ ಕಲಾವಿದೆರ್, ಅ. 27ರಂದು ಕನ್ನಡ ಸಂಘ ಸಯನ್ ನ ವಾರ್ಷಿಕೋತ್ಸವದ ಅಂಗವಾಗಿ ದುಬಾಯಿಯ ಕಲಾವಿದರಿಂದ “ವಾ ಗಳಿಗೆಡ್ ಪುಟುದನಾ” ತುಳು ಹಾಸ್ಯಮಯ ನಾಟಕ ಪ್ರದರ್ಶನ

Mumbai News Desk

ಶ್ರೀ ಮಣಿಕಂಠ ಸೇವಾ ಸಮಿತಿ ,ವಸಾಯಿ ಡಿ.13ರಂದು 22ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ.

Mumbai News Desk

ಚಿತ್ರಾಪು ಬಿಲ್ಲವರ ಸಂಘ ಮುಂಬಯಿ : ಸೆ. 28ರಂದು 80ನೇ ವಾರ್ಷಿಕ ಮಹಾಸಭೆ

Mumbai News Desk