32 C
Mumbai
March 7, 2026
Mumbai News Kannada
ಸುದ್ದಿ

ಖ್ಯಾತ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ನಿಧನ






ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಶ್ರೀಧರ್ ರಾವ್ ಶುಕ್ರವಾರ ಹೃದಯಘಾತದಿಂದ ನಿಧನ ಹೊಂದಿದರು. ಅವರಿಗೆ 76 ವರ್ಷ ವಯಸಾಗಿತ್ತು.


1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ನಾಯ್ಕಪುವಿನಲ್ಲಿ ಜನಿಸಿದ ಅವರು, 1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಬಾಲ ಕಲಾವಿದರಾಗಿ ಯಕ್ಷ ರಂಗ ಸೇರಿದ್ದರು.
ಬಳಿಕ ಕೂಡ್ಲು, ಮೂಲ್ಕಿ, ಕರ್ನಾಟಕ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಒಟ್ಟು 60 ವರ್ಷಗಳ ಕಲಾ ಸೇವೆಗೈದಿರುವರು.


ಕುಂಬ್ಳೆ ಅವರು ತೆಂಕುತಿಟ್ಟಿನ ಅಪ್ರತಿಮ ಸ್ತ್ರಿ ವೇಷದಾರಿಯಾಗಿ ಗಮನಸೆಳೆದಿದ್ದರು. ಅವರ ದಮಯಂತಿ, ದಾಕ್ಷಯಯಣಿ, ಲಕ್ಷ್ಮೀ, ಸುಭದ್ರೆ, ಸತ್ಯಭಾಮ, ಪ್ರಮೀಳಾ, ಶಶಿಪ್ರಭೆ ಅವರಿಗೆ ದೊಡ್ಡ ಮಟ್ಟದ ಹೆಸರು ಮಾಡಿತ್ತು. ಅವರ ಅಂಬಾ ರೂಪ ರೇಖಾ ಪ್ರಸಂಗದ ರಂಬೆಯ ಪಾತ್ರದ ಅಭಿನಯವನ್ನು ಯಕ್ಷ ಪ್ರೇಮಿಗಳು ಈಗಲೂ ನೆನಪಿಸುತ್ತಾರೆ.
ಪುರುಷ ವೇಷದಲ್ಲಿ ಈಶ್ವರ, ಲಕ್ಷ್ಮಣ, ಮತ್ತು ವಿಷ್ಣು ಪಾತ್ರಗಳೂ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.



Related posts

ಮುಂಬೈ : ದಾರಾವಿಯಲ್ಲಿ ನಕಲಿ ಮದ್ಯ ಜಾಲಪತ್ತೆ, 4.32ಲಕ್ಷ ರೂ. ಮೌಲ್ಯದ ನಕಲಿ ಸ್ಕಾಚ್ ವಶ

Mumbai News Desk

ಡಾ| ಆರ್ ಕೆ ಶೆಟ್ಟಿಯವರಿಗೆ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ

Mumbai News Desk

ದುಬಾಯಿಯಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡ ಯಕ್ಷಗಾನ ಅಭ್ಯಾಸ ತರಗತಿಯ ದಶಮಾನೋತ್ಸವ , ಸಂಭ್ರಮ

Mumbai News Desk

ಡಹಾಣೂವಿನ ಉದ್ಯಮಿ ಸಮಾಜಸೇವಕ ಅಶೋಕ್ ಎಸ್‌. ಶೆಟ್ಟಿ ಉಳೆಪಾಡಿ ಇವರಿಗೆ ವಿಶೇಷ ಸನ್ಮಾನ

Mumbai News Desk

ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ ರೆನೋಲ್ಡ್ ಪ್ರವೀಣ್ ಕುಮಾರ್ , ಕಾರ್ಯಕಾರಿ ಸಮಿತಿಗೆ ಬಿ ನಾಗರಾಜ ಆಯ್ಕೆ

Mumbai News Desk

ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಅವರ ಪತ್ನಿ ವಿಜಯಲಕ್ಷ್ಮೀ ರಾವ್ ನಿಧನ

Mumbai News Desk